ಆ್ಯಪ್ನಗರ

ಶ್ರದ್ದಾ ಭಕ್ತಿಯಿಂದ ಬಕ್ರೀದ್‌ ಹಬ್ಬ ಆಚರಣೆ

ನಗರದಲ್ಲಿ ಬಕ್ರೀದ್‌ ಹಬ್ಬವನ್ನು ಸೋಮವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಬೆಳಗ್ಗೆ ಬಪ್ಪೂರು ರಸ್ತೆಯ ಈದ್ಗಾ ಮೈದಾನಕ್ಕೆ ಆಗಮಿಸಿದ ಮುಸ್ಲಿಂ ಬಾಂಧವರು, ಅಲ್ಲಾಹನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಾಸೀರ್‌ಸಾಬ ಕುರಾನ್‌ ಬೋಧಿಸಿದರು. ಜಾಫರ್‌ಸಾಬ್‌ ಪ್ರಾರ್ಥನೆ ಮಾಡಿಸಿದರು.

Vijaya Karnataka 14 Aug 2019, 4:24 pm
ಸಿಂಧನೂರು : ನಗರದಲ್ಲಿ ಬಕ್ರೀದ್‌ ಹಬ್ಬವನ್ನು ಸೋಮವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಬೆಳಗ್ಗೆ ಬಪ್ಪೂರು ರಸ್ತೆಯ ಈದ್ಗಾ ಮೈದಾನಕ್ಕೆ ಆಗಮಿಸಿದ ಮುಸ್ಲಿಂ ಬಾಂಧವರು, ಅಲ್ಲಾಹನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಾಸೀರ್‌ಸಾಬ ಕುರಾನ್‌ ಬೋಧಿಸಿದರು. ಜಾಫರ್‌ಸಾಬ್‌ ಪ್ರಾರ್ಥನೆ ಮಾಡಿಸಿದರು. ನಂತರ ಶಾಸಕ ವೆಂಕಟರಾವ್‌ ನಾಡಗೌಡ, ಆರ್‌ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ, ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ, ಈದ್ಗಾದ ಆಡಳಿತಾಧಿಕಾರಿ ಶಂಶಾಲಂ ನಾಗಡದಿನ್ನಿ, ಸಮಾಜದ ಮುಖಂಡರಾದ ಅಬ್ದುಲ್‌ಗನಿ ವಕೀಲ, ಚಂದೂಸಾಬ್‌ ಮುಳ್ಳೂರು, ಖಾಜಿಮಲಿಕ್‌, ಹುಸೇನ್‌ಸಾಬ, ಪೀರಪಾಷಾ ಜಾಗೀರದಾರ, ಬಾಬಾರಪಾಷಾ ಸೇರಿ ಹಲವರು ಇದ್ದರು. ತುರುವಿಹಾಳ ಪಟ್ಟಣದಲ್ಲಿಯೂ ಬಕ್ರೀದ್‌ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
Vijaya Karnataka Web bakreed festival celebration with devotion
ಶ್ರದ್ದಾ ಭಕ್ತಿಯಿಂದ ಬಕ್ರೀದ್‌ ಹಬ್ಬ ಆಚರಣೆ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ