ದೇವದುರ್ಗ: 500 ಹಾಗೂ 1000 ರೂ. ಮುಖ ಬೆಲೆಯ ನೋಟು ಚಲಾವಣೆ ರದ್ದುಗೊಳಿಸಿರುವ ಕೇಂದ್ರ ಸರಕಾರದ ಕ್ರಮ ಖಂಡಿಸಿ, ಕಾಂಗ್ರೆಸ್ನಿಂದ ನಗರದಲ್ಲಿ ಸೋಮವಾರ ಆಕ್ರೋಶ್ ದಿವಸ ಆಚರಿಸಲಾಯಿತು.
ಆರ್ಡಿಸಿಸಿ ಬ್ಯಾಂಕ್ ಮಾಜಿ ಜಿಲ್ಲಾಧ್ಯಕ್ಷ ಎ.ರಾಜಶೇಖರ ನಾಯಕ ನೇತೃತ್ವದಲ್ಲಿ ಇಲ್ಲಿನ ತಹಸೀಲ್ದಾರ್ ಶಿವಶರಣಪ್ಪ ಕಟ್ಟೊಳ್ಳಿ ಮುಖಾಂತರ ಕಾರ್ಯಕತರು ರಾಷ್ಟ್ರಪತಿಗೆ ಸೋಮವಾರ ಮನವಿ ರವಾನಿಸಿದರು. ಪೂರ್ವ ತಯಾರಿ ಇಲ್ಲದೇ ಹಠಾತ್ ನೋಟು ಚಲಾವಣೆ ಸ್ಥಗಿತಗೊಳಿಸಿರುವ ಕೇಂದ್ರ ಸರಕಾರ ಬಡವ, ಸಣ್ಣಪುಟ್ಟ ವ್ಯಾಪಾರಸ್ಥರ ಜೀವನ ದಿಕ್ಕುತಪ್ಪಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧ್ಯಕ್ಷ ಭೀಮನಗೌಡ ನಾಗಡದಿನ್ನಿ, ಅರಕೇರಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸಯ್ಯ ಶಾಖೆ, ಬಸವರಾಜ ಬಂಡೆಗುಡ್ಡ, ರಾಜಚಂದ್ರಹಾಸ ನಾಯಕ, ಮಲ್ಲಿಕಾರ್ಜುನ್ ಪಾಟೀಲ್, ನಾಗರಾಜ ಗೂಗಿ, ಮಹದೇವಪ್ಪ ಪಾಟೀಲ್ ಚಿಕ್ಕಬೂದುರು, ವೆಂಕಟೇಶ ದೊರೆ ರಾಮದುರ್ಗ, ಬಾಷಾ ಕವಾಸ, ಶಿವನಗೌಡ ಗೌರಂಪೇಟ್, ಭೀಮರೆಡ್ಡಿ ನಾಯಕ, ಸಿದ್ದಪ್ಪ ಮಜ್ಗಿ, ಹುಸೇನ ಸಾಬ್, ನಿಲವಂಜಿ, ಕಾಸಿಂಸಾಬ್, ಮುನ್ನಾಬೈ, ಅಮೀನ್ಬಾಷಾ, ಇಕ್ಬಾಲ್ ಸಾಬ್ ಇದ್ದರು.