ಆ್ಯಪ್ನಗರ

ಇಸ್ಪೀಟ್‌ ಜೂಜಾಟ: 14ಆರೋಪಿಗಳ ಬಂಧನ

ಜಿಲ್ಲೆಯ ನಾನಾಕಡೆ ಶನಿವಾರ ಪೊಲೀಸ್‌ ಅಧಿಕಾರಿಗಳು ದಾಳಿ ನಡೆಸಿ 14ಜನ ಆರೋಪಿಗಳನ್ನು ಬಂಧಿಸಿ, 23880 ರೂ. ನಗದು ಜಪ್ತಿ ಮಾಡಿದ್ದಾರೆ.

Vijaya Karnataka 22 Jul 2019, 7:49 pm
ರಾಯಚೂರು :ಜಿಲ್ಲೆಯ ನಾನಾಕಡೆ ಶನಿವಾರ ಪೊಲೀಸ್‌ ಅಧಿಕಾರಿಗಳು ದಾಳಿ ನಡೆಸಿ 14ಜನ ಆರೋಪಿಗಳನ್ನು ಬಂಧಿಸಿ, 23880 ರೂ. ನಗದು ಜಪ್ತಿ ಮಾಡಿದ್ದಾರೆ.
Vijaya Karnataka Web arrest of 14 accused
ಇಸ್ಪೀಟ್‌ ಜೂಜಾಟ: 14ಆರೋಪಿಗಳ ಬಂಧನ


ಕೈ ಹೆಂಡ ತಯಾರಿಕೆ, ಇಸ್ಪೀಟ್‌, ಮಟಕಾ, ಜೂಜಾಟಗಳಲ್ಲಿ ತೊಡಗಿದ್ದವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜೂಜಾಟದಲ್ಲಿ ತೊಡಗಿದ್ದ ಕವಿತಾಳದ ರಾಜು ಎಂಬಾತನನ್ನು ಬಂಧಿಸಿ ಮಟಕಾ ಪಟ್ಟಿ, 1090 ರೂ.ನಗದು ಜಪ್ತಿ ಮಾಡಿಕೊಂಡು ಕವಿತಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಟಕಾದಲ್ಲಿ ತೊಡಗಿದ್ದ ಲಿಂಗಸುಗೂರಿನ ರಾಜಾಭಕ್ಷಾ ದರ್ಗಾದ ನಿವಾಸಿ ಸುಜಾತ ಅಲಿ ಎಂಬಾತನನ್ನು ಬಂಧಿಸಿ, ಮಟಕಾ ಪಟ್ಟಿ, 2100 ರೂ. ನಗದು ವಶಪಡಿಸಿಕೊಂಡಿದ್ದು, ಲಿಂಗಸುಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅದೇ ರೀತಿ ಸಿಂಧನೂರಿನ ನಿವಾಸಿ ಅಂಬಂಡೆಪ್ಪ ಎಂಬಾತನನ್ನು ಬಂಧಿಸಿ, 2300 ರೂ. ನಗದು, ಮೊಬೈಲ್‌, ಮಟ್ಕಾ ಚೀಟಿ ವಶಕ್ಕೆ ಪಡೆಯಲಾಗಿದ್ದು, ಸಿಂಧನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಟ್ಕಾದಲ್ಲಿ ತೊಡಗಿದ್ದ ರಾಯಚೂರು ನಗರದ ಹರಿಜನವಾಡ ನಿವಾಸಿ ಚನ್ನಪ್ಪ ಎಂಬಾತನನ್ನು ಬಂಧಿಸಿ, 2950 ರೂ. ನಗದು ವಶಪಡಿಸಿಕೊಂಡು ಮಾರ್ಕೆಟ್‌ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜೂಜಾಟದಲ್ಲಿ ತೊಡಗಿದ್ದ ಮುದ್ಗಲ್‌ ಠಾಣೆ ವ್ಯಾಪ್ತಿಯ ನಾಗಪ್ಪ ಮತ್ತು ವಿರುಪಾಕ್ಷ ಪ್ಪ ಎಂಬುವವರನ್ನು ಬಂಧಿಸಲಾಗಿದೆ. ಇಸ್ಪೀಟ್‌ ಆಡುತ್ತಿದ್ದ ಗಬ್ಬೂರಿನ ತಿರುಪತಿ, ಗಣೇಶ, ರಾಮರೆಡ್ಡಿ, ಬೂದೆಪ್ಪ, ಸೂಗೂರಯ್ಯ ಎಂಬುವವರನ್ನು ಬಂಧಿಸಿ, ಅವರಿಂದ 11720 ರೂ. ನಗದು ಜಪ್ತಿಮಾಡಿಕೊಂಡು ಗಬ್ಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಾನೂನು ಕ್ರಮ: ಕಾನೂನುಬಾಹಿರ ಚಟುವಟಿಕೆ ನಡೆಸುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡುವ ಕ್ರಮ ಜರುಗಿಸುವ ಬಗ್ಗೆ ಪೊಲೀಸ್‌ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಸಾರ್ವಜನಿಕರು ಪಟ್ಟಣ ಅಥವಾ ಗ್ರಾಮಗಳಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದು ರಾಯಚೂರು ಪೊಲೀಸ್‌ ಅಧೀಕ್ಷ ಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ