ಆ್ಯಪ್ನಗರ

ಕಾರು ಪಲ್ಟಿ, ಶಿಕ್ಷಕರಿಬ್ಬರ ಸಾವು

ಸಮೀಪದ ಗುಂಡಸಾಗರ ಹೊರವಲಯದ ಚಕ್ಲಿಗುಡ್ಡ ಬಳಿ ಸೋಮವಾರ, ಕಾರು ಪಲ್ಟಿಯಾಗಿದ್ದು, ಶಿಕ್ಷಕರಿಬ್ಬರು ಮೃತಪಟ್ಟಿದ್ದಾರೆ.

Vijaya Karnataka 22 Jan 2020, 3:26 pm
ನಾಗರಹಾಳ (ರಾಯಚೂರು): ಸಮೀಪದ ಗುಂಡಸಾಗರ ಹೊರವಲಯದ ಚಕ್ಲಿಗುಡ್ಡ ಬಳಿ ಸೋಮವಾರ, ಕಾರು ಪಲ್ಟಿಯಾಗಿದ್ದು, ಶಿಕ್ಷಕರಿಬ್ಬರು ಮೃತಪಟ್ಟಿದ್ದಾರೆ.
Vijaya Karnataka Web car collision death of two teachers
ಕಾರು ಪಲ್ಟಿ, ಶಿಕ್ಷಕರಿಬ್ಬರ ಸಾವು


ಸಜ್ಜಲಗುಡ್ಡ ಗ್ರಾಮದ ಸರಕಾರಿ ಪ್ರೌಶಾಲೆಯ ಶಿಕ್ಷಕರಾದ ಚಂದಾಲಿಂಗ ಕಕ್ಕೇರಾ(30)ಹಾಗೂ ರವಿ ಕುಲಕರ್ಣಿ (45)ಮೃತರು. ಚಂದಾಲಿಂಗ ಅವರು, ಮೂಲತಃ ಯಾದಗಿರಿ ಜಿಲ್ಲೆಸುರಪುರ ತಾಲೂಕಿನ ವಾಗಣಗೇರಿ ಗ್ರಾಮದವರು, ರವಿ ಕುಲಕರ್ಣಿ ಅವರು ಬಾಗಲಕೋಟ ಜಿಲ್ಲೆಮುದ್ದೇಬಿಹಾಳ ತಾಲೂಕಿನ ಬೂದಿಹಾಳ ಗ್ರಾಮದವರು. ಲಿಂಗಸುಗೂರಿನಿಂದ ಸಜ್ಜಲಗುಡ್ಡದ ಸರಕಾರಿ ಪ್ರೌಢಶಾಲೆಯಲ್ಲಿಬೆಳಗಿನ ವಿಶೇಷ ತರಗತಿಗೆ ಹಾಜರಾಗಲು ಶಿಕ್ಷಕರಾದ ಶಿವರುದ್ರಯ್ಯ ಹಿರೇಮಠ, ಚಂದಾಲಿಂಗ ಕಕ್ಕೇರಾ ಹಾಗೂ ರವಿ ಕುಲಕರ್ಣಿ ಕಾರಿನಲ್ಲಿಪ್ರಯಾಣಿಸುತ್ತಿದ್ದರು.

ಚಾಲಕನ ನಿಯಂತ್ರಣ ತಪ್ಪಿದ ಕಾರು, ರಸ್ತೆ ಬದಿಯ ಸಿಡಿಗೆ ಡಿಕ್ಕಿಹೊಡೆದು ಪಲ್ಟಿಯಾಗಿದೆ. ತೀವ್ರ ಗಾಯಗೊಂಡಿದ್ದ ಚಂದಾಲಿಂಗ ಕಕ್ಕೆರಾ, ಲಿಂಗಸುಗೂರು ಸರಕಾರಿ ಆಸ್ಪತ್ರೆಯಲ್ಲಿಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರೆ, ಮತ್ತೊಬ್ಬ ಶಿಕ್ಷಕ ರವಿ ಕುಲಕರ್ಣಿ, ಬಾಗಲಕೋಟ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಹುನಗುಂದ ಬಳಿ ಅಸುನೀಗಿದ್ದಾರೆ. ಲಿಂಗಸುಗೂರು ನಿವಾಸಿ ಶಿಕ್ಷಕ ಶಿವರುದ್ರಯ್ಯ ಅವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟ ಆಸ್ಪತ್ರೆಯಲ್ಲಿಚಿಕಿತ್ಸೆಗೆ ದಾಖಲಿಸಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ