ಆ್ಯಪ್ನಗರ

ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಬದಲಾವಣೆ: ಪ್ರತಿಭಟನೆ

ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದ ಎ.ವಸಂತಕುಮಾರ ಅವರ ಬದಲಾವಣೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಡಾ.ಬಿ.ಆರ್.ಅಂಬೇಡ್ಕರ್ ವತ್ತದಲ್ಲಿ ಬುಧವಾರ ಬಹತ್ ಪ್ರತಿಭಟನೆ ನಡೆಸಿದರು.

ವಿಕ ಸುದ್ದಿಲೋಕ 10 Nov 2016, 7:24 am
ರಾಯಚೂರು: ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದ ಎ.ವಸಂತಕುಮಾರ ಅವರ ಬದಲಾವಣೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಡಾ.ಬಿ.ಆರ್.ಅಂಬೇಡ್ಕರ್ ವತ್ತದಲ್ಲಿ ಬುಧವಾರ ಬಹತ್ ಪ್ರತಿಭಟನೆ ನಡೆಸಿದರು.
Vijaya Karnataka Web
ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಬದಲಾವಣೆ: ಪ್ರತಿಭಟನೆ


ನಗರದ ಶೆಟ್ಟಿಭಾವಿ ವತ್ತದಿಂದ ಅಂಬೇಡ್ಕರ್ ವತ್ತದವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದ ಕಾರ್ಯಕರ್ತರು, ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರನ್ನಾಗಿ ರಾಮಣ್ಣ ಇರಬಗೇರಾ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ನೇಮಕ ಮಾಡಿರುವುದು ಸರಿಯಲ್ಲ. ಪರಮೇಶ್ವರ ಅವರ ಅವಧಿ ಮುಗಿಯುವತನಕ ವಸಂತಕುಮಾರ ಅವರನ್ನೇ ಡಿಸಿಸಿ ಜಿಲ್ಲಾಧ್ಯಕ್ಷರನ್ನಾಗಿ ಮುಂದುವರಿಸಬೇಕು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬದಲಾವಣೆ ಇಲ್ಲದೇ ಇರುವಾಗ ಮೂರ‌್ನಾಲ್ಕು ಜಿಲ್ಲೆಗಳಲ್ಲಿ ಹೊಸ ನೇಮಕ ಮಾಡಿರುವುದು ಅನ್ಯಾಯ. ಎಂಎಲ್ಸಿ ಎನ್.ಎಸ್.ಬೋಸರಾಜು ಅವರ ಕುತಂತ್ರದಿಂದಲೇ ಈ ಬದಲಾವಣೆಯಾಗಿದೆ. ಆಂಧ್ರಪ್ರದೇಶದಿಂದ ವಲಸೆ ಬಂದಿರುವ ಬೋಸರಾಜು ಅವರದ್ದು, ಮೋಸದ ರಾಜಕೀಯ. ನಿಷ್ಠಾವಂತ ಕಾರ್ಯಕರ್ತರಿಗೆ ಅವರು ಯಾವುದೇ ಬೆಲೆ ನೀಡುವುದಿಲ್ಲ. ಅವರ ಮಾತಿಗೆ ಹೈಕಮಾಂಡ್ ಬೆಲೆ ಕೊಡಬಾರದು. ವಸಂತಕುಮಾರ್ ಅವರನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಕಾರ್ಯಕರ್ತರಾದ ಎಂ.ಕೆ.ಬಾಬರ್, ಹಾಜಿಬಾಬು, ಜೆ.ತಿಮ್ಮಪ್ಪ, ಪಿ.ಬೂದೆಪ್ಪ, ರಾಮಕಷ್ಣ, ನರಸಿಂಹಲು, ತೇಜಪ್ಪ, ರಾಮಸ್ವಾಮಿ, ಶೇಖ್ ಮಹೆಬೂಬ್ ಹುಸೇನ್. ಬಿ.ರಮೇಶ, ತಿಮ್ಮಾರೆಡ್ಡಿ, ನಾಗರಾಜ್, ಹನುಮಂತು, ಶಶಿರಾಜ, ಮಕ್ಬುಲ್ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ