ಆ್ಯಪ್ನಗರ

ಹುಚ್ಚಬುಡ್ಡೇಶ್ವರ ರಥೋತ್ಸವ

ಪಟ್ಟಣ ಸಮೀಪದ ಅಮೀನಗಡ ಗ್ರಾಮದ ಆರಾಧ್ಯ ದೈವ ಗಂಗಮ್ಮ ಮಠದ ಶ್ರೀ ಹುಚ್ಚಬುಡ್ಡೇಶ್ವರ ತಾತನವರ ರಥೋತ್ಸವ ಶನಿವಾರ ನೆರವೇರಿತು. ಮಠದಲ್ಲಿನ ಗಂಗಮ್ಮ ದೇವಿ ಮೂರ್ತಿಗೆ ಜಾತ್ರೆ ನಿಮಿತ್ತ ನಾನಾ ಹೂಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

Vijaya Karnataka Web 2 Apr 2018, 5:00 am
ಕವಿತಾಳ ; ಪಟ್ಟಣ ಸಮೀಪದ ಅಮೀನಗಡ ಗ್ರಾಮದ ಆರಾಧ್ಯ ದೈವ ಗಂಗಮ್ಮ ಮಠದ ಶ್ರೀ ಹುಚ್ಚಬುಡ್ಡೇಶ್ವರ ತಾತನವರ ರಥೋತ್ಸವ ಶನಿವಾರ ನೆರವೇರಿತು.
Vijaya Karnataka Web
ಹುಚ್ಚಬುಡ್ಡೇಶ್ವರ ರಥೋತ್ಸವ


ಮಠದಲ್ಲಿನ ಗಂಗಮ್ಮ ದೇವಿ ಮೂರ್ತಿಗೆ ಜಾತ್ರೆ ನಿಮಿತ್ತ ನಾನಾ ಹೂಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ಭಕ್ತರು ಮಡಿಯುಟ್ಟು ದೀಡ್‌ ನಮಸ್ಕಾರ ಹಾಕಿ ಹರಕೆ ತೀರಿಸಿದರು. ಪಲ್ಲಕ್ಕಿ, ಛತ್ರಿ ಸೇವೆ, ಸೀರೆ ಉಡಿಸುವುದು, ಉಡಿ ತುಂಬುವ ನಾನಾ ಕಾರ್ಯಕ್ರಮಗಳು ಜರುಗಿದವು. ಹೋಳಿಗೆ, ಕಡುಬು, ಅನ್ನ-ಸಾರು ನೈವೇದ್ಯ ಸಮರ್ಪಿಸಿ ಕಾಯಿ ಕರ್ಪೂರ ಮಾಡಿಸಿ ಗಂಗಮ್ಮ, ಹುಚ್ಚಬುಡ್ಡೇಶ್ವರ ತಾತನ ಭಕ್ತಿಗೆ ಪಾತ್ರರಾದರು. ಮಠದ ಬಸವಲಿಂಗಮ್ಮ ಅಮ್ಮನವರು ಹುಚ್ಚಬುಡ್ಡೇಶ್ವರ ತಾತನ ರಥಕ್ಕೆ ಪೂಜೆ ಸಲ್ಲಿಸಿದರು.

ಕವಿತಾಳ, ಯತಗಲ್‌, ಕಾಚಾಪುರ, ನೆಲಕೋಳ, ಕೋಟೆಕಲ್‌, ಆನಂದಗಲ್‌, ಚಿಲ್ಕರಾಗಿ ಅನ್ವರಿ ಸೇರಿ ಮುಂತಾದ ಗ್ರಾಮಗಳ ಜನರು ಭಾಗವಹಿಸಿದ್ದರು. ಸಿ.ವಿ.ಚಂದ್ರಶೇಖರ್‌, ಗ್ರಾ.ಪಂ.ಅಧ್ಯಕ್ಷೆ ಗೌರಮ್ಮ, ಗ್ರಾ.ಪಂ.ಮಾಜಿ ಅಧ್ಯಕ್ಷ ಅಮರೇಗೌಡ ಪೊ.ಪಾ, ದಳಪತಿ ಅಮರೇಗೌಡ, ವಿಶ್ವನಾಥರೆಡ್ಡಿ, ಹುಚ್ಚಪ್ಪತಾತ ಸೇರಿ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ