ಆ್ಯಪ್ನಗರ

ಚಿನ್ನದ ಅದಿರು ಕಳ್ಳತನ: ಅಧಿಕಾರಿ ಸೇರಿ ಇಬ್ಬರ ವಿರುದ್ಧ ಕೇಸ್

ಇಲ್ಲಿನ ಚಿನ್ನದಗಣಿ ಕಂಪನಿಯಲ್ಲಿ ಚಿನ್ನದ ಅದಿರು ಕಳ್ಳತನಕ್ಕೆ ಸಂಬಂಧಿಸಿದಂತೆ ಅಧಿಕಾರಿ ಸೇರಿ ಇಬ್ಬರ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ವಿಕ ಸುದ್ದಿಲೋಕ 8 Mar 2017, 8:15 am
ಹಟ್ಟಿಚಿನ್ನದಗಣಿ (ರಾಯಚೂರು): ಇಲ್ಲಿನ ಚಿನ್ನದಗಣಿ ಕಂಪನಿಯಲ್ಲಿ ಚಿನ್ನದ ಅದಿರು ಕಳ್ಳತನಕ್ಕೆ ಸಂಬಂಧಿಸಿದಂತೆ ಅಧಿಕಾರಿ ಸೇರಿ ಇಬ್ಬರ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
Vijaya Karnataka Web
ಚಿನ್ನದ ಅದಿರು ಕಳ್ಳತನ: ಅಧಿಕಾರಿ ಸೇರಿ ಇಬ್ಬರ ವಿರುದ್ಧ ಕೇಸ್


ಅನ್ವೇಷಣಾ ವಿಭಾಗದ ಅಧಿಕಾರಿ ಗಣೇಶ್ ಆರ್.ಬಿ. ಹಾಗೂ ನೌಕರ ಸಂಗಣ್ಣ ಅವರು, ಸೋಮವಾರ ಮಧ್ಯಾಹ್ನ ಅತಿ ಹೆಚ್ಚು ಚಿನ್ನದ ನಿಕ್ಷೇಪ ಹೊಂದಿರುವ 2 ಕೆ.ಜಿ. 33 ಗ್ರಾಂ ಅದಿರನ್ನು ಮಲ್ಲಪ್ಪ ಶಾಫ್ಟ್ ಭೂಕೆಳಮೈಯ 21ನೇ ಲೆವಲ್‌ನಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡದೇ ಶಾಫ್ಟ್‌ನ ಮುಖ್ಯದ್ವಾರಕ್ಕೆ ತಂದಿದ್ದರು.

ಅನುಮಾನಗೊಂಡ ಮುಖ್ಯದ್ವಾರದ ಭದ್ರತಾ ಸಿಬ್ಬಂದಿ, ಉಭಯ ಸಿಬ್ಬಂದಿಯನ್ನು ವಿಚಾರಣೆ ನಡೆಸಿದರು. ಕಳ್ಳತನದ ಶಂಕೆಯೊಂದಿಗೆ ಭದ್ರತಾ ಸಿಬ್ಬಂದಿ, ಮೇಲಧಿಕಾರಿಗಳ ಗಮನಕ್ಕೆ ತಂದರು. 48 ಸಾವಿರ ರೂ. ಮೌಲ್ಯದ ಚಿನ್ನದ ಅದಿರನ್ನು ಲೋಹ ವಿಭಾಗದ ಆಸ್ಸೆ ಲ್ಯಾಬ್‌ಗೆ ತೆಗೆದುಕೊಂಡು ಹೋಗದೇ ಮುಖ್ಯದ್ವಾರ ಬಳಿ ತಂದಿದ್ದರು. ಇವರಿಬ್ಬರು ಅದಿರು ಕಳ್ಳತನಕ್ಕೆ ಯತ್ನಿಸಿದ್ದಾರೆ ಎಂದು ಗಣಿ ಕಂಪನಿ ಪ್ರಧಾನ ವ್ಯವಸ್ಥಾಪಕ (ಸಮನ್ವಯ) ಡಾ.ಪ್ರಭಾಕರ ಸಂಗೂರಮಠ ಅವರು ದೂರು ನೀಡಿದ್ದಾರೆ. ಈ ದೂರು ಆಧರಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ಪಿಎಸ್‌ಐ ಶೈಲಾ ಪ್ಯಾಟಿಶೆಟ್ಟರ್ ತಿಳಿಸಿದ್ದಾರೆ.

................
*ತನಿಖೆಗೆ ಸಮಿತಿ ರಚನೆ

ಪ್ರಕರಣದ ತನಿಖೆ ನಡೆಸಿ ಸಮಗ್ರ ವರದಿ ಸಲ್ಲಿಸಲು ಕಂಪನಿಯ ಹಿರಿಯ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಕಂಪನಿಯ ಕಾನೂನಿನ್ವರಯ ಈಗಾಗಲೆ ಶಿಸ್ತು ಕ್ರಮ ಜರುಗಿಸಲಾಗಿದೆ. ಕರ್ತವ್ಯ ನಿರ್ಲಕ್ಷ್ಯ ಆರೋಪ ಆಧರಿಸಿ ಭದ್ರತಾ ಅಧಿಕಾರಿಯೊಬ್ಬರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ಗಣಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ