ಆ್ಯಪ್ನಗರ

ಎಲ್ಲರೊಂದಿಗೆ ಸಮಾಲೋಚಿಸಿ ಸಿಎಎ ಕಾಯಿದೆ ಜಾರಿಗೆ ತರಬಹುದಿತ್ತು: ರವಿಶಂಕರ್‌ ಗುರೂಜಿ

ಪೌರತ್ವ ತಿದ್ದುಪಡಿ ಕಾಯಿದೆ ಅಡಿಯಲ್ಲಿ ಪೌರತ್ವ ನೀಡುವಿಕೆಯಲ್ಲಿ ಯಾರಿಗೂ ಅನ್ಯಾಯ ಆಗಬಾರದು. ಹಾಗೊಂದು ವೇಳೆ ಅನ್ಯಾಯ ಮಾಡಿದರೆ ಬಾಧಿತರ ಪರವಾಗಿ ನಿಲ್ಲುವುದಾಗಿ ಶ್ರೀ ರವಿಶಂಕರ್‌ ಗುರೂಜಿ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Vijaya Karnataka Web 5 Feb 2020, 12:03 pm
ರಾಯಚೂರು: ಪೌರತ್ವ ಕಾಯಿದೆ ಜಾರಿಗೆ ವಿರೋಧಕ್ಕೆ ಮಾಹಿತಿ ನೀಡಿಕೆ ಕೊರತೆ ಕಾರಣ. ದೇಶದ ಎಲ್ಲ ನಿವಾಸಿಗಳನ್ನೊಳಗೊಂಡಂತೆ ಮೊದಲು ಸಮಾಲೋಚಿಸಿ ನಂತರ ಕೇಂದ್ರವು ಈ ಕಾಯಿದೆ ಜಾರಿಗೆ ತರಬಹುದಿತ್ತು ಎಂದು ಶ್ರೀ ರವಿಶಂಕರ್‌ ಗುರೂಜಿ ಅಭಿಪ್ರಾಯ ಪಟ್ಟಿದ್ದಾರೆ.
Vijaya Karnataka Web Sri Ravishankar Guruji


ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ರವಿಶಂಕರ್ ಗುರೂಜಿ, ಪೌರತ್ವ ನೀಡಿಕೆ ವಿಚಾರದಲ್ಲಿ ಯಾರಿಗೂ ಅನ್ಯಾಯ ಆಗಬಾರದು. ಅನ್ಯಾಯ ಮಾಡಿದರೆ ತಾವು ಬಾಧಿತರ ಪರ ನಿಲ್ಲುವುದಾಗಿ ಕೇಂದ್ರಕ್ಕೆ ಎಚ್ಚರಿಕೆ ನೀಡಿದರು.

ಧರ್ಮಾಧಾರಿತವಾಗಿ ಪೌರತ್ವ ನೀಡಿಕೆ ಸಮಂಜಸವಲ್ಲ. ಎಲ್ಲ ದೇಶಗಳಲ್ಲಿ ಶರಣು ಬಂದವರಿಗೆ ಸ್ಥಳೀಯ ಕಾನೂನಿನ್ವಯ ಪೌರತ್ವ ನೀಡುವ ಪದ್ಧತಿ ಇದೆ. ದೇಶೀ ಬಿತ್ತನೆ ಬೀಜದ ತಳಿಗಳ ವೃದ್ಧಿಗೆ ಸಂಸ್ಥೆಯಿಂದ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಯುವಕರಿಗೆ ಒತ್ತಡ ಮುಕ್ತ ಬದುಕು ನಿರ್ವಹಣೆ ತರಬೇತಿ ನೀಡಿಕೆ. ಯೋಗದಿಂದ ಉದ್ಯೋಗ ಎಂಬಂತೆ ಉದ್ಯೋಗ ಸೃಷ್ಟಿಗೆ ಸಂಸ್ಥೆಯಿಂದಲೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಶ್ರೀ ರವಿಶಂಕರ್‌ ಗುರೂಜಿ ತಿಳಿಸಿದರು.

ರಾಷ್ಟ್ರಮಟ್ಟದಲ್ಲಿ ಎನ್‌ಆರ್‌ಸಿ ಜಾರಿ ಇಲ್ಲ, ಸಂಸತ್‌ಗೆ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸ್ಥಾಪನೆಯ 40ನೇ ವರ್ಷಾಚರಣೆ ಶೀಘ್ರ ದಕ್ಷಿಣ ಭಾರತದಲ್ಲಿ ಆಯೋಜನೆಗೆ ಚಿಂತನೆ ನಡೆಸಲಾಗಿದೆ ಎಂದು ರವಿಶಂಕರ್‌ ಗುರೂಜಿ ತಿಳಿಸಿದರು.

ಸಿಎಎ ವಿರೋಧಿ ನಾಟಕ ಪ್ರದರ್ಶನ: ಬೀದರ್‌ ಶಾಲಾ ಶಿಕ್ಷಕ ಸೇರಿ ಇಬ್ಬರ ಬಂಧನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ