ಆ್ಯಪ್ನಗರ

ಚಲಿಸುತ್ತಿದ್ದ ವಾಹನದಿಂದ ಹಾರಿದ ವಿದ್ಯಾರ್ಥಿನಿಯರಿಗೆ ಗಾಯ

ತಮ್ಮ ಶಾಲೆಯ ಬಳಿ ಚಾಲಕ, ವಾಹನ ನಿಲ್ಲಿಸದ್ದರಿಂದ ಆತಂಕಗೊಂಡ ನಾಲ್ವರು ವಿದ್ಯಾರ್ಥಿನಿಯರು, ಚಲಿಸುತ್ತಿದ್ದ ಟಾಟಾ ಏಸ್‌ನಿಂದ ಹೊರಗೆ ಹಾರಿ ಗಾಯಗೊಂಡ ಘಟನೆ ಸಮೀಪದ ಮೆದಕಿನಾಳ ಗ್ರಾಮದಲ್ಲಿ ಗುರುವಾರ ನಡೆದಿದೆ.

ವಿಕ ಸುದ್ದಿಲೋಕ 25 Nov 2016, 7:34 am
ಮಸ್ಕಿ (ರಾಯಚೂರು): ತಮ್ಮ ಶಾಲೆಯ ಬಳಿ ಚಾಲಕ, ವಾಹನ ನಿಲ್ಲಿಸದ್ದರಿಂದ ಆತಂಕಗೊಂಡ ನಾಲ್ವರು ವಿದ್ಯಾರ್ಥಿನಿಯರು, ಚಲಿಸುತ್ತಿದ್ದ ಟಾಟಾ ಏಸ್‌ನಿಂದ ಹೊರಗೆ ಹಾರಿ ಗಾಯಗೊಂಡ ಘಟನೆ ಸಮೀಪದ ಮೆದಕಿನಾಳ ಗ್ರಾಮದಲ್ಲಿ ಗುರುವಾರ ನಡೆದಿದೆ.
Vijaya Karnataka Web
ಚಲಿಸುತ್ತಿದ್ದ ವಾಹನದಿಂದ ಹಾರಿದ ವಿದ್ಯಾರ್ಥಿನಿಯರಿಗೆ ಗಾಯ


ಚೈತ್ರಾ ಹಾಗೂ ಸುಜಾತ ಗಂಭೀರ ಗಾಯಗೊಂಡಿದ್ದು, ಬಾಗಲಕೋಟ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾವ್ಯಾ ಹಾಗೂ ರಂಗಮ್ಮ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ವಿದ್ಯಾರ್ಥಿನಿಯರು, ಮೆದಕಿನಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾರೆ. ಬೈಲಗುಡ್ಡ ಗ್ರಾಮದಿಂದ ಮೆದಕಿನಾಳ ಗ್ರಾಮಕ್ಕೆ ನಿತ್ಯ ನಡೆದುಕೊಂಡೇ ಬರುತ್ತಿದ್ದರು. ಗುರುವಾರ ಎಂದಿನಂತೆ ಶಾಲೆಗೆ ಹೊರಟಾಗ ಮಾರ್ಗ ಮಧ್ಯೆ ಬಂದ ಟಾಟಾ ಏಸ್ ನಿಲ್ಲಿಸಿದ್ದರಿಂದ ಅದರಲ್ಲಿ ಪ್ರಯಾಣಿಸುತ್ತಿದ್ದರು. ಶಾಲೆ ಸಮೀಪಿಸುತ್ತಿದ್ದಂತೆ ವಾಹನ ನಿಲ್ಲಿಸುವಂತೆ ಚಾಲಕನಿಗೆ ಕೋರಿದರೂ ಅವನು, ಹಾಗೆ ಚಲಾಯಿಸಿದ್ದಾನೆ. ಇದರಿಂದ ಗಾಬರಿಗೊಂಡ ವಿದ್ಯಾರ್ಥಿನಿಯರು, ವಾಹನದಿಂದ ಏಕಾಏಕಿ ಹೊರಗೆ ಹಾರಿದ್ದಾರೆ. ಚಾಲಕ ಪರಾರಿಯಾಗಿದ್ದಾನೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ