ರಾಯಚೂರು: ನ್ಯಾಯವಾದಿಗಳ ಜತೆ ಪಿಎಸ್ಐ ಅನುಚಿವ ವರ್ತನೆ ಖಂಡಿಸಿ ನ್ಯಾಯಾಲಯ ಕಲಾಪದಿಂದ ದೂರ ಉಳಿದಿರುವ ನ್ಯಾಯಮೂರ್ತಿಗಳು ಗುರುವಾರ ಪ್ರತಿಭಟನೆ ನಡೆಸಿದ್ದಾರೆ.
ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅಕ್ರೋಶ ವ್ಯಕ್ತಪಡಿಸಿರುವ ನ್ಯಾಯವಾಧಿಗಳು, ಪಿಎಸ್ಐ ಅಮಾನತ್ತಿಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಅಷ್ಟಕ್ಕೂ ನಡೆದದ್ದೇನು?
ನಗರದ ಸ್ಟೇಷನ್ ವೃತ್ತದಲ್ಲಿ ಊಟ ಪಾರ್ಸಲ್ ತೆಗೆದುಕೊಂಡು ಹೋಗುತ್ತಿದ್ದ ವಿಕಲಚೇತನ ನ್ಯಾಯವಾದಿ ವೀರಯ್ಯಸ್ವಾಮಿ ಎಂಬುವವರಿಗೆ ಪಶ್ಚಿಮ ಠಾಣೆ ಪಿಎಸ್ಐ ನಾಗರಾಜ ಎನ್ನುವವರು, ಇಲ್ಲಿ ಏಕೆ ನಿಂತಿದ್ದಿ ಎಂದು ಹೊಡೆದಾಗ ಇಬ್ಬರ ನಡುವೆ ಮಾತಿನ ಚಕಮಕಿಯಾಗಿದೆ. ವಾಗ್ವಾದ ನಡೆಸಿದ ನ್ಯಾಯವಾದಿಯನ್ನು ಠಾಣೆಗೆ ಕರೆತಂದು ಕೈಕೊಳ ಹಾಕಿ ಕಿಟಕಿಗೆ ಕಟ್ಟಿಹಾಕಿ ನಿಲ್ಲಿಸಿರುವ ಫೋಟೋ ವೈರಲ್ ಆಗಿತ್ತು. ವಿಷಯ ತಿಳಿದ ರಾಯಚೂರು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್.ಭಾನುರಾಜ ಪೊಲೀಸರೊಂದಿಗೆ ಮಾತುಕತೆ ನಡೆಸಿ ಪೊಲೀಸರ ವಶದಲ್ಲಿದ್ದ ನ್ಯಾಯವಾದಿಯನ್ನು ಬಿಡುಗಡೆಗೊಳಿಸಿ ಕರೆತಂದಿದ್ದರು.
ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅಕ್ರೋಶ ವ್ಯಕ್ತಪಡಿಸಿರುವ ನ್ಯಾಯವಾಧಿಗಳು, ಪಿಎಸ್ಐ ಅಮಾನತ್ತಿಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಅಷ್ಟಕ್ಕೂ ನಡೆದದ್ದೇನು?
ನಗರದ ಸ್ಟೇಷನ್ ವೃತ್ತದಲ್ಲಿ ಊಟ ಪಾರ್ಸಲ್ ತೆಗೆದುಕೊಂಡು ಹೋಗುತ್ತಿದ್ದ ವಿಕಲಚೇತನ ನ್ಯಾಯವಾದಿ ವೀರಯ್ಯಸ್ವಾಮಿ ಎಂಬುವವರಿಗೆ ಪಶ್ಚಿಮ ಠಾಣೆ ಪಿಎಸ್ಐ ನಾಗರಾಜ ಎನ್ನುವವರು, ಇಲ್ಲಿ ಏಕೆ ನಿಂತಿದ್ದಿ ಎಂದು ಹೊಡೆದಾಗ ಇಬ್ಬರ ನಡುವೆ ಮಾತಿನ ಚಕಮಕಿಯಾಗಿದೆ. ವಾಗ್ವಾದ ನಡೆಸಿದ ನ್ಯಾಯವಾದಿಯನ್ನು ಠಾಣೆಗೆ ಕರೆತಂದು ಕೈಕೊಳ ಹಾಕಿ ಕಿಟಕಿಗೆ ಕಟ್ಟಿಹಾಕಿ ನಿಲ್ಲಿಸಿರುವ ಫೋಟೋ ವೈರಲ್ ಆಗಿತ್ತು. ವಿಷಯ ತಿಳಿದ ರಾಯಚೂರು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್.ಭಾನುರಾಜ ಪೊಲೀಸರೊಂದಿಗೆ ಮಾತುಕತೆ ನಡೆಸಿ ಪೊಲೀಸರ ವಶದಲ್ಲಿದ್ದ ನ್ಯಾಯವಾದಿಯನ್ನು ಬಿಡುಗಡೆಗೊಳಿಸಿ ಕರೆತಂದಿದ್ದರು.