ಆ್ಯಪ್ನಗರ

ಜಿ.ಪಂ.ಸದಸ್ಯ ಸೇರಿ 33 ರೈತರ ವಿರುದ್ಧ ಕೇಸ್‌

ತಾಲೂಕಿನ ಶ್ರೀಪುರಂಜಂಕ್ಷನ್‌ನಲ್ಲಿತುಂಗಭದ್ರಾ ಎಡದಂಡೆ ನಾಲೆಯ 32 ಹಾಗೂ 36ನೇ ಉಪಕಾಲುವೆಯ ಕೆಳಭಾಗಕ್ಕೆ ನೀರು ಹರಿಸುವಂತೆ ಆಗ್ರಹಿಸಿ, ಪ್ರತಿಭಟನೆ ನಡೆಸಿದ್ದ ಜಿ.ಪಂ. ಸದಸ್ಯ ಸೇರಿ 33 ರೈತರ ವಿರುದ್ಧ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿಗುರುವಾರ ಪ್ರಕರಣ ದಾಖಲಾಗಿದೆ.

Vijaya Karnataka 18 Sep 2019, 3:18 pm
ಸಿಂಧನೂರು: ತಾಲೂಕಿನ ಶ್ರೀಪುರಂಜಂಕ್ಷನ್‌ನಲ್ಲಿತುಂಗಭದ್ರಾ ಎಡದಂಡೆ ನಾಲೆಯ 32 ಹಾಗೂ 36ನೇ ಉಪಕಾಲುವೆಯ ಕೆಳಭಾಗಕ್ಕೆ ನೀರು ಹರಿಸುವಂತೆ ಆಗ್ರಹಿಸಿ, ಪ್ರತಿಭಟನೆ ನಡೆಸಿದ್ದ ಜಿ.ಪಂ. ಸದಸ್ಯ ಸೇರಿ 33 ರೈತರ ವಿರುದ್ಧ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿಗುರುವಾರ ಪ್ರಕರಣ ದಾಖಲಾಗಿದೆ.
Vijaya Karnataka Web  32 36 33
ಜಿ.ಪಂ.ಸದಸ್ಯ ಸೇರಿ 33 ರೈತರ ವಿರುದ್ಧ ಕೇಸ್‌


ಕೆಳಭಾಗಕ್ಕೆ ಸಮರ್ಪಕ ನೀರು ಹರಿಯದೇ ಇರುವುದರಿಂದ ಆಕ್ರೋಶಗೊಂಡಿದ್ದ ರೈತರು, ಹೆದ್ದಾರಿ ಸಂಚಾರ ತಡೆ ನಡೆಸಿದರು. ನೀರು ಬಾರದೇ ಭತ್ತನಾಟಿಗೆ ಹಿನ್ನಡೆಯಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಪ್ರತಿಭಟನಾನಿರತ ರೈತರು ತೀವ್ರ ಅಸಮಾಧಾನ ಹೊರಹಾಕಿದ್ದರು. ಮಧ್ಯಾಹ್ನದವರೆಗೆ ಕೆಲವು ತಾಸು ಹೋರಾಟ ಮುಂದುವರಿಸಿ, ಟೈರ್‌ ಸುಟ್ಟು ತಮ್ಮ ಆಕ್ರೋಶ ಹೊರಹಾಕಿದ್ದರು. ಆದರೆ, ಹೋರಾಟವನ್ನೆ ನೆಪವಾಗಿಟ್ಟುಕೊಂಡು ಪ್ರಕರಣ ದಾಖಲಾಗಿರುವುದು ರೈತ ವಲಯದಲ್ಲಿಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಭತ್ತ ನಾಟಿಗೆ ನೀರು ಕೇಳಿದವರ ವಿರುದ್ಧವೇ ಪ್ರಕರಣ ದಾಖಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ದೂರಿನ ವಿವರ: ಗ್ರಾಮೀಣ ಪೊಲೀಸ್‌ ಠಾಣೆಯ ಎ.ಎಸ್‌.ಐ. ಯಮನಪ್ಪ ಗಿರಿಜಾಲಿ ಅವರ ದೂರು ಆಧರಿಸಿ, ಪ್ರಕರಣ ದಾಖಲಾಗಿದೆ. ತುಂಗಭದ್ರಾ ಎಡದಂಡೆ 36ನೇ ಉಪಕಾಲುವೆ ಕೆಳಭಾಗಕ್ಕೆ ಗೇಜ್‌ ಜಾಸ್ತಿ ಮಾಡಿ ಸಮರ್ಪಕವಾಗಿ ನೀರು ಹರಿಸಬೇಕೆಂದು ಆಗ್ರಹಿಸಿ, ಜಿಲ್ಲಾಪಂಚಾಯಿತಿ ಸದಸ್ಯ ಬಸವರಾಜ ಹಿರೇಗೌಡರ್‌ ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ವೆಂಕೋಬ ಸಾಸಲಮರಿ ನೇತೃತ್ವದಲ್ಲಿನೂರಾರು ರೈತರು ಹೋರಾಟದಲ್ಲಿಭಾಗವಹಿಸಿದ್ದರು. ಬಳ್ಳಾರಿ, ಗಂಗಾವತಿ ಮಾರ್ಗದ ಕೂಡು ರಸ್ತೆಯಲ್ಲಿಟೈರಿಗೆ ಬೆಂಕಿ ಹಚ್ಚಿ,ಯಾವುದೇ ವಾಹನ ಹೋಗದಂತೆ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗಿತ್ತು. ಇಬ್ಬರು ಪ್ರಮುಖರ ಜತೆಗೆ ರೈತರಾದ ಮುದುಕಪ್ಪ ಸುಲ್ತಾನಪುರ, ದೊರೆಸ್ವಾಮಿ ನಾಯ್ಡು, ಭೀಮನಗೌಡ ನೆಟೇಕಲ್‌, ರಂಗನಗೌಡ ಗೊರೇಬಾಳ, ಶರಣೇಗೌಡ ಗೊರೇಬಾಳ, ಸತೀಶ, ಜಿ.ಸುಬ್ಬಾರಾವ್‌ ಸೇರಿ 33 ಜನರನ್ನು ದೂರಿನಲ್ಲಿಹೆಸರಿಸಲಾಗಿದೆ.

..........

ರಾಜ್ಯದಲ್ಲಿರೈತ ಪರ ಸರಕಾರ ಅಧಿಕಾರದಲ್ಲಿದೆ ಎಂದು ಹೇಳಲಾಗುತ್ತಿದೆ. ಕ್ಷೇತ್ರದಲ್ಲಿರುವ ಶಾಸಕರೂ ತಾವು ರೈತಪರ ಎನ್ನುತ್ತಾರೆ. ಆದರೆ, ನೀರಿಗಾಗಿ ಹೋರಾಟ ಮಾಡಿದ ರೈತರ ಮೇಲೆಯೇ ಪ್ರಕರಣ ದಾಖಲಿಸಿರುವುದು ದೊಡ್ಡ ದುರಂತ. ಮೊದಲೇ ಮಳೆ, ಬೆಳೆ ಇಲ್ಲದೇ ತಾಲೂಕಿನ ರೈತರು ಸಂಕಷ್ಟದಲ್ಲಿದ್ದಾರೆ. ಆಡಳಿತ ವ್ಯವಸ್ಥೆಯ ವೈಫಲ್ಯ ಮುಚ್ಚಿಕೊಳ್ಳಲು ನನ್ನ ಹಾಗೂ ರೈತರ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ, ಈ ಭಾಗದ ಜಮೀನುಗಳಿಗೆ ಸಮರ್ಪಕ ನೀರು ಹರಿಯುವವರೆಗೆ ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ.

-ಬಸವರಾಜ ಹಿರೇಗೌಡರ್‌, ಜಿಲ್ಲಾಪಂಚಾಯಿತಿ ಸದಸ್ಯ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ