ಆ್ಯಪ್ನಗರ

ಬ್ರಿಗೇಡ್ ಕಾರ್ಯಕ್ರಮ : ಈಶ್ವರಪ್ಪ ಗೈರು

ಮಾಜಿ ಸಿಎಂ ಯಡಿಯೂರಪ್ಪ ಅವರು ನಡೆಸುತ್ತಿರುವ ಬರ ಪರಿಶೀಲನೆ ಪ್ರವಾಸಕ್ಕೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಗೈರು ಹಾಜರಾಗಿದ್ದರೆ, ರಾಯಣ್ಣ ಬ್ರಿಗೇಡ್‌ನ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದರು.

ವಿಕ ಸುದ್ದಿಲೋಕ 31 May 2017, 7:54 am
ರಾಯಚೂರು: ಮಾಜಿ ಸಿಎಂ ಯಡಿಯೂರಪ್ಪ ಅವರು ನಡೆಸುತ್ತಿರುವ ಬರ ಪರಿಶೀಲನೆ ಪ್ರವಾಸಕ್ಕೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಗೈರು ಹಾಜರಾಗಿದ್ದರೆ, ರಾಯಣ್ಣ ಬ್ರಿಗೇಡ್‌ನ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದರು.
Vijaya Karnataka Web
ಬ್ರಿಗೇಡ್ ಕಾರ್ಯಕ್ರಮ : ಈಶ್ವರಪ್ಪ ಗೈರು


ನಗರದಲ್ಲಿ ರಾಯಣ್ಣ ಬ್ರಿಗೇಡ್ ರಾಜ್ಯ ಅಭ್ಯಾಸ ವರ್ಗ ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ರಾಯಣ್ಣ ಬ್ರಿಗೇಡ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ , ಬಂಡೇಶ್ ವಲ್ಕಂದಿನ್ನಿ ಮತ್ತಿತರರು ಮಾಜಿ ಸಿಎಂ ಯಡಿಯೂರಪ್ಪ ಅವರ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು. ಬ್ರಿಗೇಡ್‌ನಲ್ಲಿ ಗುರುತಿಸಿಕೊಂಡ ನಾಯಕರಿಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯದಿರುವುದು ಪಕ್ಷದ ಆಂತರಿಕ ಕಲಹ ಸಾರುವಂತ್ತಿತ್ತು.

........
ತರಾತುರಿಯಲ್ಲಿ ಪರಿಶೀಲನೆ: ರಾಯಚೂರು: ಜಿಲ್ಲೆಯಲ್ಲಿ ಬರ ಪರಿಸ್ಥಿತಿಯನ್ನು ಅರಿಯಲು ನಾನಾ ಕಡೆಗೆ ಭೇಟಿ ನೀಡಿದ ಮಾಜಿ ಸಿಎಂ ಯಡಿಯೂರಪ್ಪ ಬರ ಪರಿಶೀಲನೆ ಬದಲು ಮಾನ್ವಿಯಲ್ಲಿನ ಜನಸಂಪರ್ಕ ಅಭಿಯಾನ ಮತ್ತು ಪಕ್ಷದ ಕಾರ್ಯಕರ್ತರ ಸಭೆಗೆ ಹೆಚ್ಚಿನ ಮಹತ್ವ ನೀಡಿದ್ದು, ಗಮನ ಸೆಳೆಯಿತು. ತರಾತುರಿಯಲ್ಲಿ ರಸ್ತೆಯ ಬದಿಯ ಹೊಲಗಳಿಗೆ ತೆರಳಿ ವೀಕ್ಷಣೆ ಮಾಡಿದಂತೆ ತೋರಿ ಹೊರಟರು. ಬೆಳಗ್ಗೆ 11.30ಕ್ಕೆ ಮಾನ್ವಿಗೆ ಹೊರಟ ಮಾಜಿ ಸಿಎಂ ಬಿಎಸ್‌ವೈ ಕಲ್ಲೂರು, ಕುರ್ಡಿ ಮತ್ತಿತರೆಡೆ ಕಾಟಾಚಾರಕ್ಕೆ ಹೊಲಗಳಿಗೆ ತೆರಳಿ ವೀಕ್ಷಣೆ ಶಾಸ್ತ್ರ ಮುಗಿಸಿದರು. ಹಿಂಗಾರು ಹಂಗಾಮಿನಲ್ಲಿ ಬೆಳೆ ಬೆಳೆಯದೇ ರೈತರು ಹೊಲಗಳನ್ನು ಹಾಗೆಯೇ ಬಿಟ್ಟಿದ್ದು, ಬರ ತೀವ್ರತೆ ಕಾಣುವುದು ಅಸಾಧ್ಯ ಎಂದು ಪಕ್ಷದ ಕೆಲವರು ಹೇಳಿದ್ದರಿಂದ ಮಾಜಿ ಸಿಎಂ ಬಿಎಸ್‌ವೈ, ಜನಪಸಂಪರ್ಕ ಅಭಿಯಾನದ ಕಡೆಗೆ ತಿರುಗಿದರು.

........
ಬೆಂಗಾವಲು ವಾಹನ ಪಲ್ಟಿ

ಸಿಂಧನೂರು: ತಾಲೂಕಿನ ತುರುವಿಹಾಳ ಹತ್ತಿರದ ರಾಘವೇಂದ್ರಕ್ಯಾಂಪ್‌ನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬೆಂಗಾಲು ವಾಹನ ಪಲ್ಟಿಯಾದ ಘಟನೆ ಸೋಮವಾರ ರಾತ್ರಿ ನಡೆದಿದೆ. ರಾಯಚೂರಿಗೆ ತೆರಳುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ವಾಹನ ಪಲ್ಟಿಯಾಗಿದ್ದನ್ನು ಕಂಡ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆಯವರು ಕೂಡಲೇ ಗಾಯಾಳುಗಳಾದ ಎಎಸ್‌ಐ ನಾಗೇಂದ್ರಪ್ಪ ಹಾಗೂ ಇನ್ನಿಬ್ಬರನ್ನು ಸಿಂಧನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಕುರಿತು ತುರುವಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ