ಆ್ಯಪ್ನಗರ

ನಾನಾ ಪಕ್ಷದ ಅಭ್ಯರ್ಥಿಗಳಿಂದ ಉಮೇದುವಾರಿಕೆ

ನಾನಾ ಪಕ್ಷದ ಅಭ್ಯರ್ಥಿಗಳು ಸೋಮವಾರ ಚುನಾವಣಾ ಅಧಿಕಾರಿ ಡಾ.ಚೇತನಾ ಪಾಟೀಲ ಅವರಿಗೆ ಲಿಂಗಸುಗೂರಿನ ಮಿನಿ ವಿಧಾನ ಸೌಧದಲ್ಲಿ ನಾಮಪತ್ರ ಸಲ್ಲಿಸಿದರು.

Vijaya Karnataka 24 Apr 2018, 5:00 am
ಮಸ್ಕಿ : ನಾನಾ ಪಕ್ಷದ ಅಭ್ಯರ್ಥಿಗಳು ಸೋಮವಾರ ಚುನಾವಣಾ ಅಧಿಕಾರಿ ಡಾ.ಚೇತನಾ ಪಾಟೀಲ ಅವರಿಗೆ ಲಿಂಗಸುಗೂರಿನ ಮಿನಿ ವಿಧಾನ ಸೌಧದಲ್ಲಿ ನಾಮಪತ್ರ ಸಲ್ಲಿಸಿದರು.
Vijaya Karnataka Web RAC-RCH23MSK01


ಕಾಂಗ್ರೆಸ್‌ ಪಕ್ಷ ದ ಅಭ್ಯರ್ಥಿ, ಶಾಸಕ ಪ್ರತಾಪಗೌಡ ಪಾಟೀಲ್‌ ಮೂರು ಪ್ರತಿ ನಾಮಪತ್ರ ಸಲ್ಲಿಸಿದರು. ಕೆಪಿಸಿಸಿ ಸದಸ್ಯ ಅಂದಾನಪ್ಪ ಗುಂಡಳ್ಳಿ, ಗ್ರಾಮೀಣ ಬ್ಲಾಕ್‌ ಅಧ್ಯಕ್ಷ ಬಸವರಾಜಸ್ವಾಮಿ ಹಸ್ಮಕಲ್‌, ಹನುಮಂತಪ್ಪ ಮುದ್ದಾಪೂರು, ತಾಪಂ ಸದಸ್ಯ ಈಶಪ್ಪ ದೇಸಾಯಿ, ಮಲ್ಲಿಕಾರ್ಜುನ ಬ್ಯಾಳಿ, ನಿರುಪಾದೆಪ್ಪ ವಕೀಲರು, ಡಾ.ಶಿವಶರಣಪ್ಪ ಇತ್ಲಿ ಇತರರಿದ್ದರು.

ಬಿಜೆಪಿ ಅಭ್ಯರ್ಥಿ ಆರ್‌.ಬಸನಗೌಡ ತುರ್ವಿಹಾಳ ಅವರು ಮೂರು ಪ್ರತಿ ನಾಮಪತ್ರಗಳನ್ನು ಸಲ್ಲಿಸಿದರು. ಕೇಂದ್ರ ಮಾಜಿ ಸಚಿವ ಬಿಜೆಪಿ ಹಿರಿಯ ಮುಖಂಡ ಬಸವರಾಜ ಪಾಟೀಲ್‌ ಅನ್ವರಿ, ಅಪ್ಪಾಜಿಗೌಡ ಕಾರ್ಲಕುಂಟಿ, ಬಸನಗೌಡ ಮುದಬಾಳ, ಶಿವನಗೌಡ ಇತರರಿದ್ದರು.

ಜೆಡಿಎಸ್‌ ಪಕ್ಷ ದ ಅಭ್ಯರ್ಥಿ ರಾಜಾ ಸೋಮನಾಥ ನಾಯಕ ನಾಮಪತ್ರ ಸಲ್ಲಿಸಿದರು. ಅಮರೇಶ ಹಂಚಿನಾಳ, ಮೃತ್ಯುಂಜಯಸ್ವಾಮಿ ಗೂಗೆಬಾಳ, ಶಿವಪ್ಪ ಇತರರಿದ್ದರು.

ಪಕ್ಷೇತರ ಅಭ್ಯರ್ಥಿ ರಾಣಿ ತಾರಾ ಮತ್ತು ಅಮರೇಶ ಮಾಟೂರು ನಾಮಪತ್ರ ಸಲ್ಲಿಸಿದರು.

ಮೂರು ಪಕ್ಷ ಗಳಿಂದ ಬೃಹತ್‌ ಮೆರವಣಿಗೆ ನಡೆಯಿತು.

ಸೇರ್ಪಡೆ: ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷ ದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಿಜೆಪಿಯ ಹಿರಿಯ ಮುಖಂಡ ಮಹಾದೇವಪ್ಪಗೌಡ ಪೊಲೀಸ್‌ ಪಾಟೀಲ್‌, ಸೋಮವಾರ ಕಾಂಗ್ರೆಸ್‌ ಪಕ್ಷ ದಿಂದ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಪುರಸಭೆ ಅಧ್ಯಕ್ಷ , ಉಪಾಧ್ಯಕ್ಷ , ಸದಸ್ಯರು ಹಾಗೂ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್‌ ಸೇರ್ಪಡೆಯಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ