ಆ್ಯಪ್ನಗರ

ಪೊಲೀಸರನ್ನೇ ಯಾಮಾರಿಸಿದ ‘ರಾಯಲ್ಟಿ’

ಕಣ್ಣೆದುರೇ ಕಳ್ಳರು ಸಿಕ್ಕರೂ ಅವರ ವಿರುದ್ಧ ಕ್ರಮ ಕೈಗೊಳ್ಳದೆ, ಅವರು ನೀಡುವ ಮಾಹಿತಿಗೆ ಕಾಯ್ದು ಬಳಿಕ ಸುಳ್ಳು ಮಾಹಿತಿಯನ್ನೇ ನಿಜವೆಂದು ನಂಬಿ ನಗರ ಠಾಣೆ ಪೊಲೀಸರೇ ಗುರುವಾರ ಯಾಮಾರಿದ್ದಾರೆ !

ವಿಕ ಸುದ್ದಿಲೋಕ 12 Nov 2016, 6:34 am
ಸಿಂಧನೂರು: ಕಣ್ಣೆದುರೇ ಕಳ್ಳರು ಸಿಕ್ಕರೂ ಅವರ ವಿರುದ್ಧ ಕ್ರಮ ಕೈಗೊಳ್ಳದೆ, ಅವರು ನೀಡುವ ಮಾಹಿತಿಗೆ ಕಾಯ್ದು ಬಳಿಕ ಸುಳ್ಳು ಮಾಹಿತಿಯನ್ನೇ ನಿಜವೆಂದು ನಂಬಿ ನಗರ ಠಾಣೆ ಪೊಲೀಸರೇ ಗುರುವಾರ ಯಾಮಾರಿದ್ದಾರೆ !
Vijaya Karnataka Web
ಪೊಲೀಸರನ್ನೇ ಯಾಮಾರಿಸಿದ ‘ರಾಯಲ್ಟಿ’


ನಗರದ ತಹಸಿಲ್ ಕಚೇರಿ ಎದುರು ಮಾನ್ವಿಯ ಆಲ್ದಾಳ ವೀರಭದ್ರಪ್ಪ ಎನ್ನುವವರಿಗೆ ಸೇರಿದ ಮರಳು ತುಂಬಿದ ಲಾರಿ ಸಿಕ್ಕಿ ಹಾಕಿಕೊಂಡಿತ್ತು. ಈ ಸಮಯದಲ್ಲಿ ಅನುಮಾನಾಸ್ಪದವಾಗಿ ಮರಳು ತುಂಬಿದ್ದರಿಂದ ಕೆಲವರು ಪಿಡಬ್ಲ್ಯುಡಿ ಹಾಗೂ ಪೊಲೀಸ್ ಇಲಾಖೆಯವರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಚಾಲಕನನ್ನು ವಿಚಾರಿಸಿದಾಗ, ‘ಮಾನ್ವಿಯಲ್ಲಿ ರಾಯಲ್ಟಿ ಇದೆ. ತರಿಸಿ ಕೊಡುತ್ತೇನೆ..’ಎಂದಿದ್ದಾನೆ. ಇದಾದ ಬಳಿಕ ಟ್ರಾಫಿಕ್ ಠಾಣೆಗೆ ಲಾರಿ ಕೊಂಡೊಯ್ಯಲಾಯಿತು. ಬೆಳಗ್ಗೆ ಹೋದ ಚಾಲಕ ರಾತ್ರಿ ಬಂದು ನಗರ ಠಾಣೆ ಪೊಲೀಸರಿಗೆ ರಾಯಲ್ಟಿ ತೋರಿಸಿದ್ದಾನೆ. ಇದನ್ನು ನಿಜವೆಂದು ನಂಬಿದ ಪೊಲೀಸರು ಹಾಗೆಯೇ ಬಿಟ್ಟು ಕಳುಹಿಸಿದ್ದಾರೆ. ಆದರೆ ಶುಕ್ರವಾರ ‘ವಿಕ’ಕ್ಕೆ ಲಭ್ಯವಾದ ದಾಖಲೆ ಪ್ರಕಾರ, ಪೊಲೀಸರಿಗೆ ನೀಡಿರುವ ರಾಯಲ್ಟಿ ನಕಲಿಯಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಹ ರಾಯಲ್ಟಿ ಕಂಡು ಬೆಚ್ಚಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ.

ಏನೇನಿದೆ? : ಮಾನ್ವಿ ತಾಲೂಕಿನ ಎಲೆಬಿಚ್ಚಾಲಿ ಸ್ಟಾಕ್‌ಯಾರ್ಡ್‌ನಿಂದ ಮರಳು ತುಂಬಿಕೊಂಡು ಬರಲಾಗಿದೆ. ಕೆಎ 36, ಬಿ3126 ಸಂಖ್ಯೆಯ ಲಾರಿಯಲ್ಲಿ ಸಾಗಿಸಿದ ಮರಳನ್ನು ವೈಟಿಪಿಎಸ್ ಕಾಮಗಾರಿಗೆಂದು ಪಡೆಯಲಾಗಿದೆ. ಆದರೆ, ಮಾನ್ವಿ ತಾಲೂಕಿನ ಸ್ಟಾಕ್‌ಯಾರ್ಡ್‌ಗೆ ಸಿಂಧನೂರು ಪಿಡಬ್ಲ್ಯುಡಿ ಇಲಾಖೆ ಕಚೇರಿಯಂದ ರಾಯಲ್ಟಿ ಪಡೆಯಲಾಗಿದೆ ಎಂಬ ದಾಖಲೆ ಒದಗಿಸಿರುವುದು ಅಚ್ಚರಿ ಮೂಡಿಸಿದೆ. ವೀರಭದ್ರಪ್ಪ ಆಲ್ದಾಳ ವರ್ಕ್ಸ್ ಕನ್ಸಸ್ಟ್ರಕ್ಷನ್ಸ್‌ನ ಮಾಲೀಕತ್ವದಲ್ಲಿ ರಾಯಲ್ಟಿ ಪಡೆದಿದ್ದು, ನ.9 ರಂದು ನೀಡಲಾಗಿದೆ. ಆದರೆ ಇದರಲ್ಲಿರುವ ಬಹುತೇಕ ಮಾಹಿತಿ ಸುಳ್ಳಾಗಿದೆ. ಪೊಲೀಸರಿಗೇ ಯಾಮಾರಿಸಲಾಗಿದೆಯೇ? ಲಾರಿಯ ಮಾಲೀಕ ಪ್ರಭಾವಿ ಎಂಬ ಕಾರಣಕ್ಕೆ ಹಾಗೆಯೇ ಬಿಡಲಾಗಿದೆಯೇ? ಎಂಬ ಅನುಮಾನ ಶುರುವಾಗಿದೆ.

ಟ್ರಾಫಿಕ್ ಠಾಣೆಯಲ್ಲಿ ಮರಳು ತುಂಬಿದ ಲಾರಿ ಕೊಂಡೊಯ್ದ ಸಂದರ್ಭದಲ್ಲಿ ಮರಳು ಅಳತೆ ಮಾಡಿದ್ದ ಪಿಡಬ್ಲ್ಯುಡಿ ಜೆ.ಇ. ಹುನುಗುಂದ, ಅದರ ಮೌಲ್ಯ 10 ಸಾವಿರಕ್ಕೂ ಮೇಲ್ಪಟ್ಟು ಇದೆ ಎಂದು ತಿಳಿಸಿದ್ದರು. ಆದರೆ ಪೊಲೀಸರಿಗೆ ತೋರಿಸಿರುವ ರಾಯಲ್ಟಿಯಲ್ಲಿ ಕೇವಲ 7000 ರೂ. ಎಂದು ಇದೆ. ರಾಯಲ್ಟಿಯನ್ನೇ ನಕಲು ಮಾಡಿ ನೀಡಿರುವುದು ಸ್ಪಷ್ಟವಾಗಿದೆ.

----
ಈ ರಾಯಲ್ಟಿ ನೋಡಿದಾಗ ನನಗೆ ಅಚ್ಚರಿಯಾಗಿದೆ. ಗುರುವಾರ ನಾನು ಊರಲ್ಲಿ ಇರಲಿಲ್ಲ. ನಮ್ಮ ಸಿಬ್ಬಂದಿಗೆ ಹೋಗಿ ಪರಿಶೀಲಿಸುವಂತೆ ಹೇಳಿದ್ದೆ. ರಾಯಲ್ಟಿ ನೋಡಿದ ಮೇಲೆ ನಕಲಿ ಎಂಬುದು ಗೊತ್ತಾಗಿದೆ. ನಮ್ಮ ಕಚೇರಿಯ ಸ್ಟ್ಯಾಂಪ್ ದುರ್ಬಳಕೆಯಾಗಿದೆ. ಎಲೆಬಿಚ್ಚಾಲಿ ಸ್ಟಾಕ್‌ಯಾರ್ಡ್ ಮಾನ್ವಿ ತಾಲೂಕಿನಲ್ಲಿ ಇದೆ. ಈ ಕುರಿತು ದೂರು ದಾಖಲಿಸುವೆ.

-ವೆಂಕಟರಮಣ, ಪಿಡಬ್ಲ್ಯುಡಿ, ಎಇಇ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ