ಆ್ಯಪ್ನಗರ

ಮೂರು ತಿಂಗಳಲ್ಲಿ ಸಿದ್ದರಾಮಯ್ಯ ಮನೆಗೆ: ಬಿಎಸ್‌ವೈ

ರಾಜ್ಯದ ಮುಖ್ಯಮಂತ್ರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ, ಇನ್ನೂ ಮೂರು ತಿಂಗಳಲ್ಲಿ ಸಿದ್ದರಾಮಯ್ಯ ಮನೆಗೆ ಹೋಗುತ್ತಾರೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

Vijaya Karnataka Web 14 Dec 2017, 9:05 pm
ರಾಯಚೂರು: ರಾಜ್ಯದ ಮುಖ್ಯಮಂತ್ರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ, ಇನ್ನೂ ಮೂರು ತಿಂಗಳಲ್ಲಿ ಸಿದ್ದರಾಮಯ್ಯ ಮನೆಗೆ ಹೋಗುತ್ತಾರೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
Vijaya Karnataka Web bs yeddyurappa said karnataka cm acting as dictator
ಮೂರು ತಿಂಗಳಲ್ಲಿ ಸಿದ್ದರಾಮಯ್ಯ ಮನೆಗೆ: ಬಿಎಸ್‌ವೈ


ಲಿಂಗಸಗೂರಿನಲ್ಲಿ ಬಿಜೆಪಿ‌ ಪರಿವರ್ತನಾ ರ‍್ಯಾಲಿಯಲ್ಲಿ ಮಾತನಾಡಿದ ಬಿ ಎಸ್ ಯಡಿಯೂರಪ್ಪ ಕಾರ್ಯಕ್ರ ಆರಂಭಕ್ಕೂ ಮುನ್ನ ಕಾರ್ಯಕ್ರಮ ದಲ್ಲಿ ಪಟಾಕಿ ಹೊಡೆದು ಅಭ್ಯರ್ಥಿಗಳ ಭಾವಚಿತ್ರ ಹಿಡಿದಿದ್ದಕ್ಕೆ ಕಾರ್ಯಕರ್ತರ ವಿರುದ್ದ ಹರಿಹಾಯ್ದಿದ್ದು, ಬಿಜೆಪಿ ಕಾರ್ಯಕರ್ತರು ಈ ರೀತಿ ಅಶಿಸ್ತಿನಿಂದ ವರ್ತಿಸಬಾರದು ಎಂದು ಕಿವಿಮಾತು ಹೇಳಿದರು.

ಬಳಿಕ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ ಯಡಿಯೂರಪ್ಪ, 'ನಾನು ಅಧಿಕಾರಕ್ಕೆ ‌ಬಂದ ತಕ್ಷಣ ನಿಮಗೆ ಪಾಠ ಕಲಿಸುತ್ತೇನೆ, ಗುಜರಾತ್ ಹಾಗು ಹಿಮಾಚಲಪ್ರದೇಶದಲ್ಲಿ ನೆಗೆದು ಬಿದ್ದು ಹೋಗುತ್ತೀರಿ ಜನಹಿತ ಮರೆತು ಸಿದ್ದರಾಮಯ್ಯರಿಗೆ ಪಾಠ ಕಲಿಸಬೇಕಾಗಿದೆ' ಎಂದಿದ್ದಾರೆ.

ಇದೇ ವೇಳೆ ವಿದೇಶದಿಂದ ಖರೀದಿಸುವ ಮರಳಿನಲ್ಲಿ ಸರಕಾರ ಕಮಿಷನ್‌ ಹೊಡೆಯುತ್ತಿದೆ ಎಂದು ಹೇಳಿದ ಬಿಎಸ್‌ವೈ, ಮಲೇಷ್ಯಾಯಾದಿಂದ ಖರೀದಿಸು ಮರಳಿನಲ್ಲಿ ಎಷ್ಟು ಕಮಿಷನ್ ತೆಗೆದುಕೊಂಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ ಅವರನ್ನು ಸಿಎಂ ಸಿದ್ದರಾಮಯ್ಯ ಅವರೇ ಸೋಲಿಸಿದ್ದು. ಪ್ರಮಾಣ ಮಾಡಿ ಸೋಲಿಸಿಲ್ಲ ಎಂದು ಹೇಳುತ್ತೀರಾ? ಸವಾಲೆಸೆದಿದ್ದಾರೆ.

ಕಳಸಾ ಬಂಡೂರಿ ಯೋಜನೆಗೆ ಸಂಬಂಧಿಸಿ ಉಂಟಾಗಿರುವ ಸಮಸ್ಯೆ ಪರಿಹಾರಕ್ಕೆ ವಾರದಲ್ಲಿ ಮಾತುಕತೆ ನಡೆಸುವೆ ಎಂಬ ಭರವಸೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ