ಆ್ಯಪ್ನಗರ

ದೇವದುರ್ಗ ಬ್ಯಾಂಕ್‌ ಮುಷ್ಕರ

ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣ ಪ್ರಯತ್ನ ವಿರೋಧಿಸಿ 9 ಕಾರ್ಮಿಕ ಸಂಘಗಳ ಆಶ್ರಯದಲ್ಲಿ ದೇಶಾದ್ಯಂತ ಕರೆ ನೀಡಿದ್ದ ಬಂದ್‌ಗೆ ಬೆಂಬಲಿಸಿ ನಗರದಲ್ಲಿ ಮಂಗಳವಾರ ಬ್ಯಾಂಕ್‌ಗಳನ್ನು ಬಂದ್‌ ಮಾಡಿ ನೌಕರರು ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಿದರು.

Vijaya Karnataka Web 23 Aug 2017, 9:00 am

ದೇವದುರ್ಗ : ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣ ಪ್ರಯತ್ನ ವಿರೋಧಿಸಿ 9 ಕಾರ್ಮಿಕ ಸಂಘಗಳ ಆಶ್ರಯದಲ್ಲಿ ದೇಶಾದ್ಯಂತ ಕರೆ ನೀಡಿದ್ದ ಬಂದ್‌ಗೆ ಬೆಂಬಲಿಸಿ ನಗರದಲ್ಲಿ ಮಂಗಳವಾರ ಬ್ಯಾಂಕ್‌ಗಳನ್ನು ಬಂದ್‌ ಮಾಡಿ ನೌಕರರು ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಿದರು.

ಬ್ಯಾಂಕ್‌ ಹಾಗೂ ಎಟಿಎಂಗಳು ಬಂದ್‌ ಆಗಿದ್ದರಿಂದ ಜನರು ಹಣಕಾಸಿನ ವ್ಯವಹಾರಕ್ಕಾಗಿ ಇನ್ನಿಲ್ಲದ ಸಂಕಷ್ಟ ಎದುರಿಸಬೇಕಾಯಿತು. ಬಂದ್‌ ಬಗ್ಗೆ ಗೊತ್ತಿಲ್ಲದ ಕೆಲ ಗ್ರಾಹಕರು ಬ್ಯಾಂಕ್‌ಗೆ ಬಂದು ಬಾಗಿಲು ಮುಚ್ಚಿರುವುದನ್ನು ಕಂಡು ವಾಪಸ್‌ ನಡೆದರು. ಬ್ಯಾಂಕ್‌ ಬಂದ್‌ ಆಗಿದ್ದರಿಂದ ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟಿಗೆ ಸಮಸ್ಯೆಯಾಯಿತು. ಬಹಳಷ್ಟು ಜನರು ಎಟಿಎಂಗಳಿಗೆ ಹಣ ವಿತ್‌ ಡ್ರಾ ಮಾಡಲು ಎಡತಾಕಿದರೂ, ಖಾಲಿಯಾಗಿದ್ದರಿಂದ ಪರದಾಡುವಂತಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ