ಆ್ಯಪ್ನಗರ

ಹಾರೋಬೂದಿ ಸಾಗಾಟಕ್ಕೆ ತಡೆ

ಆರ್‌ಟಿಪಿಎಸ್‌ ಹಾರೋಬೂದಿ ಸಾಗಾಟದಿಂದ ರಸ್ತೆಯುದ್ದಕ್ಕೂ ಇದ್ದ ನಿವಾಸಿಗಳ ಮೇಲೆ ಪರಿಣಾಮ ಬೀರುತ್ತಿದ್ದ ದೂರಿನ ಹಿನ್ನೆಲೆಯಲ್ಲಿಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಜನರಲ್ಲಿನಿರಾಳತೆ ಮೂಡಿಸಿದೆ.

Vijaya Karnataka 18 Feb 2020, 5:00 am
ರಾಯಚೂರು: ಆರ್‌ಟಿಪಿಎಸ್‌ ಹಾರೋಬೂದಿ ಸಾಗಾಟದಿಂದ ರಸ್ತೆಯುದ್ದಕ್ಕೂ ಇದ್ದ ನಿವಾಸಿಗಳ ಮೇಲೆ ಪರಿಣಾಮ ಬೀರುತ್ತಿದ್ದ ದೂರಿನ ಹಿನ್ನೆಲೆಯಲ್ಲಿಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಜನರಲ್ಲಿನಿರಾಳತೆ ಮೂಡಿಸಿದೆ.
Vijaya Karnataka Web barriers to haroboody trafficking
ಹಾರೋಬೂದಿ ಸಾಗಾಟಕ್ಕೆ ತಡೆ


ಹಾರೋಬೂದಿಯನ್ನು ಅಸುರಕ್ಷಿತವಾಗಿ ಸಾಗಣೆ ಮಾಡುವುದಕ್ಕೆ ಸೊಮವಾರದಿಂದಲೇ ತಡೆ ನೀಡಲಾಗಿದೆ. ಯಾಶ್‌ ಪಾಂಡ್‌ ಸುತ್ತಲೂ ಹಾಗೂ ಹಾರೋಬೂದಿ ಸಾಗಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿಶೇಖರಣೆಯಾಗಿರುವ ಬೂದಿಯನ್ನು ಸ್ವಚ್ಛಗೊಳಿಸಲಾಗುತ್ತಿದೆ. ಜೆಸಿಬಿ ಮತ್ತು ಟ್ರಾತ್ರ್ಯಕ್ಟರ್‌ನಿಂದ ರಸ್ತೆಯಲ್ಲಿಸಂಗ್ರಹವಾದ ಬೂದಿ ತೆರವುಗೊಳಿಸುವ ಕಾರ್ಯ ಸೋಮವಾರ ಬೆಳಗ್ಗೆಯಿಂದಲೇ ಆರಂಭವಾಯಿತು. ಹೀಗಾಗಿ, ಬೂದಿ ಹೊತ್ತೊಯ್ಯಲು ಬರುತ್ತಿದ್ದ ಟಿಪ್ಪರ್‌ಗಳಿಗೆ ನೀಡುವ ಗೇಟ್‌ಪಾಸ್‌ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಹಾರೋಬೂದಿ ಸಾಗಿಸುವ ಗುತ್ತಿಗೆದಾರರಿಗೆ ಹಾಗೂ ಬ್ರಿಕ್ಸ್‌ ಉದ್ಯಮಿಗಳಿಗೆ ಕೆಪಿಸಿಎಲ್‌ನಿಂದ ಸೂಚನೆ ನೀಡಲಾಗಿದೆ. ಹಾರೋಬೂದಿಯಿಂದ ಉಂಟಾಗಿರುವ ಸಮಸ್ಯೆ ಕುರಿತು 'ವಿಜಯ ಕರ್ನಾಟಕ' ನೆಮ್ಮದಿ ಕದಡಿದ ಬೂದಿ' ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಿದ್ದನ್ನು ಇಲ್ಲಿಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ