ಆ್ಯಪ್ನಗರ

ವಿದ್ಯುತ್ ಉತ್ಪಾದನೆ ಕೇಂದ್ರಗಳಿಗೆ ಕೆಪಿಸಿ ಎಂಡಿ ಭೇಟಿ

ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ ನಾಯಕ ಅವರು ಶುಕ್ರವಾರ ಶಕ್ತಿನಗರದ ಆರ್‌ಟಿಪಿಎಸ್ ಮತ್ತು ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಿಕ ಸುದ್ದಿಲೋಕ 22 Jul 2017, 7:54 am
ರಾಯಚೂರು: ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ ನಾಯಕ ಅವರು ಶುಕ್ರವಾರ ಶಕ್ತಿನಗರದ ಆರ್‌ಟಿಪಿಎಸ್ ಮತ್ತು ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web
ವಿದ್ಯುತ್ ಉತ್ಪಾದನೆ ಕೇಂದ್ರಗಳಿಗೆ ಕೆಪಿಸಿ ಎಂಡಿ ಭೇಟಿ


ಬೆಂಗಳೂರಿನಿಂದ ಹೈದರಾಬಾದ್ ಮೂಲಕ ಶಕ್ತಿನಗರಕ್ಕೆ ಆಗಮಿಸಿದ ಅವರು, ಮೊದಲಿಗೆ ವೈಟಿಪಿಎಸ್ ಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ವಿದ್ಯುತ್ ಕೇಂದ್ರದ ಒಂದು ಮತ್ತು ಎರಡನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ, ತಾಂತ್ರಿಕ ಸಮಸ್ಯೆಗಳ ನಿವಾರಣೆ ಸಂಬಂಧಿಸಿ ಅಧಿಕಾರಿಗಳು ಅವರಿಗೆ ವಿವರಿಸಿದರು ಎಂದು ಮೂಲಗಳು ಹೇಳಿವೆ.ಅದೇ ರೀತಿ ವಿದ್ಯುತ್ ಕೇಂದ್ರದ ರೈಲು ಮಾರ್ಗ ಸಂಪರ್ಕ ಕಲ್ಪಿಸುವುದು, ನೀರಿನ ಪೂರೈಕೆ, ಹಾರುಬೂದಿ ನಿರ್ವಹಣೆ ಸೇರಿದಂತೆ ನಾನಾ ಸೌಲಭ್ಯಗಳ ನಿರ್ಮಾಣದ ಬಗ್ಗೆ ಸಮಾಲೋಚಿಸಿದರು. ನಂತರ ಅವರು ಆರ್‌ಟಿಪಿಎಸ್ ಗೆ ಭೇಟಿ ನೀಡಿ ಘಟಕಗಳ ಕಾರ್ಯ ನಿರ್ವಹಣೆ ಮತ್ತು ಕಲ್ಲಿದ್ದಲಿನ ಪೂರೈಕೆ ಬಗ್ಗೆ ದೀರ್ಘವಾಗಿ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.ಈ ಸಂದರ್ಭ ಆರ್‌ಟಿಪಿಎಸ್ ಇಡಿ ವೇಣುಗೋಪಾಲ್, ಚೀಫ್ ಎಂಜಿನಿಯರ್ ಹನುಮಂತಪ್ಪ, ವೈಟಿಪಿಎಸ್ ಚೀಫ್ ಎಂಜಿನಿಯರ್ ಲಕ್ಷ್ಮಣ ಕಬಾಡೆ ಸೇರಿ ಕೆಪಿಸಿ ಅಧಿಕಾರಿಗಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ