ಆ್ಯಪ್ನಗರ

ನಾಲ್ಕು ದಿನ ಕಳೆದರೂ ಆರೋಪಿ ಪತ್ತೆಯಿಲ್ಲ

ತಾಲೂಕಿನ ಸಿದ್ರಾಂಪುರ ಗ್ರಾಮಕ್ಕೆ ಹೋಗುವ ಮಾರ್ಗ ನಡುವೆ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ದಾಖಲಾಗಿ 4 ದಿನ ಕಳೆದರೂ ಇನ್ನೂ ಆರೋಪಿ ಪತ್ತೆಯಾಗಿಲ್ಲ.

Vijaya Karnataka 28 Jan 2020, 3:09 pm
ಸಿಂಧನೂರು: ತಾಲೂಕಿನ ಸಿದ್ರಾಂಪುರ ಗ್ರಾಮಕ್ಕೆ ಹೋಗುವ ಮಾರ್ಗ ನಡುವೆ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ದಾಖಲಾಗಿ 4 ದಿನ ಕಳೆದರೂ ಇನ್ನೂ ಆರೋಪಿ ಪತ್ತೆಯಾಗಿಲ್ಲ.
Vijaya Karnataka Web after four days no accused was found
ನಾಲ್ಕು ದಿನ ಕಳೆದರೂ ಆರೋಪಿ ಪತ್ತೆಯಿಲ್ಲ


ಸಿಂಧನೂರಿನಿಂದ ಸ್ವಗ್ರಾಮಕ್ಕೆ ತಂದೆ ಹಾಗೂ ಮಗಳು ಜ.24 ರಂದು ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಯೊಬ್ಬ ಬೈಕ್‌ನಲ್ಲಿಬಂದಿದ್ದ. ಆಗ ತಂದೆ, ತನ್ನ ಮಗಳನ್ನು ಕರೆದೊಯ್ದು ಗ್ರಾಮಕ್ಕೆ ಬಿಡುವಂತೆ ಕೇಳಿದ್ದ. ಆದರೆ, ಬೈಕ್‌ನಲ್ಲಿಬಂದಿದ್ದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ, ಬಳಿಕ ಗ್ರಾಮದಲ್ಲಿಬಿಟ್ಟು ಹೋಗಿದ್ದ. ಮನೆಗೆ ಹೋಗಿದ್ದಾಗ ಬಾಲಕಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿರುವುದು ಕಂಡುಬಂದಿತ್ತು. ಸ್ಥಳಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು, ತಂದೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ವ್ಯಕ್ತಿಯೊಬ್ಬನ ಮಾಹಿತಿ ನೀಡಿದ್ದ. ಆತನನ್ನು ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಆತ ಆರೋಪಿಯಲ್ಲಎಂಬುದು ಗೊತ್ತಾಗಿದೆ. ತಂದೆಯ ಗೊಂದಲದ ಹೇಳಿಕೆ ಆರೋಪಿಯ ಪತ್ತೆಗೆ ಹಿನ್ನಡೆಯಾಗಲು ಕಾರಣ ಎನ್ನಲಾಗಿದೆ. ಮೊರಾರ್ಜಿ ವಸತಿಶಾಲೆಯಿಂದ ಬಾಲಕಿಯನ್ನು ಕರೆದೊಯ್ದ ವಿಚಾರದಲ್ಲಿವಸತಿ ಶಾಲೆಯ ಸಿಬ್ಬಂದಿ ನಿರ್ಲಕ್ಷತ್ರ್ಯ ಇದೆ ಎಂಬ ಆರೋಪವೂ ಕೇಳಿಬಂದಿದೆ.

...

ಅತ್ಯಾಚಾರ ಆರೋಪಿಯ ಪತ್ತೆಗಾಗಿ ನಿರಂತರ ಕಾರ್ಯಾಚರಣೆ ನಡೆದಿದೆ. ಬಾಲಕಿಯ ತಂದೆಯಿಂದ ಸರಿಯಾದ ಮಾಹಿತಿ ಲಭ್ಯವಾಗುತ್ತಿಲ್ಲ. ಹೀಗಾಗಿ, ಪತ್ತೆ ಕಾರ್ಯ ವಿಳಂಬವಾಗಿದೆ. ಆರೋಪಿ ಪತ್ತೆ ಹಚ್ಚಲಾಗುವುದು.

-ಬಾಲಚಂದ್ರ ಲಕ್ಕಂ, ಸಿಪಿಐ ಸಿಂಧನೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ