ಚಂದ್ರಶೇಖರ ಬೆನ್ನೂರು
ಸಿಂಧನೂರು (ರಾಯಚೂರು): ಗ್ರಾಮೀಣ ಪ್ರದೇಶದಲ್ಲಿರುವ ಆಸ್ಪತ್ರೆಗಳಲ್ಲಿ ವೈದ್ಯ, ಸಿಬ್ಬಂದಿ ಕೊರತೆಯಿಂದ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ನೆರವಾಗುವ ಮೂಲಕ ಸರಕಾರದ ಆರೋಗ್ಯ ಕವಚ 108 ಆಂಬ್ಯುಲೆನ್ಸ್ನಲ್ಲಿ ಒಂದು ವರ್ಷದಲ್ಲೇ 223 ಮಹಿಳೆಯರಿಗೆ ಹೆರಿಗೆ ಮಾಡಿಸಿರುವುದು ವಿಶೇಷವಾಗಿದೆ. ತುರ್ತು ಸಮಯದಲ್ಲಿ ಜನರ ಅನುಕೂಲಕ್ಕಾಗಿ ಸರಕಾರವು 108 ಆಂಬ್ಯುಲೆನ್ಸ್ ಸೌಲಭ್ಯ ಆರಂಭಿಸಿದೆ. ಅಪಘಾತ ಸೇರಿ ಹಲವು ಸಮಯದಲ್ಲಿ 108 ಸಂಖ್ಯೆಗೆ ಕರೆ ಮಾಡಿದರೆ, ಕೆಲವೇ ಕ್ಷಣಗಳಲ್ಲಿ ಆಂಬ್ಯುಲೆನ್ಸ್ ಬಂದು ನಿಲ್ಲುತ್ತದೆ. ಅಗತ್ಯ ಸಮಯಕ್ಕೆ ತುರ್ತು ಸೇವೆ ಸಿಗುತ್ತಿರುವ ಪರಿಣಾಮ ಸಾವಿರಾರು ಜನರ ಜೀವ ಉಳಿಯುತ್ತಿದೆ. ಅಪಘಾತ ಸಮಯ ಹಾಗೂ ಗರ್ಭಿಣಿ ಹಾಗೂ ಬಾಣಂತನ ವಿಚಾರದಲ್ಲಿಯೂ 108 ಸಿಬ್ಬಂದಿ ಔದಾರ್ಯತೆ ಮೆರೆದಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ಮುಖ್ಯವಾಗಿ ಕೋವಿಡ್ನಂತಹ ಸಂಕಷ್ಟದ ಸಮಯದಲ್ಲಿಯೂ ಆಂಬ್ಯುಲೆನ್ಸ್ ವೈದ್ಯ, ಸಿಬ್ಬಂದಿ ಎದೆಗುಂದದೇ ಕರ್ತವ್ಯ ನಿರ್ವಹಿಸಿದ್ದಾರೆ. ಕೋವಿಡ್ ಪಾಸಿಟಿವ್ ಇದ್ದ 7 ಮಹಿಳೆಯರಿಗೆ ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸೌಲಭ್ಯ ಕೊರತೆ: ಬಹುತೇಕ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೂ ಹೆರಿಗೆ ಮತ್ತು ಪ್ರಸೂತಿ ವೈದ್ಯರಿಲ್ಲ. ಇದಲ್ಲದೇ ವೈದ್ಯರಿಲ್ಲದ ಆಸ್ಪತ್ರೆಗಳ ಸಂಖ್ಯೆಯೇ ಹೆಚ್ಚಿದೆ. ಹೀಗಾಗಿ ಜನತೆ ಅನಿವಾರ್ಯವಾಗಿ ತುರ್ತು ಸಮಯದಲ್ಲಿ ನಗರದಲ್ಲಿರುವ ಆಸ್ಪತ್ರೆ ಹುಡುಕಿಕೊಂಡು ಹೋಗಬೇಕಿದೆ. ಇಂತಹ ಸಮಯದಲ್ಲಿ 108ಗೆ ಕರೆ ಮಾಡಿ, ನೆರವು ಕೋರಲಾಗುತ್ತಿದೆ. ಬಹುತೇಕ ಸಮಯದಲ್ಲಿ ಗರ್ಭಿಣಿಯರನ್ನು ಆಸ್ಪತ್ರೆವರೆಗೂ ಕರೆತಂದ ಬಳಿಕ ಹೆರಿಗೆಯಾಗಿದೆ. ಕೆಲವೊಮ್ಮೆ ಅನಿವಾರ್ಯ ಸ್ಥಿತಿಯಲ್ಲಿ ಆಂಬ್ಯುಲೆನ್ಸ್ನಲ್ಲಿಯೇ ಹೆರಿಗೆಯಾದಾಗ, ವಾಹನದಲ್ಲಿರುವ ಸಿಬ್ಬಂದಿಯೇ ಗಟ್ಟಿ ಧೈರ್ಯ ಮಾಡಿ, ತಾಯಿ-ಮಗುವಿನ ಜೀವ ಉಳಿಸುವ ಕಾರ್ಯ ಮಾಡಿದ್ದಾರೆ. ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯರು ಹಾಗೂ ಸೌಲಭ್ಯ ನೀಡಿದರೆ, ಆಂಬ್ಯುಲೆನ್ಸ್ನಲ್ಲಿ ಹೆರಿಗೆಯಾಗುವುದು ತಪ್ಪಲಿದೆ.
ಕುಟುಂಬ ನಿಟ್ಟುಸಿರು: ಆಂಬ್ಯುಲೆನ್ಸ್ನಲ್ಲಿ ಹೆರಿಗೆಯಾದ ಬಳಿಕ ಕೂಡಲೇ ಮಹಿಳೆಯರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಲಾಗುತ್ತಿದೆ. ಆಂಬ್ಯುಲೆನ್ಸ್ನಲ್ಲಿ ಹೆರಿಗೆಯಾದ ಬಹುತೇಕ ಪ್ರಕರಣಗಳಲ್ಲಿ ತಾಯಿ, ಮಗು ಆರೋಗ್ಯದಿಂದ ಇರುವುದು ಕುಟುಂಬವನ್ನು ನಿಟ್ಟುಸಿರು ಬಿಡುವಂತೆ ಮಾಡಿದ್ದು, ಸಾಮಾನ್ಯ ಹೆರಿಗೆಯಿಂದ ಅನುಕೂಲವೂ ಆಗಿದೆ. 2020ರ ಮಾರ್ಚ್ನಲ್ಲಿ - 17, ಏಪ್ರಿಲ್ - 10, ಮೇ - 10, ಜೂನ್ - 19, ಜುಲೈ - 10, ಆಗಸ್ಟ್ - 19, ಸೆಪ್ಟೆಂಬರ್ - 13, ಅಕ್ಟೋಬರ್ - 12, ನವೆಂಬರ್ - 26, ಡಿಸೆಂಬರ್ - 15, 2021ರ ಜನವರಿಯಲ್ಲಿ - 14, ಫೆಬ್ರವರಿ - 21, ಮಾರ್ಚ್ - 11, ಏಪ್ರಿಲ್ - 15, ಮೇ - 1, ಜೂನ್ - 10 ಹೆರಿಗೆ ಪ್ರಕರಣಗಳು ವರದಿಯಾಗಿವೆ.
ಜಿಲ್ಲೆಯಲ್ಲಿಎಷ್ಟು ಹೆರಿಗೆ?
ರಾಯಚೂರು ಜಿಲ್ಲಾದ್ಯಂತ ಕಳೆದ 2020ರ ಮಾರ್ಚ್ನಿಂದ 2021ರ ಜೂನ್ವರೆಗೆ 108 ಆಂಬ್ಯುಲೆನ್ಸ್ನಲ್ಲಿ 223 ಮಹಿಳೆಯರಿಗೆ ಹೆರಿಗೆಯಾಗಿದೆ. ಸಿಂಧನೂರು ತಾಲೂಕಿನಲ್ಲಿ - 23, ದೇವದುರ್ಗದಲ್ಲಿ - 13, ಲಿಂಗಸುಗೂರು - 41, ಮಾನ್ವಿಯಲ್ಲಿ - 107, ರಾಯಚೂರಿನಲ್ಲಿ - 39 ಹೆರಿಗೆ ಪ್ರಕರಣಗಳ ವರದಿಯಾಗಿದೆ.
'ಕಷ್ಟಕಾಲದಲ್ಲಿ ಜನರಿಗೆ ತುರ್ತಾಗಿ ಸ್ಪಂದಿಸುತ್ತಿದ್ದೇವೆ. ಆಂಬ್ಯುಲೆನ್ಸ್ನಲ್ಲಿ ತರಬೇತಿ ಪಡೆದಿರುವ ಸ್ಟಾಫ್ ನರ್ಸ್ಗಳು (ಇಎನ್ಟಿ) ಮಹಿಳೆಯರಿಗೆ ಹೆರಿಗೆ ಮಾಡಿಸುತ್ತಿದ್ದಾರೆ. ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ಜೀವದ ಭಯ ಬಿಟ್ಟು ಕರೆತರುತ್ತೇವೆ. ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ನಮ್ಮ ಸಿಬ್ಬಂದಿಯನ್ನು ಸರಕಾರ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಬೇಕು. ಸರಕಾರ ಅಗತ್ಯ ಸೌಲಭ್ಯ ಕೊಡಬೇಕು. ಇದರಿಂದ ನಮಗೆ ಕೆಲಸ ಮಾಡಲು ಮತ್ತಷ್ಟು ಪ್ರೋತ್ಸಾಹ ಸಿಗಲಿದೆ. ನಮ್ಮ ಸಿಬ್ಬಂದಿಗಳು ಪ್ರತಿ ದಿನವೂ ಹರಸಾಹಸ ಪಡುತ್ತಿದ್ದು, ಅವರಿಂದಾಗಿ ಉತ್ತಮ ಸೇವೆ ನೀಡಲಾಗುತ್ತಿದೆ' ಎನ್ನುತ್ತಾರೆ, 108 ಆರೋಗ್ಯ ಕವಚ ನೌಕರರ ಸಂಘದ ರಾಯಚೂರು ಜಿಲ್ಲಾ ಉಪಾಧ್ಯಕ್ಷ ಯಾಸೀನ್ ಬಿ. ಗಣೇಕಲ್..
ಸಿಂಧನೂರು (ರಾಯಚೂರು): ಗ್ರಾಮೀಣ ಪ್ರದೇಶದಲ್ಲಿರುವ ಆಸ್ಪತ್ರೆಗಳಲ್ಲಿ ವೈದ್ಯ, ಸಿಬ್ಬಂದಿ ಕೊರತೆಯಿಂದ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ನೆರವಾಗುವ ಮೂಲಕ ಸರಕಾರದ ಆರೋಗ್ಯ ಕವಚ 108 ಆಂಬ್ಯುಲೆನ್ಸ್ನಲ್ಲಿ ಒಂದು ವರ್ಷದಲ್ಲೇ 223 ಮಹಿಳೆಯರಿಗೆ ಹೆರಿಗೆ ಮಾಡಿಸಿರುವುದು ವಿಶೇಷವಾಗಿದೆ.
ಮುಖ್ಯವಾಗಿ ಕೋವಿಡ್ನಂತಹ ಸಂಕಷ್ಟದ ಸಮಯದಲ್ಲಿಯೂ ಆಂಬ್ಯುಲೆನ್ಸ್ ವೈದ್ಯ, ಸಿಬ್ಬಂದಿ ಎದೆಗುಂದದೇ ಕರ್ತವ್ಯ ನಿರ್ವಹಿಸಿದ್ದಾರೆ. ಕೋವಿಡ್ ಪಾಸಿಟಿವ್ ಇದ್ದ 7 ಮಹಿಳೆಯರಿಗೆ ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸೌಲಭ್ಯ ಕೊರತೆ: ಬಹುತೇಕ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೂ ಹೆರಿಗೆ ಮತ್ತು ಪ್ರಸೂತಿ ವೈದ್ಯರಿಲ್ಲ. ಇದಲ್ಲದೇ ವೈದ್ಯರಿಲ್ಲದ ಆಸ್ಪತ್ರೆಗಳ ಸಂಖ್ಯೆಯೇ ಹೆಚ್ಚಿದೆ. ಹೀಗಾಗಿ ಜನತೆ ಅನಿವಾರ್ಯವಾಗಿ ತುರ್ತು ಸಮಯದಲ್ಲಿ ನಗರದಲ್ಲಿರುವ ಆಸ್ಪತ್ರೆ ಹುಡುಕಿಕೊಂಡು ಹೋಗಬೇಕಿದೆ. ಇಂತಹ ಸಮಯದಲ್ಲಿ 108ಗೆ ಕರೆ ಮಾಡಿ, ನೆರವು ಕೋರಲಾಗುತ್ತಿದೆ. ಬಹುತೇಕ ಸಮಯದಲ್ಲಿ ಗರ್ಭಿಣಿಯರನ್ನು ಆಸ್ಪತ್ರೆವರೆಗೂ ಕರೆತಂದ ಬಳಿಕ ಹೆರಿಗೆಯಾಗಿದೆ. ಕೆಲವೊಮ್ಮೆ ಅನಿವಾರ್ಯ ಸ್ಥಿತಿಯಲ್ಲಿ ಆಂಬ್ಯುಲೆನ್ಸ್ನಲ್ಲಿಯೇ ಹೆರಿಗೆಯಾದಾಗ, ವಾಹನದಲ್ಲಿರುವ ಸಿಬ್ಬಂದಿಯೇ ಗಟ್ಟಿ ಧೈರ್ಯ ಮಾಡಿ, ತಾಯಿ-ಮಗುವಿನ ಜೀವ ಉಳಿಸುವ ಕಾರ್ಯ ಮಾಡಿದ್ದಾರೆ. ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯರು ಹಾಗೂ ಸೌಲಭ್ಯ ನೀಡಿದರೆ, ಆಂಬ್ಯುಲೆನ್ಸ್ನಲ್ಲಿ ಹೆರಿಗೆಯಾಗುವುದು ತಪ್ಪಲಿದೆ.
ಕುಟುಂಬ ನಿಟ್ಟುಸಿರು: ಆಂಬ್ಯುಲೆನ್ಸ್ನಲ್ಲಿ ಹೆರಿಗೆಯಾದ ಬಳಿಕ ಕೂಡಲೇ ಮಹಿಳೆಯರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಲಾಗುತ್ತಿದೆ. ಆಂಬ್ಯುಲೆನ್ಸ್ನಲ್ಲಿ ಹೆರಿಗೆಯಾದ ಬಹುತೇಕ ಪ್ರಕರಣಗಳಲ್ಲಿ ತಾಯಿ, ಮಗು ಆರೋಗ್ಯದಿಂದ ಇರುವುದು ಕುಟುಂಬವನ್ನು ನಿಟ್ಟುಸಿರು ಬಿಡುವಂತೆ ಮಾಡಿದ್ದು, ಸಾಮಾನ್ಯ ಹೆರಿಗೆಯಿಂದ ಅನುಕೂಲವೂ ಆಗಿದೆ. 2020ರ ಮಾರ್ಚ್ನಲ್ಲಿ - 17, ಏಪ್ರಿಲ್ - 10, ಮೇ - 10, ಜೂನ್ - 19, ಜುಲೈ - 10, ಆಗಸ್ಟ್ - 19, ಸೆಪ್ಟೆಂಬರ್ - 13, ಅಕ್ಟೋಬರ್ - 12, ನವೆಂಬರ್ - 26, ಡಿಸೆಂಬರ್ - 15, 2021ರ ಜನವರಿಯಲ್ಲಿ - 14, ಫೆಬ್ರವರಿ - 21, ಮಾರ್ಚ್ - 11, ಏಪ್ರಿಲ್ - 15, ಮೇ - 1, ಜೂನ್ - 10 ಹೆರಿಗೆ ಪ್ರಕರಣಗಳು ವರದಿಯಾಗಿವೆ.
ಜಿಲ್ಲೆಯಲ್ಲಿಎಷ್ಟು ಹೆರಿಗೆ?
ರಾಯಚೂರು ಜಿಲ್ಲಾದ್ಯಂತ ಕಳೆದ 2020ರ ಮಾರ್ಚ್ನಿಂದ 2021ರ ಜೂನ್ವರೆಗೆ 108 ಆಂಬ್ಯುಲೆನ್ಸ್ನಲ್ಲಿ 223 ಮಹಿಳೆಯರಿಗೆ ಹೆರಿಗೆಯಾಗಿದೆ. ಸಿಂಧನೂರು ತಾಲೂಕಿನಲ್ಲಿ - 23, ದೇವದುರ್ಗದಲ್ಲಿ - 13, ಲಿಂಗಸುಗೂರು - 41, ಮಾನ್ವಿಯಲ್ಲಿ - 107, ರಾಯಚೂರಿನಲ್ಲಿ - 39 ಹೆರಿಗೆ ಪ್ರಕರಣಗಳ ವರದಿಯಾಗಿದೆ.
'ಕಷ್ಟಕಾಲದಲ್ಲಿ ಜನರಿಗೆ ತುರ್ತಾಗಿ ಸ್ಪಂದಿಸುತ್ತಿದ್ದೇವೆ. ಆಂಬ್ಯುಲೆನ್ಸ್ನಲ್ಲಿ ತರಬೇತಿ ಪಡೆದಿರುವ ಸ್ಟಾಫ್ ನರ್ಸ್ಗಳು (ಇಎನ್ಟಿ) ಮಹಿಳೆಯರಿಗೆ ಹೆರಿಗೆ ಮಾಡಿಸುತ್ತಿದ್ದಾರೆ. ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ಜೀವದ ಭಯ ಬಿಟ್ಟು ಕರೆತರುತ್ತೇವೆ. ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ನಮ್ಮ ಸಿಬ್ಬಂದಿಯನ್ನು ಸರಕಾರ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಬೇಕು. ಸರಕಾರ ಅಗತ್ಯ ಸೌಲಭ್ಯ ಕೊಡಬೇಕು. ಇದರಿಂದ ನಮಗೆ ಕೆಲಸ ಮಾಡಲು ಮತ್ತಷ್ಟು ಪ್ರೋತ್ಸಾಹ ಸಿಗಲಿದೆ. ನಮ್ಮ ಸಿಬ್ಬಂದಿಗಳು ಪ್ರತಿ ದಿನವೂ ಹರಸಾಹಸ ಪಡುತ್ತಿದ್ದು, ಅವರಿಂದಾಗಿ ಉತ್ತಮ ಸೇವೆ ನೀಡಲಾಗುತ್ತಿದೆ' ಎನ್ನುತ್ತಾರೆ, 108 ಆರೋಗ್ಯ ಕವಚ ನೌಕರರ ಸಂಘದ ರಾಯಚೂರು ಜಿಲ್ಲಾ ಉಪಾಧ್ಯಕ್ಷ ಯಾಸೀನ್ ಬಿ. ಗಣೇಕಲ್..