ನಾಗರಾಜ ಗೊರೇಬಾಳ, ಲಿಂಗಸುಗೂರು
ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯಗಳಲ್ಲಿ ಹರಿಯುವ ನೀರು ಒಂದೇ. ಆದರೆ, ಅಭಿವೃದ್ಧಿಯಲ್ಲಿ ಮಾತ್ರ ಸರಕಾರ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮ ಇಬ್ಬಗೆ ನೀತಿ ಅನುಸರಿಸುತ್ತಿವೆ. ಆಲಮಟ್ಟಿ ಬಳಿ ಸುಂದರ ಉದ್ಯಾನ ನಿರ್ಮಿಸಿದ್ದರೆ, ಬಸವಸಾಗರ ಮಾತ್ರ ಭಣಗುಟ್ಟುತ್ತಿದೆ.
ಬಸವಸಾಗರ ಜಲಾಶಯವನ್ನು 1982ರಲ್ಲಿ ನಾಡಿಗೆ ಸಮರ್ಪಣೆಮಾಡಲಾಗಿದೆ. ಲಿಂಗಸುಗೂರು, ಮುದ್ದೇಬಿಹಾಳ ಹಾಗೂ ಸುರಪುರ ತಾಲೂಕುಗಳ ಒಟ್ಟು 77 ಹಳ್ಳಿಗಳನ್ನು ಸ್ಥಳಾಂತರಿಸಿ, ಪುನರ್ವಸತಿ ಕಲ್ಪಿಸಲಾಗಿದೆ. ರಾಜ್ಯದ ಮೂರನೇ ದೊಡ್ಡ ಅಣೆಕಟ್ಟು ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. ರಾಯಚೂರು, ವಿಜಯಪುರ, ಯಾದಗಿರಿ, ಕಲುಬುರಗಿ ಜಿಲ್ಲೆಗಳ ಲಕ್ಷಾಂತರ ರೈತರ ಜೀವನಾಡಿಯಾಗಿದೆ.
ಆಲಮಟ್ಟಿ ಜಲಾಶಯದಲ್ಲಿ 1993-94ರಿಂದ ಇಲ್ಲಿಯವರೆಗೆ ಮೂರು ಹಂತಗಳಲ್ಲಿ 33,506 ಎಕರೆ ಪ್ರದೇಶದಲ್ಲಿ ಅತ್ಯಾದುನಿಕ ಸುಂದರ ಉದ್ಯಾನ ಹಾಗೂ ಸಂಗೀತ ಕಾರಂಜಿ ನಿರ್ಮಿಸಿ ಪ್ರವಾಸಿಗರನ್ನು ಆಕರ್ಷಿಸಲಾಗುತ್ತಿದೆ. ಬಸವಸಾಗರ ಜಲಾಶಯ ನಾಡಿಗೆ ಸಮರ್ಪಣೆಗೊಂಡು 36 ವರ್ಷಗಳೇ ಗತಿಸಿದರೂ ಜಲಾಶಯ ಸುತ್ತಲಿನ ಪ್ರದೇಶದ ಅಭಿವೃದ್ಧಿಗೆ ಅನಾದರ ಮುಂದುವರಿದಿದೆ. ಪ್ರವಾಸಿಗರನ್ನು ಸೆಳೆಯಲು ಉದ್ಯಾನ ನಿರ್ಮಾಣ ಕನ್ನಡಿಯ ಗಂಟಾಗಿದೆ. ಜಲಾಶಯ ಸುತ್ತಲಿನ ಪ್ರದೇಶದಲ್ಲಿ ನೂರಾರು ಎಕರೆ ಜಮೀನು ಪಾಳು ಬಿದ್ದು ಜಾಲಿಗಿಡಗಳ ತಾಣವಾಗಿದೆ.
ಪ್ರವಾಸಿ ತಾಣ: ತಾಲೂಕಿನ ಜಲದುರ್ಗ ಕೋಟೆ, ಛಾಯಾಭಗವತಿ, ಚಾಲುಕ್ಯ ಶೈಲಿಯ ಜಡೆ ಶಂಕರಲಿಂಗೇಶ್ವರ ದೇವಸ್ಥಾನ ಸೇರಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಹಲವು ತಾಣಗಳು ಜಲಾಶಯದಿಂದ ಕೆಲವೇ ಕಿ.ಮೀ.ಗಳ ಅಂತರದಲ್ಲಿವೆ. ಹೆಚ್ಚೆಚ್ಚು ಪ್ರವಾಸಿಗರನ್ನು ಈ ಭಾಗದತ್ತ ಸೆಳೆಯುವ ಉದ್ದೇಶದಿಂದ ಬಸವಸಾಗರ ಜಲಾಶಯದ ಬಳಿ ಉದ್ಯಾನ ನಿರ್ಮಾಣ ಅಗತ್ಯವಾಗಿದೆ. ಆಲಮಟ್ಟಿ ಮಾದರಿಯಲ್ಲಿ ಇಲ್ಲೂ ಉದ್ಯಾನ ನಿರ್ಮಿಸಬೇಕೆಂಬುದು ಪ್ರವಾಸಿಗರ ಒತ್ತಾಸೆಯಾಗಿದೆ.
ಈ ಹಿಂದಿನ ಸರಕಾರದಲ್ಲಿ ಕೃಷ್ಣಾ ಅಚ್ಚಕಟ್ಟು ವ್ಯಾಪ್ತಿಯವರೇ ಪ್ರವಾಸೋಧ್ಯಮ, ಜಲಸಂಪನ್ಮೂಲ ಸಚಿವರಾಗಿದ್ದರೂ ಬಸವಸಾಗರ ಬಳಿ ಉದ್ಯಾನ ನಿರ್ಮಿಸುವ ಬಗ್ಗೆ ಚಿಂತನೆ ನಡೆಯಲಿಲ್ಲ. ಉದ್ಯಾನ ನಿರ್ಮಿಸುವುದು ಒತ್ತಟ್ಟಿಗಿರಲಿ, ನೂರಾರು ಎಕರೆ ಪ್ರದೇಶದಲ್ಲಿ ದಟ್ಟವಾಗಿ ಜಾಲಿಗಿಡಗಳನ್ನು ಕಡಿದು ಸ್ವಚ್ಛಗೊಳಿಸಿ, ಉಪಯುಕ್ತ ಗಿಡಮರಗಳನ್ನಾದರೂ ಬೆಳೆಸಲು ಕ್ರಮಕೈಗೊಳ್ಳಲಿ ಎಂಬುದು ಈ ಭಾಗದ ಜನರ ಆಗ್ರಹವಾಗಿದೆ.
.........
ಜಲಾಶಯದ ಜೀವನ ಚರಿತ್ರೆ
*1982ರಲ್ಲಿ ನಾಡಿಗೆ ಸಮರ್ಪಣೆ
*ಒಟ್ಟು 77 ಹಳ್ಳಿಗಳ ಸ್ಥಳಾಂತರ
*ರಾಜ್ಯದ 3ನೇ ದೊಡ್ಡ ಅಣೆಕಟ್ಟು
*ಲಕ್ಷಾಂತರ ರೈತರ ಜೀವನಾಡಿ
-----
ಆಲಮಟ್ಟಿ ಉದ್ಯಾನ ಮಾದರಿಯಲ್ಲಿ ಬಸವಸಾಗರ ಜಲಾಶಯದ ಮುಂಭಾಗದಲ್ಲೂ ಉದ್ಯಾನ ನಿರ್ಮಿಸುವ ಬಗ್ಗೆ ಸರಕಾರಕ್ಕೆ ಹಲವು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾತಿ ಹಂತದಲ್ಲಿದೆ.
-ಕೃಷ್ಣೇಗೌಡ, ಚೀಫ್ ಎಂಜಿನಿಯರ್, ಕೆಬಿಜೆಎನ್ಎಲ್, ನಾರಾಯಣಪುರ ವೃತ್ತ
........
ಬಸವಸಾಗರ ಜಲಾಶಯ ಮುಂಭಾಗದಲ್ಲಿ ನೂರಾರು ಎಕರೆ ಜಾಗ ಈಗ ಪಾಳು ಬಿದ್ದಿದೆ. ಉದ್ಯಾನ ನಿರ್ಮಿಸಿದರೆ ನಿತ್ಯವೂ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇದರ ಸುತ್ತಲಿನ ಐತಿಹಾಸಿಕ ತಾಣಗಳಿಗೆ ಹೆಚ್ಚಿನ ಮನ್ನಣೆ ನೀಡಿದಂತಾಗುತ್ತದೆ. ಈ ಬಗ್ಗೆ ಸರಕಾರ ಉದ್ಯಾನ ನಿರ್ಮಿಸಲು ಕ್ರಮಕೈಗೊಳ್ಳಬೇಕು.
- ಸುಮಂತ, ಪ್ರವಾಸಿಗ, ಕನಕಗಿರಿ
ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯಗಳಲ್ಲಿ ಹರಿಯುವ ನೀರು ಒಂದೇ. ಆದರೆ, ಅಭಿವೃದ್ಧಿಯಲ್ಲಿ ಮಾತ್ರ ಸರಕಾರ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮ ಇಬ್ಬಗೆ ನೀತಿ ಅನುಸರಿಸುತ್ತಿವೆ. ಆಲಮಟ್ಟಿ ಬಳಿ ಸುಂದರ ಉದ್ಯಾನ ನಿರ್ಮಿಸಿದ್ದರೆ, ಬಸವಸಾಗರ ಮಾತ್ರ ಭಣಗುಟ್ಟುತ್ತಿದೆ.
ಬಸವಸಾಗರ ಜಲಾಶಯವನ್ನು 1982ರಲ್ಲಿ ನಾಡಿಗೆ ಸಮರ್ಪಣೆಮಾಡಲಾಗಿದೆ. ಲಿಂಗಸುಗೂರು, ಮುದ್ದೇಬಿಹಾಳ ಹಾಗೂ ಸುರಪುರ ತಾಲೂಕುಗಳ ಒಟ್ಟು 77 ಹಳ್ಳಿಗಳನ್ನು ಸ್ಥಳಾಂತರಿಸಿ, ಪುನರ್ವಸತಿ ಕಲ್ಪಿಸಲಾಗಿದೆ. ರಾಜ್ಯದ ಮೂರನೇ ದೊಡ್ಡ ಅಣೆಕಟ್ಟು ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. ರಾಯಚೂರು, ವಿಜಯಪುರ, ಯಾದಗಿರಿ, ಕಲುಬುರಗಿ ಜಿಲ್ಲೆಗಳ ಲಕ್ಷಾಂತರ ರೈತರ ಜೀವನಾಡಿಯಾಗಿದೆ.
ಆಲಮಟ್ಟಿ ಜಲಾಶಯದಲ್ಲಿ 1993-94ರಿಂದ ಇಲ್ಲಿಯವರೆಗೆ ಮೂರು ಹಂತಗಳಲ್ಲಿ 33,506 ಎಕರೆ ಪ್ರದೇಶದಲ್ಲಿ ಅತ್ಯಾದುನಿಕ ಸುಂದರ ಉದ್ಯಾನ ಹಾಗೂ ಸಂಗೀತ ಕಾರಂಜಿ ನಿರ್ಮಿಸಿ ಪ್ರವಾಸಿಗರನ್ನು ಆಕರ್ಷಿಸಲಾಗುತ್ತಿದೆ. ಬಸವಸಾಗರ ಜಲಾಶಯ ನಾಡಿಗೆ ಸಮರ್ಪಣೆಗೊಂಡು 36 ವರ್ಷಗಳೇ ಗತಿಸಿದರೂ ಜಲಾಶಯ ಸುತ್ತಲಿನ ಪ್ರದೇಶದ ಅಭಿವೃದ್ಧಿಗೆ ಅನಾದರ ಮುಂದುವರಿದಿದೆ. ಪ್ರವಾಸಿಗರನ್ನು ಸೆಳೆಯಲು ಉದ್ಯಾನ ನಿರ್ಮಾಣ ಕನ್ನಡಿಯ ಗಂಟಾಗಿದೆ. ಜಲಾಶಯ ಸುತ್ತಲಿನ ಪ್ರದೇಶದಲ್ಲಿ ನೂರಾರು ಎಕರೆ ಜಮೀನು ಪಾಳು ಬಿದ್ದು ಜಾಲಿಗಿಡಗಳ ತಾಣವಾಗಿದೆ.
ಪ್ರವಾಸಿ ತಾಣ: ತಾಲೂಕಿನ ಜಲದುರ್ಗ ಕೋಟೆ, ಛಾಯಾಭಗವತಿ, ಚಾಲುಕ್ಯ ಶೈಲಿಯ ಜಡೆ ಶಂಕರಲಿಂಗೇಶ್ವರ ದೇವಸ್ಥಾನ ಸೇರಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಹಲವು ತಾಣಗಳು ಜಲಾಶಯದಿಂದ ಕೆಲವೇ ಕಿ.ಮೀ.ಗಳ ಅಂತರದಲ್ಲಿವೆ. ಹೆಚ್ಚೆಚ್ಚು ಪ್ರವಾಸಿಗರನ್ನು ಈ ಭಾಗದತ್ತ ಸೆಳೆಯುವ ಉದ್ದೇಶದಿಂದ ಬಸವಸಾಗರ ಜಲಾಶಯದ ಬಳಿ ಉದ್ಯಾನ ನಿರ್ಮಾಣ ಅಗತ್ಯವಾಗಿದೆ. ಆಲಮಟ್ಟಿ ಮಾದರಿಯಲ್ಲಿ ಇಲ್ಲೂ ಉದ್ಯಾನ ನಿರ್ಮಿಸಬೇಕೆಂಬುದು ಪ್ರವಾಸಿಗರ ಒತ್ತಾಸೆಯಾಗಿದೆ.
ಈ ಹಿಂದಿನ ಸರಕಾರದಲ್ಲಿ ಕೃಷ್ಣಾ ಅಚ್ಚಕಟ್ಟು ವ್ಯಾಪ್ತಿಯವರೇ ಪ್ರವಾಸೋಧ್ಯಮ, ಜಲಸಂಪನ್ಮೂಲ ಸಚಿವರಾಗಿದ್ದರೂ ಬಸವಸಾಗರ ಬಳಿ ಉದ್ಯಾನ ನಿರ್ಮಿಸುವ ಬಗ್ಗೆ ಚಿಂತನೆ ನಡೆಯಲಿಲ್ಲ. ಉದ್ಯಾನ ನಿರ್ಮಿಸುವುದು ಒತ್ತಟ್ಟಿಗಿರಲಿ, ನೂರಾರು ಎಕರೆ ಪ್ರದೇಶದಲ್ಲಿ ದಟ್ಟವಾಗಿ ಜಾಲಿಗಿಡಗಳನ್ನು ಕಡಿದು ಸ್ವಚ್ಛಗೊಳಿಸಿ, ಉಪಯುಕ್ತ ಗಿಡಮರಗಳನ್ನಾದರೂ ಬೆಳೆಸಲು ಕ್ರಮಕೈಗೊಳ್ಳಲಿ ಎಂಬುದು ಈ ಭಾಗದ ಜನರ ಆಗ್ರಹವಾಗಿದೆ.
.........
ಜಲಾಶಯದ ಜೀವನ ಚರಿತ್ರೆ
*1982ರಲ್ಲಿ ನಾಡಿಗೆ ಸಮರ್ಪಣೆ
*ಒಟ್ಟು 77 ಹಳ್ಳಿಗಳ ಸ್ಥಳಾಂತರ
*ರಾಜ್ಯದ 3ನೇ ದೊಡ್ಡ ಅಣೆಕಟ್ಟು
*ಲಕ್ಷಾಂತರ ರೈತರ ಜೀವನಾಡಿ
-----
ಆಲಮಟ್ಟಿ ಉದ್ಯಾನ ಮಾದರಿಯಲ್ಲಿ ಬಸವಸಾಗರ ಜಲಾಶಯದ ಮುಂಭಾಗದಲ್ಲೂ ಉದ್ಯಾನ ನಿರ್ಮಿಸುವ ಬಗ್ಗೆ ಸರಕಾರಕ್ಕೆ ಹಲವು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾತಿ ಹಂತದಲ್ಲಿದೆ.
-ಕೃಷ್ಣೇಗೌಡ, ಚೀಫ್ ಎಂಜಿನಿಯರ್, ಕೆಬಿಜೆಎನ್ಎಲ್, ನಾರಾಯಣಪುರ ವೃತ್ತ
........
ಬಸವಸಾಗರ ಜಲಾಶಯ ಮುಂಭಾಗದಲ್ಲಿ ನೂರಾರು ಎಕರೆ ಜಾಗ ಈಗ ಪಾಳು ಬಿದ್ದಿದೆ. ಉದ್ಯಾನ ನಿರ್ಮಿಸಿದರೆ ನಿತ್ಯವೂ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇದರ ಸುತ್ತಲಿನ ಐತಿಹಾಸಿಕ ತಾಣಗಳಿಗೆ ಹೆಚ್ಚಿನ ಮನ್ನಣೆ ನೀಡಿದಂತಾಗುತ್ತದೆ. ಈ ಬಗ್ಗೆ ಸರಕಾರ ಉದ್ಯಾನ ನಿರ್ಮಿಸಲು ಕ್ರಮಕೈಗೊಳ್ಳಬೇಕು.
- ಸುಮಂತ, ಪ್ರವಾಸಿಗ, ಕನಕಗಿರಿ