ಆ್ಯಪ್ನಗರ

ಪಾಲಕರ ತ್ಯಾಗ ಸ್ಮರಿಸಿಕೊಳ್ಳಲು ಸಲಹೆ

ಅಭ್ಯಾಸ ಕೊಡಿಸಲು ನಿಮ್ಮ ಪಾಲಕರು ನಿಮಗಾಗಿ ಮಾಡಿದ ತ್ಯಾಗವನ್ನ ಪದವೀಧರರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ನವೋದಯ ಶಿಕ್ಷ ಣ ಸಂಸ್ಥೆಯ ಚೇರ್‌ಮನ್‌ ಎಸ್‌.ಆರ್‌.ರೆಡ್ಡಿ ಹೇಳಿದರು.

Vijaya Karnataka 16 May 2018, 5:00 am
ರಾಯಚೂರು : ಅಭ್ಯಾಸ ಕೊಡಿಸಲು ನಿಮ್ಮ ಪಾಲಕರು ನಿಮಗಾಗಿ ಮಾಡಿದ ತ್ಯಾಗವನ್ನ ಪದವೀಧರರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ನವೋದಯ ಶಿಕ್ಷ ಣ ಸಂಸ್ಥೆಯ ಚೇರ್‌ಮನ್‌ ಎಸ್‌.ಆರ್‌.ರೆಡ್ಡಿ ಹೇಳಿದರು.
Vijaya Karnataka Web RAC-RCH15HD05


ನಗರದ ನವೋದಯ ಶಿಕ್ಷ ಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳ ಘಟಿಕೋತ್ಸವ ಸಮಾರಂಭದ ಅಧ್ಯಕ್ಷ ತೆವಹಿಸಿ ಮಂಗಳವಾರ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಶೈಕ್ಷ ಣಿಕ ಜೀವನದಲ್ಲಿ ಯಶಸ್ವಿಯಾಗಿ ಮುಂದುವರಿಯಲು ನವೋದಯ ಶಿಕ್ಷ ಣ ಸಂಸ್ಥೆಯು ಸಮರ್ಪಕ ಅಡಿಪಾಯ ಹಾಕಿಕೊಟ್ಟಿದೆ. ಈ ನಿಟ್ಟಿನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಮೈಮರೆಯದೇ ನೈಜ ಸ್ಥಿತಿಯನ್ನು ಅರಿತು ಜೀವನದಲ್ಲಿ ಶ್ರಮವಹಿಸಿ ಕಾರ್ಯನಿರ್ವಹಿಸಬೇಕು. ಈ ಸಂದರ್ಭದಲ್ಲಿ ರಾರ‍ಯಂಕ್‌ ಪಡೆದ ವಿದ್ಯಾರ್ಥಿಗಳಿಗೆ, ಹಾಗೂ ಕಾಲೇಜುಮಟ್ಟದ ಪ್ರತಿ ಕೋರ್ಸುಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮೆಡಲ್‌ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.

ಘಟಿಕೋತ್ಸವ ಸಮಾರಂಭದಲ್ಲಿ ಸಂಸ್ಥೆಯ ರಜಿಸ್ಟ್ರಾರ್‌ ಡಾ.ಟಿ.ಶ್ರಶ್ರೀನಿವಾಸ, ಮೆಡಿಕಲ್‌ ಕಾಲೇಜಿನ ಪ್ರಾಂಶುಪಾಲ ವಿಜಯಚಂದ್ರ, ಅಶೋಕ ಮಹೇಂದ್ರಕರ್‌, ವಿಜಯಕುಮಾರ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ