ಆ್ಯಪ್ನಗರ

ಕೋರ್ಟ್‌ನಲ್ಲಿ ಪ್ರಕರಣ ಇದ್ದರೂ ಅನುದಾನ ಬಳಕೆ!

ಕಲಬುರಗಿ ಹೈ ಕೋರ್ಟ್‌ನಲ್ಲಿ ಪ್ರಕರಣ ಇದ್ದರೂ ಕೊತ್ತದೊಡ್ಡಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ಅನುದಾನ ಬಳಕೆ ಮಾಡಿಕೊಂಡು ನ್ಯಾಯಾಂಗ ನಿಂದನೆ ಮಾಡಿರುವ ಪ್ರಕರಣ ಹೇಮನೂರು ತಾಲೂಕು ಪಂಚಾಯತಿ ಸದಸ್ಯ ಗೋವಿಂದರಾಜ್‌ ನಾಯಕ ಚಿಕ್ಕಗುಡ್ಡ ಬೆಳಕಿಗೆ ತಂದಿದ್ದಾರೆ.

Vijaya Karnataka 29 Sep 2018, 5:00 am
ದೇವದುರ್ಗ : ಕಲಬುರಗಿ ಹೈ ಕೋರ್ಟ್‌ನಲ್ಲಿ ಪ್ರಕರಣ ಇದ್ದರೂ ಕೊತ್ತದೊಡ್ಡಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ಅನುದಾನ ಬಳಕೆ ಮಾಡಿಕೊಂಡು ನ್ಯಾಯಾಂಗ ನಿಂದನೆ ಮಾಡಿರುವ ಪ್ರಕರಣ ಹೇಮನೂರು ತಾಲೂಕು ಪಂಚಾಯತಿ ಸದಸ್ಯ ಗೋವಿಂದರಾಜ್‌ ನಾಯಕ ಚಿಕ್ಕಗುಡ್ಡ ಬೆಳಕಿಗೆ ತಂದಿದ್ದಾರೆ.
Vijaya Karnataka Web
ಕೋರ್ಟ್‌ನಲ್ಲಿ ಪ್ರಕರಣ ಇದ್ದರೂ ಅನುದಾನ ಬಳಕೆ!


ಈ ಕುರಿತು ತಾಲೂಕು ಪಂಚಾಯತಿಯಿಂದ ದಾಖಲಾತಿ ಪಡೆದ ಗೋವಿಂದರಾಜ್‌ ವಿಜಯ ಕರ್ನಾಟಕಕ್ಕೆ ನೀಡಿದ್ದಾರೆ.

ಫೆ.20, 2018 ರಂದು ಕೊತ್ತದೊಡ್ಡಿ ಗ್ರಾ.ಪಂ.ಅಧ್ಯಕ್ಷೆ ಕಮಲ ಗಂ.ಹನುಮಂತಯ್ಯರ ವಿರುದ್ಧ 20 ಜನ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ (ರೀಟ್‌ ಪೇಟಿಶನ್‌ ಸಂಖ್ಯೆ 200655/2018) ಪ್ರಕರಣ ನಡೆಯುತ್ತಿದೆ. ಪ್ರಕರಣ ಇತ್ಯರ್ಥ ವಾಗುವವರೆಗೆ ಪಂಚಾಯತಿಯಲ್ಲಿ ಹಣಕಾಸಿನ ವ್ಯವಹಾರ ನಡೆಸದಂತೆ ನ್ಯಾಯಾಲಯ ಆದೇಶ ಜಾರಿ ಮಾಡಿದೆ. ಆದರೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಸ್‌.ಬಿ.ಪಾಟೀಲ್‌ ಹಿಂದಿನ ಅಧ್ಯಕ್ಷ ರೊಂದಿಗೆ ಶಾಮೀಲಾಗಿ ಸೆ.6 ರಂದು 10 ಲಕ್ಷ 90 ಸಾವಿರ ರೂ, ರಾಘವೇಂದ್ರ ಎಲೆಕ್ಟ್ರೀಕಲ್‌ ಅಂಗಡಿ ಮಾಲೀಕರ ಹೆಸರಿಗೆ ಚೆಕ್‌ ನೀಡುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕ್ರಿಯಾ ಯೋಜನೆ ಇಲ್ಲದೆ ಅನುದಾನ ಬಳಕೆ: ಸರಕಾರದ ನಿಯಮದನ್ವಯ ಕ್ರಿಯಾಯೋಜನೆ ತಯಾರಿಸದೇ ನಯಾ ಪೈಸೆ ಬಳಕೆ ಮಾಡಿಕೊಳ್ಳುವ ಆಗಿಲ್ಲ. ಅದರಲ್ಲೂ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವಾಗ ಯಾವುದೇ ರೀತಿಯ ಆಡಳಿತತ್ಮಾಕ ಅನುಮೊದನೆಗೂ ಅವಕಾಶ ಇಲ್ಲ. ಹೀಗಿರುವಾಗ ಕೊತ್ತದೊಡ್ಡಿ ಗ್ರಾ. ಪಂ.ಅಭಿವೃದ್ಧಿ ಅಧಿಕಾರಿ ಎಸ್‌.ಬಿ.ಪಾಟೀಲ್‌ 2017-18ನೇ ಸಾಲಿನ 14ನೇ ಹಣಕಾಸು ಯೋಜನೆ 10. ಲಕ್ಷ 90 ಸಾವಿರ ರೂ, ಅನುದಾನ ಕ್ರಿಯಾ ಯೋಜನೆ ತಯಾರಿಸದೇ ನೆರವಾಗಿ ರಾಘವೇಂದ್ರ ಎಲೆಕ್ಟ್ರೀಕಲ್‌ ಅಂಗಡಿ ಮಾಲೀಕರ ಹೆಸರಿಗೆ ಚಕ್‌ ನೀಡಿ ಹೈ ಕೋರ್ಟ್‌ ಆದೇಶ ಉಲ್ಲಂಘಿಸಿದ್ದಾರೆ. ಈ ಕುರಿತು ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ತಕ್ಷ ಣ ಪಿಡಿಒ ಎಸ್‌.ಬಿ.ಪಾಟೀಲ್‌ ಅವರನ್ನು ಅಮಾನತು ಮಾಡಬೇಕು ಎಂದು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ