ಆ್ಯಪ್ನಗರ

ಬೈಕ್‌ ಕಳ್ಳರ ಕಾಟಕ್ಕೆ ಬೆಚ್ಚಿದ ಜನ

ನಗರದಲ್ಲಿಇತ್ತೀಚಿನ ದಿನಗಳಲ್ಲಿಹೆಚ್ಚುತ್ತಿರುವ ಬೈಕ್‌ ಕಳ್ಳತನ ಪ್ರಕರಣಗಳು ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡುತ್ತಿವೆ. ಮನೆ ಮುಂದೆ ನಿಲ್ಲಿಸಿದ ಬೈಕ್‌ಗಳು ಏಕಾಏಕಿ ಕಾಣೆಯಾಗುತ್ತಿದ್ದು, ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.

Vijaya Karnataka 7 Sep 2019, 5:00 am
ಸಿಂಧನೂರು: ನಗರದಲ್ಲಿಇತ್ತೀಚಿನ ದಿನಗಳಲ್ಲಿಹೆಚ್ಚುತ್ತಿರುವ ಬೈಕ್‌ ಕಳ್ಳತನ ಪ್ರಕರಣಗಳು ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡುತ್ತಿವೆ. ಮನೆ ಮುಂದೆ ನಿಲ್ಲಿಸಿದ ಬೈಕ್‌ಗಳು ಏಕಾಏಕಿ ಕಾಣೆಯಾಗುತ್ತಿದ್ದು, ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.
Vijaya Karnataka Web bike thieves
ಬೈಕ್‌ ಕಳ್ಳರ ಕಾಟಕ್ಕೆ ಬೆಚ್ಚಿದ ಜನ


ಹೋಟೆಲ್‌, ದೇವಸ್ಥಾನ, ಸಾರ್ವಜನಿಕ ಸ್ಥಳ ಸೇರಿ ಮನೆಮುಂದೆ ಬೈಕ್‌ ಬಿಡುತ್ತಿದ್ದ ಸವಾರರೀಗ ಚಿಂತೆಗೆ ಒಳಗಾಗಿದ್ದಾರೆ. ನಿಲ್ಲಿಸಿದ ಬೈಕ್‌ಗಳು ಕಾಣೆಯಾಗುವ ಪ್ರಕರಣಗಳಿಂದಾಗಿ ಹೆಚ್ಚಿನ ಎಚ್ಚರಿಕೆವಹಿಸುವ ಅನಿವಾರ್ಯತೆ ಎದುರಾಗಿದೆ. ಮಹೆಬೂಬಿಯಾ ಕಾಲೊನಿ, ಪಿಡಬ್ಲೂತ್ರ್ಯಡಿ ಕ್ಯಾಂಪ್‌ ಸೇರಿ ಪ್ರಮುಖ ಕಡೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದೆ. ಕಳ್ಳರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿಪೊಲೀಸ್‌ ಇಲಾಖೆ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಆದರೆ ನಿರಂತರವಾಗಿ ಕಳುವು ಘಟನೆ ನಡೆಯುತ್ತಿರುವುದು ತಲೆ ನೋವಿಗೆ ಕಾರಣವಾಗಿದೆ.

ವೀಡಿಯೊ ವೈರಲ್‌: ಕಳೆದ ಎರಡು ದಿನದ ಹಿಂದಷ್ಟೇ ಬಸ್‌ನಿಲ್ದಾಣ ಹತ್ತಿರದ ಹೋಟೆಲ್‌ ಮುಂಬದಿಯಲ್ಲಿ ನಿಲ್ಲಿಸಿದ್ದ ಬೈಕನ್ನು ವ್ಯಕ್ತಿಯೊಬ್ಬರು ಕಳುವು ಮಾಡಿಕೊಂಡು ಕೊಂಡೊಯ್ಯುವ ದೃಶ್ಯ ಸಿ.ಸಿ ಕ್ಯಾಮೆರಾದಲ್ಲಿಸೆರೆಯಾಗಿದ್ದು, ಈ ವೀಡಿಯೋ ಸಹ ವೈರಲ್‌ ಆಗಿದೆ.

ಪ್ರಕರಣ:ಕಳೆದ ಜನವರಿಯಿಂದ ಇಲ್ಲಿಯವರೆಗೆ ನಗರಠಾಣೆ ವ್ಯಾಪ್ತಿಯಲ್ಲಿ6 ಬೈಕ್‌ ಕಳ್ಳತನ ಪ್ರಕರಣ ದಾಖಲಾಗಿದ್ದು, ಒಂದು ಬೈಕ್‌ ಪತ್ತೆಯಾಗಿದೆ. ತುರುವಿಹಾಳ ಠಾಣೆ ವ್ಯಾಪ್ತಿಯಲ್ಲಿ-2, ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ-2 ಪ್ರಕರಣ ನಡೆದಿವೆ. ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ, ಠಾಣೆವರೆಗೆ ಬಾರದೆ ಇರುವಂತಹವರ ಬೈಕ್‌ ಮಾಲೀಕರ ಸಂಖ್ಯೆಯು ಹೆಚ್ಚಿದೆ. ಬೈಕ್‌ ಕಳ್ಳತನ ನಿಯಂತ್ರಣವಾಗುವ ನಿಟ್ಟಿನಲ್ಲಿಬೈಕ್‌ ಮಾಲೀಕರಲ್ಲಿಯೂ ಜಾಗೃತಿ ಮೂಡಬೇಕಿದೆ. ಕಡ್ಡಾಯವಾಗಿ ಬೈಕ್‌ಗಳಿಗೆ ಹ್ಯಾಂಡ್ಲ್‌ಲಾಕ್‌ ಮಾಡುವುದು ಸೇರಿ ಸುರಕ್ಷತಾ ಕ್ರಮ ಅನುಸರಿಸಬೇಕಾಗಿದೆ.

---

ಇತ್ತೀಚೆಗೆ ಬೈಕ್‌ ಕಳ್ಳತನ ಆಗಿರುವ ಪ್ರಕರಣಗಳ ಕುರಿತು ಗಮನಕ್ಕೆ ಬಂದಿದೆ. ಸಿರವಾರ ಠಾಣಾ ವ್ಯಾಪ್ತಿಯಲ್ಲಿಪ್ರಕರಣ ಬೇಧಿಧಿಸಲಾಗಿದೆ. ಬೈಕ್‌ ಕಳ್ಳರ ಗ್ಯಾಂಗ್‌ ಇರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು.

ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾಪೊಲೀಸ್‌ ವರಿಷ್ಠಾಧಿಧಿಕಾರಿ ರಾಯಚೂರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ