ಆ್ಯಪ್ನಗರ

'ಹತ್ತಿ ಮಾರುಕಟ್ಟೆಯಲ್ಲಿಅನ್ಯಾಯ'

ಇಲ್ಲಿನ ಹತ್ತಿ ಮಾರುಕಟ್ಟೆಯಲ್ಲಿನಾನಾ ಕಾರಣಗಳೊಡ್ಡಿ ಹಣ ಕಡಿತಗೊಳಿಸುತ್ತಿದ್ದು, ರೈತರಿಗಾಗುತ್ತಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಜಿಲ್ಲಾಡಳಿತದ ಮುಂದೆ ಗುರುವಾರ ಪ್ರತಿಭಟಿಸಿದರು.

Vijaya Karnataka 3 Jan 2020, 3:32 pm
ರಾಯಚೂರು: ಇಲ್ಲಿನ ಹತ್ತಿ ಮಾರುಕಟ್ಟೆಯಲ್ಲಿನಾನಾ ಕಾರಣಗಳೊಡ್ಡಿ ಹಣ ಕಡಿತಗೊಳಿಸುತ್ತಿದ್ದು, ರೈತರಿಗಾಗುತ್ತಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಜಿಲ್ಲಾಡಳಿತದ ಮುಂದೆ ಗುರುವಾರ ಪ್ರತಿಭಟಿಸಿದರು.
Vijaya Karnataka Web
'ಹತ್ತಿ ಮಾರುಕಟ್ಟೆಯಲ್ಲಿಅನ್ಯಾಯ'


ನಂತರ ಡಿಸಿ ಕಚೇರಿ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದ ರೈತ ಮುಖಂಡರು, ಹಾಡಹಗಲೇ ಹತ್ತಿ ಮಾರುಕಟ್ಟೆಯಲ್ಲಿರೈತರಿಂದ ಅನಗತ್ಯವಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಹತ್ತಿ ಉತ್ಪನ್ನ ಮಾರಾಟ ಮಾಡಲು ಮಾರುಕಟ್ಟೆಗೆ ಆಗಮಿಸುವ ರೈತರ ಹತ್ತಿಯಲ್ಲಿಪ್ರತಿ ಕ್ವಿಂಟಲ್‌ಗೆ 2ಕೆ.ಜಿ. ಸೂಟ್‌ ತೆಗೆಯಲಾಗುತ್ತಿದೆ. ಆಯಾ ಖಾಸಗಿ ಮಿಲ್‌ಗಳ ವಿಮಾ ಹಣವನ್ನೂ ಮಿಲ್‌ಗಳ ಮಾಲೀಕರೇ ಪಾವತಿಸಬೇಕು. ಆದರೆ ಅದನ್ನೂ ರೈತರಿಂದ ವಸೂಲಿ ಮಾಡಲಾಗುತ್ತಿರುವುದು ಸೇರಿದಂತೆ ಅನೇಕ ವಿಷಯಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದರು.

ಆಗ್ರಹ: ಆದ್ದರಿಂದ ಜಿಲ್ಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಹತ್ತಿ ಮಾರುಕಟ್ಟೆಯಲ್ಲಿರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ ತಪ್ಪಿತಸ್ಥರಿಗೆ ಕಠಿಣ ಕ್ರಮ ಕೈಗೊಳ್ಳಬೇಕು. ಜತೆಗೆ ತೊಗರಿ, ಭತ್ತ, ಕಡಲೆ ಖರೀದಿ ಕೇಂದ್ರಗಳನ್ನು ಶೀಘ್ರ ಪ್ರಾರಂಭಿಸಬೇಕು. ಪ್ರತಿಯೊಬ್ಬ ರೈತರಿಂದ 20 ಕ್ವಿಂಟಲ್‌ ತೊಗರಿ ಖರೀದಿಸಬೇಕು. ನಾರಾಯಣಪುರ ಬಲದಂಡೆ ಕಾಲುವೆಗೆ ಮಾರ್ಚ್ 31ರವರೆಗೆ ನೀರು ಹರಿಸಬೇಕು ಎಂದು ರೈತರು ಆಗ್ರಹಿಸಿದರು. ಈ ಸಂದರ್ಭದಲ್ಲಿಲಕ್ಷತ್ರ್ಮಣಗೌಡ ಕಡಗಂದೊಡ್ಡಿ, ಕೆ.ವಿರೇಶಗೌಡ, ಹುಲಿಗೆಪ್ಪ, ದೇವರಾಜ್‌ ನಾಯಕ, ಮನೋಹರ, ರಮೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ