ಹಟ್ಟಿಚಿನ್ನದಗಣಿ; ಸ್ಥಳೀಯ ಗ್ರಾಮ ಪಂಚಾಯಿತಿಗೆ 2016-17ನೇ ಸಾಲಿಗಾಗಿ ಬರಬೇಕಾಗಿದ್ದ ನಾನಾ ವಸತಿ ಯೋಜನೆಯ ಮನೆಗಳು ಅಲಾಟ್ಮೆಂಟ್ ಮಾಡದಿದ್ದರಿಂದ ಗ್ರಾ.ಪಂ. ಅಧ್ಯಕ್ಷ , ಸದಸ್ಯರು ಸಿಇಒಗೆ ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಮನವಿ ಮೇರೆಗೆ ಸಿಇಒ ರಾಜೀವಗಾಂಧಿ ವಸತಿ ನಿಗಮಕ್ಕೆ ಪತ್ರ ಬರೆದಿದ್ದಾರೆ.
ನಾನಾ ವಸತಿ ಯೋಜನೆಗಳಾದ ಪ್ರಧಾನ ಮಂತ್ರಿ ಅವಾಸ್, ಬಸವ ವಸತಿ, ಅಂಬೇಡ್ಕರ್ ವಸತಿ ಸೇರಿದಂತೆ ಇತರೆ ಯೋಜನೆಗಳ 2016-17ನೇ ಸಾಲಿನ ಮನೆಗಳು ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಅಲಾಟ್ಮೆಂಟ್ ಆಗಿ ಪಲಾನುಭವಿಗಳ ಯಾದಿಯನ್ನು ಸಹ ಅನುಮೋದನೆಗೆ ಕಳಿಸಲಾಗಿದೆ. ಹಟ್ಟಿ ಗ್ರಾ.ಪಂ.ಗೆ ಮಾತ್ರ ಮನೆಗಳನ್ನು ಅಲಾಟ್ಮೆಂಟ್ ಮಾಡಿಲ್ಲ. ಇದು ಸದಸ್ಯರಲ್ಲಿ ತಳಮಳ ಮೂಡಿಸಿದೆ.
ಗ್ರಾ.ಪಂ.ಅಧ್ಯಕ್ಷ ರ ನೇತೃತ್ವದಲ್ಲಿ ಸದಸ್ಯರು ಕಳೆದ ತಿಂಗಳು ಜಿ.ಪಂ.ಸಿಇಒರನ್ನು ಭೇಟಿಯಾಗಿ, ಮನೆಗಳ ಅಲಾಟ್ಮೆಂಟ್ಗೆ ಕ್ರಮಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದರು. ಸಿಇಒ ಮನವಿಗೆ ಸ್ಪಂದಿಸಿ ನ.11 ರಂದು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಪತ್ರ ಬರೆದಿದ್ದಾರೆ.
ಪ್ರಸಕ್ತ ಸಾಲಿನ ನಾನಾ ವಸತಿ ಯೋಜನೆಗಳ ಮನೆಗಳು ನಮ್ಮ ಪಂಚಾಯಿತಿಗೆ ಇನ್ನೂ ಅಲಾಟ್ಮೆಂಟ್ ಆಗಿಲ್ಲ. ಕಾರಣವೇನೆಂಬುದು ಗೊತ್ತಾಗಿಲ್ಲ. ಮನೆಗಳು ಅಲಾಟ್ಮೆಂಟ್ ಆಗದಿರುವ ಬಗ್ಗೆ ಪಂಚಾಯಿತಿಯಿಂದ ಜಿ.ಪಂ. ಸಿಇಒಗೆ ಪತ್ರ ಬರೆದಿದ್ದಲ್ಲದೆ, ಮನವಿ ಸಲ್ಲಿಸಲಾಗಿತ್ತು. ಈಗ ಸಿಇಒ ಅವರು ನಿಗಮಕ್ಕೆ ಪತ್ರ ಬರೆದಿದ್ದಾರೆ. ಈ ತಿಂಗಳ ಅಂತ್ಯದೊಳಗೆ ಮನೆಗಳು ಅಲಾಟ್ಮೆಂಟ್ ಆಗುವ ಭರವಸೆ ಇದೆ.
-ಶಂಕರಗೌಡ ಬಳಗಾನೂರು, ಅಧ್ಯಕ್ಷ , ಗ್ರಾ.ಪಂ. ಹಟ್ಟಿ.