ಆ್ಯಪ್ನಗರ

ಘನ ತ್ಯಾಜ್ಯಗಳ ಒಡಲಾಗಿರುವ ಹಳ್ಳ

ನೀರು ಹರಿದು ಅಂತರ್ಜಲ ಮಟ್ಟ ಕಾಯ್ದುಕೊಳ್ಳುವಲ್ಲಿ ಸಹಕಾರಿಯಾಗಿದ್ದ ಹಳ್ಳ ಇಂದು ಕಸ-ಕಡ್ಡಿಗಳು ತುಂಬಿಕೊಂಡು ನೀರು ಹರಿಯದ ಸ್ಥಿತಿ ನಿರ್ಮಾಣವಾಗಿದೆ.

Vijaya Karnataka 17 May 2019, 2:11 pm
ಲಿಂಗಸುಗೂರು : ನೀರು ಹರಿದು ಅಂತರ್ಜಲ ಮಟ್ಟ ಕಾಯ್ದುಕೊಳ್ಳುವಲ್ಲಿ ಸಹಕಾರಿಯಾಗಿದ್ದ ಹಳ್ಳ ಇಂದು ಕಸ-ಕಡ್ಡಿಗಳು ತುಂಬಿಕೊಂಡು ನೀರು ಹರಿಯದ ಸ್ಥಿತಿ ನಿರ್ಮಾಣವಾಗಿದೆ.
Vijaya Karnataka Web a stream of solid waste
ಘನ ತ್ಯಾಜ್ಯಗಳ ಒಡಲಾಗಿರುವ ಹಳ್ಳ


ಸ್ಥಳೀಯ ಲಂಡಕ್ಕಿನ ಹಳ್ಳ ಸುಮಾರು ವರ್ಷಗಳ ಹಿಂದೆ ಜಾನುವಾರುಗಳಿಗೆ ಹಾಗೂ ಜನತೆಗೆ ನೀರಿನ ಮೂಲ ಸೆಲೆಯಾಗಿತ್ತು. ದನಕರುಗಳಿಗೆ ಕುಡಿಯಲು ನೀರು, ಬಟ್ಟೆ ತೊಳೆಯಲು, ರೈತರು ಹಳ್ಳದ ನೀರಿನಿಂದಲೇ ಬೆಳೆ ಬೆಳೆಯುತ್ತಿದ್ದರು. ಇದೀಗ ಯಾರೂ ತಿರುಗಿ ನೋಡದಂತಾಗಿದೆ.

ಕಸ-ಕಡ್ಡಿಗಳ ತಾಣ: ಪಟ್ಟಣದ ಲಕ್ಷ್ಮೀದೇವಿ ದೇವಸ್ಥಾನ, ಬಸ್‌ ನಿಲ್ದಾಣ, ಪಿಂಚಣಿಪುರ ಓಣಿ, ಸುಣ್ಣಗಾರ ಗಲ್ಲಿ ಸೇರಿ ಇನ್ನಿತರ ಕಡೆ ಹರಿಯುತ್ತಿರುವ ಹಳ್ಳದಲ್ಲಿ ಹೋಟೆಲ್‌, ಖಾನಾವಳಿ, ಮಾಂಸದ ಅಂಗಡಿ, ಹಣ್ಣಿನ ಅಂಗಡಿಗಳ ತ್ಯಾಜ್ಯ ಹಳ್ಳದಲ್ಲಿಯೇ ಹಾಕುತ್ತಾರೆ. ಇದರಿಂದ ವಿಪರೀತ ದುರ್ನಾತ ಬೀರುತ್ತಿದೆ. ಸೊಳ್ಳೆ ಕಾಟ ಹೇಳತೀರದಾಗಿದೆ. ನಾನಾ ಸಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ.

ಒಂದೇಡೆ ತ್ಯಾಜ್ಯಗಳಿಂದ ತುಂಬಿರುವ ಹಳ್ಳ, ಮತ್ತೊಂದಡೆ ನೆಲ ಕಾಣದಷ್ಟು ಜಾಲಿಗಿಡ ಬೆಳೆದು ಹಳ್ಳದಲ್ಲಿ ನೀರು ಹರಿಯದಂತಾಗಿದೆ.

ಹಳ್ಳದಲ್ಲಿ ತ್ಯಾಜ್ಯ ಹಾಕುತ್ತಿರುವ ಬಗ್ಗೆ ಪುರಸಭೆ ಮೃದುಧೋರಣೆ ತೋರುತ್ತಿದೆ. ಇದರಿಂದ ತ್ಯಾಜ್ಯ ಹಾಕುವುದಕ್ಕೆ ಕಡಿವಾಣ ಇಲ್ಲದಂತಾಗಿದೆ. ಇದಲ್ಲದೆ ಹಳ್ಳದಲ್ಲಿ ಬೆಳೆದಿರುವ ಜಾಲಿಗಿಡಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸುವ ಕೆಲಸ ಮಾಡುವಲ್ಲಿ ಪುರಸಭೆ ಅಧಿಕಾರಿಗಳು ನಿರ್ಲಕ್ಷ ್ಯ ಮಾಡುತ್ತಿದ್ದಾರೆ. ಇದರಿಂದ ಇಡೀ ವಾತವರಣವೇ ಹದಗಡುತ್ತಿದೆ ಎಂದು ಇಲ್ಲಿನ ನಾಗರಿಕರು ಆರೋಪಿಸಿದ್ದಾರೆ.

ಕಸ ಹಾಕೋಲ್ಲ : ಲಿಂಗಸುಗೂರು ಪಟ್ಟಣವನ್ನು ಸ್ವಚ್ಛವಾಗಿಡಲು ಸ್ಥಳೀಯ ಪುರಸಭೆ ವತಿಯಿಂದ ಮನೆ ಮನೆಗೆ ಹಾಗೂ ಅಂಗಡಿಗಳಿಗೆ ತ್ಯಾಜ್ಯ ಸಂಗ್ರಹಿಸಲು ಹತ್ತಾರು ವಾಹನ ವ್ಯವಸ್ಥೆ ಮಾಡಲಾಗಿದೆ. ಆದರೆ ಕೆಲ ಅಂಗಡಿಗಳ ಮಾಲಿಕರು ತ್ಯಾಜ್ಯವನ್ನು ವಾಹನಗಳಿಗೆ ಹಾಕದೇ, ಹಳ್ಳಕ್ಕೆ ಸುರಿಯುತ್ತಾರೆ. ಇದು ಹಳ್ಳದ ಅಕ್ಕಪಕ್ಕದ ನಿವಾಸಿಗಳ ತೊಂದೆ ಉಂಟುಮಾಡುತ್ತಿದೆ. ಪುರಸಭೆ ಕೆಲಸಕ್ಕೆ ಸಾರ್ವಜನಿಕರೇ ಸಾಥ್‌ ನೀಡದಿದ್ದರೆ ಸ್ವಚ್ಛತೆ ಹೇಗೆ ಮೂಡುತ್ತದೆ ಎಂದು ಹಲವರು ಪ್ರಶ್ನಿಸುವಂತಾಗಿದೆ.

----
ಸ್ಥಳೀ ಹಳ್ಳದ ಸ್ವಚ್ಛತೆ ಹೆಚ್ಚು ಗಮನ ಹರಿಸಲಾಗುವುದು. ತ್ಯಾಜ್ಯ ಹಾಕುವವರಿಗೆ ಶೀಘ್ರವೇ ನೋಟಿಸ್‌ ಜಾರಿ ಮಾಡಿ ಕಸ ಹಾಕದಂತೆ ಎಚ್ಚರಿಕೆ ನೀಡುತ್ತೇನೆ. ಮುಂದಿನ ದಿನಗಳಲ್ಲಿ ನೀರಿನ ಮೂಲ ಕಾಪಾಡಲಾಗುವುದು.

- ಕೆ.ಮುತ್ತಪ್ಪ, ಮುಖ್ಯಾಧಿಕಾರಿ ಪುರಸಭೆ ಲಿಂಗಸುಗೂರು.




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ