ಹಟ್ಟಿಚಿನ್ನದಗಣಿ: ಸಮೀಪದ ಬಂಡೆಬಾವಿ ಹತ್ತಿರದ ದೇವಾಪುರ ದೊಡ್ಡಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷ ಕರು, ಮಕ್ಕಳು ಶಾಲೆಗೆ ಕುಡಿವ ನೀರು, ವಿದ್ಯುತ್, ಕಾಂಪೌಂಡ್ ಸೇರಿದಂತೆ ಇತರ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಶಾಸಕ ಮಾನಪ್ಪ ವಜ್ಜಲ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಾನಾ ದೊಡ್ಡಿಗಳಲ್ಲಿ ಎಸ್ಸಿಪಿ ಹಾಗೂ ಟಿಎಸ್ಪಿ ಯೋಜನೆಯಲ್ಲಿ ಬೋರ್ವೆಲ್ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಗೆ ಚಾಲನೆ ನೀಡಲು ಗುರುವಾರ ಆಗಮಿಸಿದ್ದ ಸಂದರ್ಭದಲ್ಲಿ ಶಾಲೆಯ ಶಿಕ್ಷ ಕರು, ಶಾಲಾ ಮಕ್ಕಳು ಮನವಿ ಸಲ್ಲಿಸಿದರು. ಶಾಲೆ ಆರಂಭವಾಗಿ ಆರು ವರ್ಷವಾದರೂ ಕುಡಿವ ನೀರಿನ ಸೌಕರ್ಯ ಕಲ್ಪಿಸಿಲ್ಲ. ಇದರಿಂದಾಗಿ ಬಿಸಿಯೂಟ ಅಡುಗೆ ತಯಾರಿಕೆಗೆ ಹಾಗೂ ಮಕ್ಕಳಿಗೆ ನೀರು ಕುಡಿಯಲು ತೊಂದರೆಯಾಗಿದೆ. ಶಾಲೆ ಗುಡ್ಡಗಾಡು ಪ್ರದೇಶದಲ್ಲಿದ್ದು ಸುತ್ತುವರಿದು ಕಾಂಪೌಂಡ್ ನಿರ್ಮಾಣ ಮಾಡಬೇಕು ಹಾಗೂ ವಿದ್ಯುತ್ ಸೌಕರ್ಯವನ್ನು ಶಾಲೆಗೆ ಒದಗಿಸಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಶಾಸಕ ಮಾನಪ್ಪ ವಜ್ಜಲ್ ಪ್ರತಿಕ್ರಿಯಿಸಿ, ದೊಡ್ಡಿ ಮಕ್ಕಳು ಶಿಕ್ಷ ಣದಿಂದ ವಂಚಿತರಾಗಬಾರದೆಂದು ಶಾಲೆಗಳನ್ನು ಆರಂಭಿಸಲಾಗಿದೆ. ಹಂತ ಹಂತವಾಗಿ ಅವಶ್ಯಕ ಎಲ್ಲ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದೆಂದು ತಿಳಿಸಿದರು. ಗುರುಗುಂಟಾ ಎಪಿಎಂಸಿ ನಿರ್ದೇಶಕ ರಾಜಾ ಸೋಮನಾಥ ನಾಯಕ, ವಾಲ್ಮೀಕಿ ನಾಯಕ ಸಂಘದ ತಾಲೂಕು ಅಧ್ಯಕ್ಷ ನಂದೇಶ ನಾಯಕ ಜೆಡಿಎಸ್ ಮುಖಂಡರಾದ ಗೋವಿಂದ ನಾಯಕ, ಗಿರಿಮಲ್ಲನಗೌಡ, ಎಸ್.ಸೋಮನಾಥ ನಾಯಕ ಇನ್ನಿತರರಿದ್ದರು.