ಆ್ಯಪ್ನಗರ

ಉಪವಿಭಾಗ ಅಂಚೆ ಕಚೇರಿಗೆ ಮುತ್ತಿಗೆ

ಖಜಾನೆಯಿಂದ ಮಾಸಾಶನÜ ಬಿಡುಗಡೆಯಾದರೂ ಪೋಸ್ಟ್‌ ಮನ್‌ ಮಾಸಾಶನÜ ನೀಡುತ್ತಿಲ್ಲ ಎಂದು ಆರೋಪಿಸಿದ ಸ್ಥಳೀಯ ಫಲಾನುಭವಿಗಳು, ಉಪವಿಭಾಗ ಅಂಚೆ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

Vijaya Karnataka 3 Nov 2018, 5:00 am
ಲಿಂಗಸುಗೂರು ; ಖಜಾನೆಯಿಂದ ಮಾಸಾಶನÜ ಬಿಡುಗಡೆಯಾದರೂ ಪೋಸ್ಟ್‌ ಮನ್‌ ಮಾಸಾಶನÜ ನೀಡುತ್ತಿಲ್ಲ ಎಂದು ಆರೋಪಿಸಿದ ಸ್ಥಳೀಯ ಫಲಾನುಭವಿಗಳು, ಉಪವಿಭಾಗ ಅಂಚೆ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web RAC-RCH02LNG03


ತಾಲೂಕಿನಲ್ಲಿ ವಿಧವಾ, ಸಂದ್ಯಾಸುರಕ್ಷಾ, ಮೈತ್ರಿ, ಮನಸ್ವಿನಿ, ವಿಕಲಚೇತನರು ಸೇರಿ ನಾನಾ ಮಾಸಾಶನÜ ಯೋಜನೆಯ ಫಲಾನುಭವಿಗಳಿದ್ದಾರೆ. ಸರಕಾರ, ಪ್ರತಿ ತಿಂಗಳು ತಪ್ಪದೇ ಖಜಾನೆ ಮುಖಾಂತರ ಅಂಚೆ ಕಚೇರಿಗೆ ಹಣ ಬಿಡುಗಡೆಗೊಳಿಸುತ್ತಿದೆ. ಆದರೆ, ಪೋಸ್ಟ್‌ಮನ್‌ ಶರಣಪ್ಪ ಅವರು, ಫಲಾನುಭವಿಗಳಿಗೆ ನಾಲ್ಕು ತಿಂಗಳೊಮ್ಮೆ ಮಾಸಾಶನÜ ವಿತರಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ತಾವು ಕೊಟ್ಟಾಗ ತೆಗೆದುಕೊಳ್ಳುವಂತೆ ರೇಗಾಡುತ್ತಿದ್ದಾರೆ. ನಾಲ್ಕು ತಿಂಗಳ ಮಾಸಾಶನÜ ನೀಡುವಾಗ 200 ರೂ. ಕೊಡುವಂತೆ ಪೀಡಿಸುತ್ತಿದ್ದಾರೆ ಎಂದು ಫಲಾನುಭವಿಗಳು ದೂರಿದರು.

ಕೆಲವು ದೃಷ್ಟಿ ವಿಶೇಷಚೇತನರು ಹಾಗೂ ವೃದ್ಧ ಫಲಾನುಭವಿಗಳಿಗೆ ಮೂರು ತಿಂಗಳ ಹಣ ನೀಡಿ ನಾಲ್ಕು ತಿಂಗಳ ಇಎಂಒ ಚೀಟಿಗೆ ಸಹಿ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಒಂದು ತಿಂಗಳ ಮಾಸಾಶನÜದ ಹಣವನ್ನು ತಮ್ಮ ಜೇಬಿಗಿಳಿಸುತ್ತಿದ್ದಾರೆ. ನಾಲ್ಕು ತಿಂಗಳೊಮ್ಮೆ ಮಾಸಾಶನ ನೀಡಿದರೂ ಪರವಾಗಿಲ್ಲ. ಆದರೆ, ಹಣ ನೀಡಲು ನಾಳೆ ಬಾ, ನಾಡಿದ್ದು ಬಾ ಎಂದು ಹೇಳಿ ಕಚೇರಿಗೆ ಅಲೆದಾಡಿಸುತ್ತಾರೆ. ಪೋಸ್ಟ್‌ಮನ್‌, ಫಲಾನುಭವಿಗಳ ಮನೆಗೆ ಬಂದು ಹಣ ನೀಡಬೇಕು. ಆದರೆ, ಪೋಸ್ಟ್‌ಮನ್‌ ಅಂಚೆ ಕಚೇರಿಗೆ ಕರೆಯಿಸಿಕೊಂಡು ಹಣ ನೀಡುತ್ತಿದ್ದಾರೆ. ಇದರಿಂದ ತಮಗೆ ತೊಂದರೆಯಾಗುತ್ತಿದೆ. ಅಂಚೆ ನಿರೀಕ್ಷ ಕರಿಗೂ ದೂರು ನೀಡಿದರೂ ಅವರು ಈ ಬಗ್ಗೆ ನಿರ್ಲಕ್ಷ ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಫಲಾನುಭವಿಗಳಾದ ಗೋಪಾಲ್‌ಸಿಂಗ್‌, ಬೀರಪ್ಪ ಹೂಗಾರ, ಪರುಶುರಾಮ ಗೊರಬಾಳ, ಬಾಬುನಾಯಕ, ಅಮೀನ್‌, ಹೊಳೆಯಪ್ಪ, ಯಮನಪ್ಪ, ಅಮರೇಶಸ್ವಾಮಿ ಹಾಗೂ ಇತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ