ಆ್ಯಪ್ನಗರ

ಕತ್ತೆ ಹಳ್ಳದ್ದು ಕಥೆಯಲ್ಲ, ಬರೀ ವ್ಯಥೆ

ರಾಯಚೂರು-ಬೆಳಗಾವಿ ರಾಜ್ಯ ಹೆದ್ದಾರಿ ಸಂಪರ್ಕಿಸುವ ಪಟ್ಟಣ ಹೊರವಲಯದ ಕತ್ತೆ ಹಳ್ಳದ ಸೇತುವೆಯನ್ನು ಅವೈಜ್ಞಾನಿಕ ನಿರ್ಮಿಸಿದ್ದರಿಂದ ಅಪಘಾತ ವಲಯವಾಗಿ ಮಾರ್ಪಟ್ಟಿದೆ.

Vijaya Karnataka 26 Sep 2018, 5:00 am
ಮುದಗಲ್‌ : ರಾಯಚೂರು-ಬೆಳಗಾವಿ ರಾಜ್ಯ ಹೆದ್ದಾರಿ ಸಂಪರ್ಕಿಸುವ ಪಟ್ಟಣ ಹೊರವಲಯದ ಕತ್ತೆ ಹಳ್ಳದ ಸೇತುವೆಯನ್ನು ಅವೈಜ್ಞಾನಿಕ ನಿರ್ಮಿಸಿದ್ದರಿಂದ ಅಪಘಾತ ವಲಯವಾಗಿ ಮಾರ್ಪಟ್ಟಿದೆ.
Vijaya Karnataka Web RAC-RCH24MDL01


ಈ ಸೇತುವೆಯನ್ನು ತಗ್ಗು ಪ್ರದೇಶದ ತಿರುವಿನಲ್ಲಿ ನಿರ್ಮಿಸಿರುವುದೇ ಸಮಸ್ಯೆಯ ಮೂಲವಾಗಿದೆ. ಸೇತುವೆಯ ಎರಡೂ ಬದಿಯ ರಸ್ತೆ ಎತ್ತರದಲ್ಲಿದ್ದು, ಹೋಗುವವರು ಹಾಗೂ ಬರುವವರಿಗೆ ವಾಹನಗಳ ಸಂಚಾರ ಕಾಣಿಸಿದು. ಮತ್ತೊಂದೆಡೆ ಸೇತುವೆಯೂ ಸಮರ್ಪಕವಾಗಿ ಕಾಣದೇ ಅಪಾಯ ಆಹ್ವಾನಿಸುತ್ತಿದೆ. ಸೇತುವೆ ಇಕ್ಕೆಲಗಳಲ್ಲಿ ಅಳವಡಿಸಿದ ಬಾಂಡ್‌ಗಲ್ಲುಗಳೂ ಗಟ್ಟಿಮುಟ್ಟಾಗಿಲ್ಲ.

ಸ್ಥಳೀಯ ಠಾಣೆ ವ್ಯಾಪ್ತಿಯಲ್ಲಿ ಬರುವ ಈ ಸೇತುವೆ ಮೇಲೆ, ಆಗಾಗ್ಗೆ ಅಪಘಾತಗಳು ನಡೆಯುವುದು ಹಾಗೂ ಅಪಘಾತಗಳ ಕುರಿತು ಪ್ರಕರಣ ದಾಖಲಾಗುವುದೂ ಸಾಮಾನ್ಯವಾಗಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ವೈದ್ಯಕೀಯ ತಪಾಸಣೆಮಾಡಿ ಕುಟುಂಬಕ್ಕೆ ಹಸ್ತಾಂತರಿಸುವುದಷ್ಟೇ ಪೊಲೀಸ್‌ ಇಲಾಖೆಯ ಕೆಲಸವಾಗಿದೆ. ಇತರ ಇಲಾಖೆಗಳೂ ಸೇತುವೆಯ ಎತ್ತರ ಹೆಚ್ಚಿಸಲು ಯಾವುದೇ ಕ್ರಮಕೈಗೊಂಡಿಲ್ಲ. ಮೇಲ್ಸೇತುವೆ ನಿರ್ಮಿಸುವ ಜತೆಗೆ ಸೇತುವೆಯ ಎರಡೂ ಬದಿ ಸಮತಟ್ಟಾದ ರಸ್ತೆ ನಿರ್ಮಿಸಿ ಸುಗಮ ಸಂಚಾರಕ್ಕೆ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ