ಆ್ಯಪ್ನಗರ

ಕೊಳವೆಬಾವಿಯಲ್ಲಿ ಆಕಸ್ಮಿಕ ಸ್ಫೋಟ;7 ಮಂದಿಗೆ ಗಾಯ

ತಾಲೂಕಿನ ಹೀರಾ ಗ್ರಾಮದ ಜಮೀನಿನೊಂದರ ಕೊಳವೆಬಾವಿಯಲ್ಲಿ ಬುಧವಾರ ಮೋಟಾರ್ ಇಳಿಸುವಾಗ ಆಕಸ್ಮಿಕವಾಗಿ ಸ್ಫೋಟಿಸಿದ್ದು, 7 ಮಂದಿ ಗಾಯಗೊಂಡಿದ್ದಾರೆ.

Vijaya Karnataka 13 Jun 2019, 12:00 am
ಸಿರವಾರ (ರಾಯಚೂರು): ತಾಲೂಕಿನ ಹೀರಾ ಗ್ರಾಮದ ಜಮೀನಿನೊಂದರ ಕೊಳವೆಬಾವಿಯಲ್ಲಿ ಬುಧವಾರ ಮೋಟಾರ್ ಇಳಿಸುವಾಗ ಆಕಸ್ಮಿಕವಾಗಿ ಸ್ಫೋಟಿಸಿದ್ದು, 7 ಮಂದಿ ಗಾಯಗೊಂಡಿದ್ದಾರೆ.
Vijaya Karnataka Web accidental blast 7 injured
ಕೊಳವೆಬಾವಿಯಲ್ಲಿ ಆಕಸ್ಮಿಕ ಸ್ಫೋಟ;7 ಮಂದಿಗೆ ಗಾಯ


ಈಶ್ವರ್, ಹಂಪಣ್ಣ, ಭೀಮಣ್ಣ, ಗೌಸ್, ಅಂಬಣ್ಣ, ಶರಣಪ್ಪ ಹಾಗೂ ವೆಂಕಟೇಶ್ ಗಾಯಗೊಂಡವರು. ಕವಿತಾಳ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.

ಗ್ರಾಮದ ಅಂಬರೇಶ ನಾಯಕ ಅವರ ಜಮೀನಿನಲ್ಲಿ ಕೊಳವೆಬಾವಿಯ ಮೋಟಾರ್ ಸುಟ್ಟ ಪರಿಣಾಮ ಬೇರೊಂದು ಮೋಟಾರ್ ಅಳವಡಿಸಲಾಗುತ್ತಿತ್ತು. ಮೋಟಾರ್ ಸರಾಗ ಇಳಿಯದಿದ್ದಾಗ ರಾಸಾಯನಿಕ ಬಳಸಲಾಗಿದೆ ಎನ್ನಲಾಗಿದೆ. ಈ ರಾಸಾಯನಿಕದಿಂದ ಸ್ಫೋಟ ಸಂಭವಿಸಿದೆ ಎಂದು ರೈತರು ಹೇಳುತ್ತಾರೆ. ಈ ಸ್ಫೋಟಕ್ಕೆ ಭೂಮಿಯಿಂದ ಹೊರಬಂದ ಇಥೇನಾಲ್ ಕಾರಣ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಶಂಕೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ