ಆ್ಯಪ್ನಗರ

ಉಪವಾಸ ಕೈ ಬಿಟ್ಟ ಹೋರಾಟಗಾರರು

ಸ್ಥಳೀಯ ಪ.ಪಂ.ಯ ಸ್ವಚ್ಛ ಭಾರತ ಮಿಷನ್‌ ಯೋಜನೆಯ ಶೌಚಾಲಯದಲ್ಲಿನಡೆದ ಭ್ರಷ್ಟಾಚಾರದ ತನಿಖೆ ಸೇರಿ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟಣದ ಪ.ಪಂ.ಕಾರ್ಯಾಲಯದ ಮುಂದೆ ಕಳೆದ ಗುರುವಾರ ಡಿವೈಎಫ್‌ಐ, ಎಸ್‌ಎಫ್‌ಐ, ಜೈ ಭಾರತ ಸಂಘಟನೆ, ಕವಿತಾಳ ನವ ನಿರ್ಮಾಣ ವೇದಿಕೆ ಸೇರಿ ನಾನಾ ಸಂಘಟನೆಗಳು ಆರಂಭಿಸಿದ್ದ ಧರಣಿ ಸೋಮವಾರ ಅಂತ್ಯಗೊಂಡಿತು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ ಹಾಗೂ ಇಇ ಮಲ್ಲಿಕಾರ್ಜುನ ಗೋಪಿಶೆಟ್ಟಿ ಧರಣಿ ಸ್ಥಳಕ್ಕೆ ಆಗಮಿಸಿ ಹೋರಾಟಗಾರರೊಂದಿಗೆ ಚರ್ಚಿಸಿದರು.

Vijaya Karnataka 11 Dec 2019, 5:00 am
ಕವಿತಾಳ: ಸ್ಥಳೀಯ ಪ.ಪಂ.ಯ ಸ್ವಚ್ಛ ಭಾರತ ಮಿಷನ್‌ ಯೋಜನೆಯ ಶೌಚಾಲಯದಲ್ಲಿನಡೆದ ಭ್ರಷ್ಟಾಚಾರದ ತನಿಖೆ ಸೇರಿ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟಣದ ಪ.ಪಂ.ಕಾರ್ಯಾಲಯದ ಮುಂದೆ ಕಳೆದ ಗುರುವಾರ ಡಿವೈಎಫ್‌ಐ, ಎಸ್‌ಎಫ್‌ಐ, ಜೈ ಭಾರತ ಸಂಘಟನೆ, ಕವಿತಾಳ ನವ ನಿರ್ಮಾಣ ವೇದಿಕೆ ಸೇರಿ ನಾನಾ ಸಂಘಟನೆಗಳು ಆರಂಭಿಸಿದ್ದ ಧರಣಿ ಸೋಮವಾರ ಅಂತ್ಯಗೊಂಡಿತು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ ಹಾಗೂ ಇಇ ಮಲ್ಲಿಕಾರ್ಜುನ ಗೋಪಿಶೆಟ್ಟಿ ಧರಣಿ ಸ್ಥಳಕ್ಕೆ ಆಗಮಿಸಿ ಹೋರಾಟಗಾರರೊಂದಿಗೆ ಚರ್ಚಿಸಿದರು.
Vijaya Karnataka Web
ಉಪವಾಸ ಕೈ ಬಿಟ್ಟ ಹೋರಾಟಗಾರರು


ಕಿಡಿ: ಕವಿತಾಳ ನವ ನಿರ್ಮಾಣ ವೇದಿಕೆಯ ಗೌರವಾಧ್ಯಕ್ಷ ಭೀಮನಗೌಡ ವಂದ್ಲಿ, ದಲಿತ ಮುಖಂಡ ರಾಮಣ್ಣ ಬಿಎಡ್‌, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ, ಶಿವಣ್ಣ ವಕೀಲ, ಜಹಾಂಗೀರಪಾಷಾ ಮಾತನಾಡಿ, ಪಂಚಾಯಿತಿಯಲ್ಲಿಭ್ರಷ್ಟಾಚಾರ ನಡೆದಿರುವ ಬಗ್ಗೆ ಡಿ.20ರಂದು ಪ.ಪಂ.ಕೆಲ ಸದಸ್ಯರ ಸಮ್ಮುಖದಲ್ಲೇ ದಾಖಲಾತಿ ಸಮೇತ ಮಾಹಿತಿ ನೀಡಿದ್ದೆವು. ಆದರೆ ಗಮನ ಹರಿಸಲಿಲ್ಲ. ಹೋರಾಟ ನಡೆಸುವುದಕ್ಕೆ ನಿಮ್ಮ ನಿರ್ಲಕ್ಷತ್ರ್ಯವೇ ಕಾರಣ, ನಮಗೆ ಸುಳ್ಳು ಭರವಸೆ ಬೇಕಾಗಿಲ್ಲ. ಪಂಚಾಯಿತಿ ತುಂಬ ಹೊಲಸು ತುಂಬಿಕೊಂಡಿದೆ ಎಂದು ಕಿಡಿಕಾರಿದರು. ಬೋಗಸ್‌ ಬಿಲ್‌ ಸೃಷ್ಟಿಸಿ ಶೌಚಾಲಯದ ಹಣ ಎತ್ತುವಳಿ ಮಾಡಲಾಗಿದೆ ಎಂದು ದೂರಿದರು.

ಒತ್ತಾಯ: ಭ್ರಷ್ಟಾಚಾರದ ವಿರುದ್ಧ ತನಿಖೆಯಾಗಬೇಕು. ಭ್ರಷ್ಟಾಚಾರದಲ್ಲಿಭಾಗಿಯಾದ ಸದಸ್ಯರ ಸದಸ್ಯತ್ವ ರದ್ದಗೊಳಿಸಬೇಕು, ಪ್ರತಿ ವಾರ್ಡಿನಲ್ಲಿರಸ್ತೆ ಅಗಲೀಕರಣ ಮಾಡಬೇಕು, ಮೂಲ ಸೌಕರ್ಯ ಕಲ್ಪಿಸಬೇಕು, ಕಾಯಂ ನಿವಾಸಿಗಳಿಗೆ ಹಕ್ಕು-ಪತ್ರ ವಿತರಣೆ, ಪ.ಪಂ.ಗೆ ಅಗತ್ಯ ಸಿಬ್ಬಂದಿ ನೇಮಕ, ಸಾಮಗ್ರಿ ಖರೀದಿ, ಅರ್ಹ ಫಲಾನುಭವಿಗಳಿಗೆ ಶೌಚಾಲಯದ ಹಣ ಬಿಡುಗಡೆ, ಮುಖ್ಯಾಧಿಕಾರಿ ಈರಣ್ಣ ಜಗ್ಲಿ, ಜೆಇ ಮಲ್ಲಣ್ಣ ಅಮಾನತು, ಪ.ಪಂ.ಯಿಂದ ಹೊರ ಹಾಕಿದ ಸಿಬ್ಬಂದಿಗಳ ಮರು ನೇಮಕ, ಬಾಕಿ ವೇತನ ಬಿಡುಗಡೆ, ಸಾರ್ವಜನಿಕ ಶೌಚಾಲಯದ ಅಕ್ರಮ ತನಿಖೆಯನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಭರವಸೆ: ಪಿಡಿ ಹಾಗೂ ಇಇ ಅಧಿಕಾರಿಗಳು ಪ.ಪಂ.ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿಗಳ ಒಪ್ಪಿಗೆ ಮೇರೆಗೆ ತನಿಖಾ ತಂಡ ರಚಿಸಿ ಪಟ್ಟಣದ ಪ್ರತಿ ಮನೆಯನ್ನು ವೀಕ್ಷಿಸುವ ಮೂಲಕ ಶೌಚಾಲಯ ಹಗರಣ ಪತ್ತೆ ಹಚ್ಚಲಾಗುವುದು, ಅಕ್ರಮ ಕಂಡು ಬಂದರೆ ಭಾಗಿಯಾದವರ ಮೇಲೆ ಕ್ರಿಮಿನಲ್‌ 420 ಚೀಟಿಂಗ್‌ ಕೇಸ್‌, ಐಪಿಸಿ ನಾನಾ ಸೆಕ್ಷನ್‌ನಲ್ಲಿಪ್ರಕರಣ ದಾಖಲು ಮಾಡಲಾಗುವುದು. ಇದರ ಮೇಲೆ ಸದಸ್ಯತ್ವ ರದ್ದತಿಗೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಶೌಚಾಲಯಗಳ ತನಿಖೆಗಾಗಿ ಕಳೆದ 5 ವರ್ಷಗಳಲ್ಲಿಪಂಚಾಯಿತಿಗೆ ಬಂದ ಅನುದಾನ, ಮೊತ್ತ, ಕಾಮಗಾರಿ ಕ್ರಿಯಾ ಯೋಜನೆಗಳ ಕಡತಗಳನ್ನು ಪುನಃ ಪಡೆದುಕೊಂಡು ಮತ್ತೆ ಭೇಟಿ ನೀಡಿ ಕ್ರಮ ತೆಗೆದುಕೊಳ್ಳಲಾಗುವುದು, ಒಂದು ವಾರದ ಬಳಿಕ ತಂಡ ರಚಿಸಿ ರಸ್ತೆ ಸರ್ವೆಕಾರ್ಯ ಆರಂಭಿಸುವ ಮೂಲಕ ರಸ್ತೆ ಅಗಲೀಕರಣ ಕ್ರಿಯಾಯೋಜನೆ ತಯಾರಿಸಲಾಗುವುದು ಎಂಬುದು ಸೇರಿ ನಾನಾ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ಬಳಿಕ ಹೋರಾಟಗಾರರು ಧರಣಿ ಕೈ ಬಿಟ್ಟರು.

ಪ.ಪಂ.ಸದಸ್ಯ ಅಕ್ಬರ್‌ ಎಡಿಎಂ, ವಿಶ್ವನಾಥ ಕಾಮರಡ್ಡಿ, ಜಾವೀದ್‌ ಎಂಎಸ್‌, ರಫೀಕ್‌ ಬೋದಲ್‌, ಎಂ.ಡಿ.ಮಹಿಬೂಬ್‌ ಸಾಬ್‌, ಕಿಶನ್‌ ಸಿಂಗ್‌, ಅಜಯ, ಎಸ್‌.ಮುನ್ನಾವರ ಸರಮಸ್ತ, ಪ್ರದೀಪಕುಮಾರ ಜಗ್ಲಿ, ಹರ್ಷದ್‌, ಮಹಿಬೂಬ್‌ ಪಾಷಾ, ಮಹಮ್ಮದ್‌ ಖುರೇಷಿ, ತಾಜುದ್ದೀನ್‌, ಅಲಿ, ರಿಯಾಜಮುಲ್ಲ, ಮಹಿಬೂಬ್‌ ಗಣದಿನ್ನಿ ಸೇರಿ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ