ಆ್ಯಪ್ನಗರ

'ಶಾಲೆಯ ಮಾನ್ಯತೆ ರದ್ದುಗೊಳಿಸಿ'

ಗುರುಗುಂಟಾ ಗ್ರಾಮದಲ್ಲಿರುವ ಮೌಂಟ್‌ ಕಾರ್ಮಲ್‌ ಖಾಸಗಿ ಶಾಲೆಯಲ್ಲಿರಾಷ್ಟ್ರ ನಾಯಕರಿಗೆ ಅಪಮಾನ ನಡೆದಿದ್ದು, ಶಾಲೆಯ ವಿರುದ್ಧ ಕ್ರಮಕೈಗೊಂಡು ಮಾನ್ಯತೆಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌(ಎಬಿವಿಪಿ) ಸಂಘಟನೆಯವರು ಶಾಲೆ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.

Vijaya Karnataka 8 Sep 2019, 5:00 am
ಹಟ್ಟಿಚಿನ್ನದಗಣಿ: ಗುರುಗುಂಟಾ ಗ್ರಾಮದಲ್ಲಿರುವ ಮೌಂಟ್‌ ಕಾರ್ಮಲ್‌ ಖಾಸಗಿ ಶಾಲೆಯಲ್ಲಿರಾಷ್ಟ್ರ ನಾಯಕರಿಗೆ ಅಪಮಾನ ನಡೆದಿದ್ದು, ಶಾಲೆಯ ವಿರುದ್ಧ ಕ್ರಮಕೈಗೊಂಡು ಮಾನ್ಯತೆಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌(ಎಬಿವಿಪಿ) ಸಂಘಟನೆಯವರು ಶಾಲೆ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.
Vijaya Karnataka Web cancel school accreditation
'ಶಾಲೆಯ ಮಾನ್ಯತೆ ರದ್ದುಗೊಳಿಸಿ'


ಆ.15 ರಂದು ಶಾಲೆಯಲ್ಲಿನಡೆದ ಸ್ವಾತಂತ್ರೊತ್ರ್ಯೕತ್ಸವ ಸಮಾರಂಭದಲ್ಲಿಮಹಾತ್ಮ ಗಾಂಧಿ ಹಾಗೂ ಅಂಬೇಡ್ಕರ್‌ ಭಾವಚಿತ್ರಗಳಿಗೆ ಪೂಜೆ ಸಲ್ಲಿಸದೆ ಅಪಮಾನ ಮಾಡಿದ್ದರು. ಘಟನೆ ಖಂಡಿಸಿ ಅಂದೇ ಸಂಘಟನೆ ಹಾಗೂ ಇತರರು ಸೇರಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಹೋರಾಟ ನಡೆಸಲಾಗಿತ್ತು. ಅಂದು ಸ್ಥಳಕ್ಕೆ ಬಂದಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಇದುವರೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲವೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟದ ಎಚ್ಚರಿಕೆ: ಶಾಲೆಯಲ್ಲಿಮಹಾತ್ಮರಿಗೆ ಅಪಮಾನ ಮಾಡಿದ್ದಲ್ಲದೆ, ವಿದ್ಯಾರ್ಥಿಗಳಿಗೆ ಹಣೆಗೆ ತಿಲಕವಿಟ್ಟುಕೊಳ್ಳಬಾರದು, ಬಾಲಕಿಯರು ಬಳೆ ಹಾಕಬಾರದೆಂಬ ನಿರ್ಬಂಧಗಳನ್ನು ಹೇರುತ್ತಿದ್ದಾರೆ. ಇವರು ಶಾಲೆ ನಡೆಸುತ್ತಿದ್ದಾರೋ ಧರ್ಮ ಪ್ರಚಾರ ಕೈಗೊಳ್ಳುತ್ತಾರೋ ತಿಳಿಯದಾಗಿದೆ ಎಂದು ಗುಡುಗಿದರು. ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿಮುಂದಿನ ದಿನ ಉಗ್ರವಾದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆಂದು ಎಚ್ಚರಿಸಿ, ತಹಸೀಲ್ದಾರ್‌ ಚಾಮರಾಜ ಪಾಟೀಲ್‌ರಿಗೆ ಮನವಿ ಸಲ್ಲಿಸಿದರು.

ಎಬಿವಿಪಿ ಸಂಘಟನೆಯ ಜಿಲ್ಲಾಸಂಚಾಲಕ ಹನುಮಂತ ಅಂಬಿಗೇರ್‌, ಮುಖಂಡರಾದ ಹೇಮಂತ, ಅಮರೇಶ ಮರಾಠ್‌, ಸೋಮಶೇಖರ್‌, ರಮೇಶ ಮರಾಠ್‌, ನಾಗರಾಜ ಮರಾಠ್‌, ನಾಗರಾಜು, ಮಂಜುನಾಥ ಸೇರಿ ವಿದ್ಯಾರ್ಥಿಗಳಿದ್ದರು. ಪಿಎಸ್‌ಐ ಗಂಗಪ್ಪ ಬುರ್ಲಿ ಬಂದೋಬಸ್‌್ತ ಕೈಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ