ಆ್ಯಪ್ನಗರ

ಕರೆದು ವರಕೊಡುವ ಕಚೇರಿ ಆಂಜನೇಯ

ಪಟ್ಟಣದ ನ್ಯಾಯಾಲಯ, ಪೊಲೀಸ್‌ ಠಾಣೆ ಹಾಗೂ ತಹಸಿಲ್‌ ಕಚೇರಿಗಳ ಮಧ್ಯದಲ್ಲಿಮೂರು ಇಲಾಖೆಗಳಿಗೆ ಕೊಂಡಿಯಂತಿರುವ ಕಚೇರಿ ಆಂಜನೇಯನ ಪ್ರಸಿದ್ಧಿ ಇಡೀ ತಾಲೂಕಿನ ತುಂಬಾ ಪಸರಿಸಿದೆ. ಈ ಆಂಜನೇಯ, ತಾಲೂಕಿನ ಭಕ್ತರ ದೃಷ್ಟಿಯಲ್ಲಿಕರೆದು ವರ ನೀಡಿ ಉದ್ಧರಿಸುವ ದೇವರು ಎಂದೇ ಪ್ರಸಿದ್ಧಿ.

Vijaya Karnataka 31 Aug 2019, 2:49 pm
ಮಾನ್ವಿ: ಪಟ್ಟಣದ ನ್ಯಾಯಾಲಯ, ಪೊಲೀಸ್‌ ಠಾಣೆ ಹಾಗೂ ತಹಸಿಲ್‌ ಕಚೇರಿಗಳ ಮಧ್ಯದಲ್ಲಿಮೂರು ಇಲಾಖೆಗಳಿಗೆ ಕೊಂಡಿಯಂತಿರುವ ಕಚೇರಿ ಆಂಜನೇಯನ ಪ್ರಸಿದ್ಧಿ ಇಡೀ ತಾಲೂಕಿನ ತುಂಬಾ ಪಸರಿಸಿದೆ. ಈ ಆಂಜನೇಯ, ತಾಲೂಕಿನ ಭಕ್ತರ ದೃಷ್ಟಿಯಲ್ಲಿಕರೆದು ವರ ನೀಡಿ ಉದ್ಧರಿಸುವ ದೇವರು ಎಂದೇ ಪ್ರಸಿದ್ಧಿ.
Vijaya Karnataka Web anjaneya temple
ಕರೆದು ವರಕೊಡುವ ಕಚೇರಿ ಆಂಜನೇಯ


ತಾಲೂಕಿನ ಬಹುತೇಕ ಜನರು ತಮ್ಮ ಕಾರ್ಯಗಳಿಗಾಗಿ ಒಂದಿಲ್ಲೊಂದು ಕಾರಣದಿಂದ ಪೊಲೀಸ್‌ ಠಾಣೆ, ತಹಸಿಲ್‌ ಕಚೇರಿ ಮತ್ತು ಕೋರ್ಟ್‌ಗಳಿಗೆ ಬರುತ್ತಾರೆ. ಹಾಗೆ ಬಂದವರು ಆಂಜನೇಯ ಸ್ವಾಮಿಯ ದರ್ಶನ ಪಡೆಯುತ್ತಾರೆ. ಬಳಿಕವೇ ತಮ್ಮ ಕೆಲಸಗಳತ್ತ ಮುಖ ಮಾಡುತ್ತಾರೆ.

ಇತಿಹಾಸ: ವಿಶ್ವಪ್ರಸಿದ್ಧ ಹಂಪಿ ಹಾಗೂ ಸಾಕಷ್ಟು ಕಡೆ ವ್ಯಾಸರಾಜರಿಂದ ಪ್ರತಿಷ್ಠಾಪನೆಯಾದ ಆಂಜನೇಯ ದೇವಸ್ಥಾನಗಳೇ ಕಾಣಸಿಗುತ್ತವೆ. ಆದರೆ ಕಚೇರಿ ಆಂಜನೇಯ ಮೂರ್ತಿಯು ಮಹಾಭಾರತದ ಸಮಯದಲ್ಲಿದ್ದ ರಾಜರಿಂದ ಪ್ರತಿಷ್ಠಾಪಿಸಲ್ಪಟ್ಟಿದೆ ಎಂದು ಇತಿಹಾಸದಿಂದ ತಿಳಿದುಬರುತ್ತದೆ. ಒಂದು ಕಾಲದಲ್ಲಿಬೃಹತ್‌ ಅಶ್ವತ್ಥ ವೃಕ್ಷದ ಕೆಳಗೆ ದೇವಸ್ಥಾನವಿತ್ತು. ಮಾನ್ವಿ ಪಟ್ಟಣವನ್ನು ಪ್ರವೇಶ ಮಾಡಲು ಮೊದಲು ಪಟ್ಟಣ ಪ್ರವೇಶಿಸುವ ಮಹಾದ್ವಾರ (ಅಗಸಿ) ದಾಟಿದ ತಕ್ಷಣ ಆಂಜನೇಯನ ದರ್ಶನ ಪಡೆದೇ ಪ್ರವೇಶಿಸಬೇಕಿತ್ತು. ಕಾಲಾಂತರದಲ್ಲಿಅಗಸಿ ಬಿದ್ದು ಹೋಗಿ ಸದ್ಯ ದೇವಸ್ಥಾನ ಮಾತ್ರ ಉಳಿದುಕೊಂಡಿದೆ. ನಂತರ ಈಗಿನ ಶಾಸಕ ಹಾಗೂ ಮಾಜಿ ಸಂಸದ ರಾಜಾ ಅಂಬಣ್ಣ ನಾಯಕ ಅವರ ತಂದೆ ರಾಜಾ ಹನುಮಪ್ಪನಾಯಕ ಅವರಿಂದ ದೇವಸ್ಥಾನ ಮೊದಲ ಬಾರಿಗೆ ಜೀರ್ಣೋದ್ಧಾರಗೊಂಡಿತು. 1990ರಲ್ಲಿದಿ.ರಾಜಾ ಅಂಬಣ್ಣ ನಾಯಕ ಈ ದೇವಸ್ಥಾನದ ಜೀರ್ಣೋದ್ಧಾರ ಮಾಡಿದರು. ಆಂಜನೇಯ ಸ್ವಾಮಿ ಮೂಲಮೂರ್ತಿಯ ಮೇಲೆ ಶ್ರೀಸೀತಾರಾಮ ದೇವರ ವಿಗ್ರಹವನ್ನೂ ಪ್ರತಿಷ್ಠಾಪಿಸಿರುವುದು ವಿಶೇಷವಾಗಿದೆ.

ನಿದರ್ಶನ: ಕಚೇರಿ ಆಂಜನೇಯ ದೇವಸ್ಥಾನದ ಹೊಸ ಕಟ್ಟಡವನ್ನು ನಾನಾ ಭಕ್ತರು ಸೇರಿ ನಿರ್ಮಿಸಿದ್ದಾರೆ. ರಸ್ತೆಯನ್ನು ಅತಿಕ್ರಮಿಸಿದ ಕಟ್ಟಡವೆಂದು ಸರಕಾರ ಗುರುತಿಸಿದಾಗ ಮಾನ್ವಿ ಪಟ್ಟಣದ ಜನತೆ ಜಾತಿ ಮತ ಪಂಥವೆಂದು ನೋಡದೇ ಕಚೇರಿ ಆಂಜನೇಯ ದೇವಸ್ಥಾನ ತಲತಲಾಂತರದಿಂದ ಬಂದಿದ್ದೆಂದು ಹೇಳಿ ದೇವಸ್ಥಾನದ ಸ್ವಲ್ಪ ಜಾಗವನ್ನು ರಸ್ತೆಗೆ ಬಿಟ್ಟುಕೊಟ್ಟ ಉದಾಹರಣೆಯೂ ಇದೆ. ಇಲ್ಲಿಗೆ ಬರುವ ಬಹತೇಕ ಭಕ್ತರು ಆಂಜನೇಯ ಸ್ವಾಮಿ ದರ್ಶನ ಪಡೆಯುತ್ತಾರೆ.

ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ನೇತೃತ್ವದಲ್ಲಿಪ್ರತಿ ವರ್ಷ ಶ್ರಾವಣದ ಕೊನೆಯ ದಿನ ಅಮವಾಸ್ಯೆಯಂದು ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯವನ್ನು ಭಕ್ತರು ಏರ್ಪಡಿಸಿರುತ್ತಾರೆ.

---
ಯಾವುದೇ ಕ್ಷೇತ್ರದವರಿಗೂ ಈ ಆಂಜನೇಯ ಸ್ವಾಮಿ ಕೃಪೆ ತೋರಿದರೆ ಯಶಸ್ಸು ಖಂಡಿತ ಸಿಗುತ್ತದೆ. ಸದಾ ಜಾಗೃತನಾಗಿರುವ ಆಂಜನೇಯ ಸ್ವಾಮಿಯ ಪವಾಡಗಳು ಸಾಕಷ್ಟಿವೆ.

-ರಾಜಾ ಮಹೇಂದ್ರ ನಾಯಕ, ಪುರಸಭೆ ಸದಸ್ಯರು, ಮಾನ್ವಿ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ