ಆ್ಯಪ್ನಗರ

ಬೇಡಿಕೆ ಈಡೇರಿಸಲು ಶಾಸಕರಿಗೆ ಮನವಿ

ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ನಾನಾ ಬೇಡಿಕೆ ಈಡೇರಿಸಬೇಕೆಂದು ಸಮೀಪದ ಗುರುಗುಂಟಾ ಗ್ರಾಮದ ನಾನಾ ಸಂಘಟನೆಗಳು ಶಾಸಕ ಮಾನಪ್ಪ ವಜ್ಜಲರಿಗೆ ಮನವಿ ಸಲ್ಲಿಸಿವೆ.

ವಿಕ ಸುದ್ದಿಲೋಕ 15 Mar 2016, 5:54 am
ಹಟ್ಟಿಚಿನ್ನದಗಣಿ; ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ನಾನಾ ಬೇಡಿಕೆ ಈಡೇರಿಸಬೇಕೆಂದು ಸಮೀಪದ ಗುರುಗುಂಟಾ ಗ್ರಾಮದ ನಾನಾ ಸಂಘಟನೆಗಳು ಶಾಸಕ ಮಾನಪ್ಪ ವಜ್ಜಲರಿಗೆ ಮನವಿ ಸಲ್ಲಿಸಿವೆ.
Vijaya Karnataka Web appealed to legislators to meet the demands
ಬೇಡಿಕೆ ಈಡೇರಿಸಲು ಶಾಸಕರಿಗೆ ಮನವಿ


ಗುರುಗುಂಟಾ ಗ್ರಾಮದಲ್ಲಿ ಇತ್ತೀಚೆಗೆ ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.

ಗ್ರಾಮದಲ್ಲಿ ಜನತಾ ಕಾಲೊನಿ, ಅಂಬೇಡ್ಕರ್ ಕಾಲೊನಿ, ಹೊಸೂರು, ಮಡ್ಡಿಕಾರ ಪೇಟೆಯಲ್ಲಿ ಎಸ್.ಸಿ ಹಾಗೂ ಎಸ್.ಟಿ ಜನರು ವಾಸಿಸುತ್ತಿದ್ದು, ಎಸ್‌ಇಪಿ, ಟಿಎಸ್‌ಪಿ ಯೋಜನೆ ಅಡಿಯಲ್ಲಿ ಸಿ.ಸಿ. ರಸ್ತೆ ನಿರ್ಮಿಸಬೇಕು. ಮಾನಿಗಿಡ ದೊಡ್ಡಿ, ಕಟಗರ ದೊಡ್ಡಿ, ಗೋಡೆರ ದೊಡಿ,್ಡ ಗುಜಲರ್ ದೊಡಿ,್ಡ ಗೊಲ್ಲರ ದೊಡ್ಡಿ, ದೇಸಾಯಿ ದೊಡ್ಡಿ, ಕಾಟಗಲ್ ದೊಡ್ಡಿ, ಬೈಲಗುಡ್ಡದವರ ದೊಡ್ಡಿ, ಚಿಕಲರ್ ದೊಡ್ಡಿ, ಕಟ್ಟಿಮನಿ ದೊಡ್ಡಿ, ನುಚ್ಚಿನೊರು ದೊಡ್ಡಿ, ಕಕ್ಕೇರ ದೊಡ್ಡಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಗ್ರಾಮದಲ್ಲಿ ಬಸ್ ನಿಲ್ದಾಣ ಇಲ್ಲದೇ ಇರುವುದರಿಂದ ಪ್ರಯಾಣಿಕರು ತೊಂದರೆ ಪಡುವಂತಾಗಿದೆ. ಹಾಗಾಗಿ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಅಮರೇಶ ನಾಯಕ, ಚಂದಪ್ಪ ಕಟ್ಟಿಮನಿ, ಶೇಖರಪ್ಪ ದೊಡ್ಡಮನಿ, ಸರ್ಜಪ್ಪ ನಾಯಕ ಇತರರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ