ಆ್ಯಪ್ನಗರ

ಬುದ್ದಿನ್ನಿ : ಚಾಮುಂಡೇಶ್ವರಿ ಜಾತ್ರೆ, ಕುಂಭಗಳ ಮೆರವಣಿ

ಪಟ್ಟಣ ಸಮೀಪದ ಬುದ್ದಿನ್ನಿ ಗ್ರಾಮದ ಆರಾಧ್ಯ ದೈವ ಚಾಮುಂಡೇಶ್ವರಿ ಜಾತ್ರೆಯು ಸಂಪನ್ನವಾಯಿತು. ಕಳೆದ ಒಂಭತ್ತು ದಿನಗಳಿಂದಲೂ ಗ್ರಾಮದ ಚಾಮುಂಡೇಶ್ವರಿ ದೇಗುಲದಲ್ಲಿಧಾರ್ಮಿಕ ಕಾರ್ಯಗಳು ಜರುಗಿದವು.

Vijaya Karnataka Web 9 Oct 2019, 2:57 pm
ಮುದಗಲ್‌ :ಪಟ್ಟಣ ಸಮೀಪದ ಬುದ್ದಿನ್ನಿ ಗ್ರಾಮದ ಆರಾಧ್ಯ ದೈವ ಚಾಮುಂಡೇಶ್ವರಿ ಜಾತ್ರೆಯು ಸಂಪನ್ನವಾಯಿತು. ಕಳೆದ ಒಂಭತ್ತು ದಿನಗಳಿಂದಲೂ ಗ್ರಾಮದ ಚಾಮುಂಡೇಶ್ವರಿ ದೇಗುಲದಲ್ಲಿಧಾರ್ಮಿಕ ಕಾರ್ಯಗಳು ಜರುಗಿದವು. ಮಂಗಳವಾರ ದಸರಾ ಹಬ್ಬದ ನಿಮಿತ್ತ ಪ್ರಮುಖ ಬೀದಿಗಳಲ್ಲಿ108ಕ್ಕೂ ಹೆಚ್ಚು ಪೂರ್ಣ ಕುಂಭಗಳ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿಗವಿಸಿದ್ದೇಶ್ವರ ಜಾಣಪದ ಕಲಾ ತಂಡ ಸಿಂಧನೂರು ಹಾಗೂ ಪುರವಂತಿಕೆ ಸೇವೆ ಜರುಗಿತು. ಈ ಸಂದರ್ಭ ದೇಗುಲದ ಆವರಣದಲ್ಲಿಭಕ್ತರು ಅಗ್ನಿ ಕುಂಡ ಹಾಯುವ ಮೂಲಕ ದೇವಿ ಕೃಪೆಗೆ ಪಾತ್ರರಾದರು. ಶೇಖರಗೌಡ ಗೊಂದಿ, ಚನ್ನಮಲ್ಲಪ್ಪ ಚಿ, ಬಸವರಾಜ ಗಸ್ತಿ, ಶರಣಪ್ಪ, ನಾಗಪ್ಪ, ಪಂಪನಗೌಡ, ಬೆಟ್ಟಪ್ಪ, ಚನ್ನಯ್ಯ ಸ್ವಾಮಿ ಇತರರು ಇದ್ದರು. ಬುದ್ದಿನ್ನಿ, ತೆರಿಭಾವಿ ಹಾಗೂ ಮಟ್ಟೂರು ಗ್ರಾಮದ ಭಕ್ತರು ಭಾಗಿಯಾಗಿದ್ದರು.
Vijaya Karnataka Web buddini chamundeshwari fair kumbha parade
ಬುದ್ದಿನ್ನಿ : ಚಾಮುಂಡೇಶ್ವರಿ ಜಾತ್ರೆ, ಕುಂಭಗಳ ಮೆರವಣಿ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ