ಆ್ಯಪ್ನಗರ

ವಿದ್ಯುತ್ ಪೂರೈಕೆಗೆ ಕ್ರಮ: ಡಿಕೆಶಿ ಭರವಸೆ

ರಾಜ್ಯದಲ್ಲಿ ಈಗಾಗಲೇ ಬರ ಇರುವುದರಿಂದ ಬಹುತೇಕ ಜಲಾಶಯಗಳ ಒಳಹರಿವು ಕಡಿಮೆಯಾಗಿದೆ. ಈ ತಿಂಗಳು ಮಳೆಯಾದರೆ, ಪರಿಸ್ಥಿತಿ ಸುಧಾರಿಸುತ್ತದೆ. ಬರ ಬಿಗಡಾಯಿಸಿದರೆ, ವಿದ್ಯುತ್ ಕೊರತೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ ಹೇಳಿದರು.

ವಿಕ ಸುದ್ದಿಲೋಕ 13 Aug 2017, 7:58 am
ರಾಯಚೂರು: ರಾಜ್ಯದಲ್ಲಿ ಈಗಾಗಲೇ ಬರ ಇರುವುದರಿಂದ ಬಹುತೇಕ ಜಲಾಶಯಗಳ ಒಳಹರಿವು ಕಡಿಮೆಯಾಗಿದೆ. ಈ ತಿಂಗಳು ಮಳೆಯಾದರೆ, ಪರಿಸ್ಥಿತಿ ಸುಧಾರಿಸುತ್ತದೆ. ಬರ ಬಿಗಡಾಯಿಸಿದರೆ, ವಿದ್ಯುತ್ ಕೊರತೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ ಹೇಳಿದರು.
Vijaya Karnataka Web
ವಿದ್ಯುತ್ ಪೂರೈಕೆಗೆ ಕ್ರಮ: ಡಿಕೆಶಿ ಭರವಸೆ


ಶಕ್ತಿನಗರದ ಶಕ್ತಿ ಕೇಂದ್ರ ಅತಿಥಿ ಗಹದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಬರ ನಿವಾರಿಸಲು ತುರ್ತಾಗಿ 1 ಸಾವಿರ ಮೆಗಾವ್ಯಾಟ್ ಖರೀದಿಗೆ ಅಲ್ಪಾವಧಿ ಟೆಂಡರ್ ಕರೆಯಲಾಗುತ್ತಿದೆ. ರಾಜ್ಯದಲ್ಲಿ 10 ಸಾವಿರ ಮೆಗಾವ್ಯಾಟ್‌ಗಿಂತ ಹೆಚ್ಚು ಬೇಡಿಕೆಯಿದೆ. 8ರಿಂದ 8.5 ಸಾವಿರ ಮೆಗಾವ್ಯಾಟ್ ವಿದ್ಯುತ್ ಪೂರೈಸುವ ಸಾಮರ್ಥ್ಯ ಈಗಾಗಲೇ ಹೊಂದಿದ್ದೇವೆ ಎಂದರು.

ಬಿಟಿಪಿಎಸ್‌ಗೆ ನೀರು : ಬಳ್ಳಾರಿ ಬಿಟಿಪಿಎಸ್ ಕೇಂದ್ರದಲ್ಲಿ ಎದುರಾಗುವ ನೀರಿನ ಸಮಸ್ಯೆ ನಿವಾರಿಸಲು 200 ಕಿ.ಮೀ ಅಂತರದ ಕೃಷ್ಣಾನದಿಯಿಂದ ನೀರು ತರಲು 1 ಸಾವಿರ ಕೋಟಿ ರೂ.ವೆಚ್ಚ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಕಳೆದ 4 ವರ್ಷದಿಂದ ಆರ್‌ಟಿಪಿಎಸ್ ಉತ್ತಮ ಕಾರ್ಯನಿರ್ವಹಣೆ ತೋರಿದೆ. ವೈಟಿಪಿಎಸ್‌ನಲ್ಲಿ ಕೆಲ ಸಮಸ್ಯೆಗಳಿದ್ದು, ನಿವಾರಣೆಯಾಗಲಿವೆ ಎಂದರು. ಈ ಮೊದಲು ದಿನ ಅಥವಾ ಎರಡು ದಿನಗಳಿಗಾಗುವಷ್ಟು ಮಾತ್ರ ಕಲ್ಲಿದ್ದಲ್ಲು ಸಂಗ್ರಹ ಮಾಡಲಾಗುತ್ತಿತ್ತು. ಈಗ ಐದು ದಿನಗಳಿಗಾಗುವಷ್ಟು ಸಂಗ್ರಹ ಮಾಡಲಾತ್ತಿದೆ. ಬೆಂಗಳೂರು ನಗರಕ್ಕಾಗಿ ಯಲಹಂಕದ ಬಳಿ 300 ಮೆಗಾವ್ಯಾಟ್ ಸಾಮರ್ಥ್ಯದ ಗ್ಯಾಸ್ ಯೂನಿಟ್ ಆರಂಭಿಸಲಾಗುತ್ತಿದ್ದು, 2018ರ ವೇಳೆಗೆ ಕಾರ್ಯಾರಂಭ ಮಾಡಲಿದೆ ಎಂದರು. ಆರ್‌ಟಿಪಿಎಸ್ ಅಧಿಕಾರಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ