ಆ್ಯಪ್ನಗರ

ಬಾಲ್ಯ ವಿವಾಹ ತಡೆದ ಅಧಿಕಾರಿಗಳು

ತಾಲೂಕಿನ ಜಲದುರ್ಗ ಗ್ರಾಮದಲ್ಲಿ ಶುಕ್ರವಾರ ನಡೆಯಲಿದ್ದ ಬಾಲ್ಯ ವಿವಾಹ ತಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

Vijaya Karnataka 24 Aug 2019, 5:00 am
ಲಿಂಗಸುಗೂರು (ರಾಯಚೂರು) : ತಾಲೂಕಿನ ಜಲದುರ್ಗ ಗ್ರಾಮದಲ್ಲಿ ಶುಕ್ರವಾರ ನಡೆಯಲಿದ್ದ ಬಾಲ್ಯ ವಿವಾಹ ತಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
Vijaya Karnataka Web child marriage
ಬಾಲ್ಯ ವಿವಾಹ ತಡೆದ ಅಧಿಕಾರಿಗಳು


ಬಾಲ್ಯ ವಿವಾಹ ಕುರಿತು ಸಿಕ್ಕ ಮಾಹಿತಿ ಆಧರಿಸಿ, ಸಿಡಿಪಿಒ ಪ್ರೇಮಮೂರ್ತಿ ಹಾಗೂ ಪೋಲಿಸರು ಗ್ರಾಮಕ್ಕೆ ಭೇಟಿನೀಡಿದ್ದರು. ತಾಲೂಕಿನ ಗೊರೇಬಾಳ ತಾಂಡಾ-2ರ 18 ವರ್ಷದ ಯುವಕನ ಜತೆ 13ವಯಸ್ಸಿನ ಅಪ್ರಾಪ್ತೆಯ ಮದುವೆ ಮಾಡಲು ಪಾಲಕರು ನಿಶ್ಚಯಿಸಿದ್ದರು. ಇಬ್ಬರೂ ಅಪ್ರಾಪ್ತರಾಗಿದ್ದು, ಕಾನೂನಿಗೆ ವಿರುದ್ಧವಾಗಿದೆ. ವಿವಾಹ ಮಾಡದಂತೆ ಉಭಯ ಮಕ್ಕಳ ಪಾಲಕರಿಗೆ ಅಧಿಕಾರಿಗಳು ತಾಕೀತುಮಾಡಿದರು. ಬಾಲಕಿಯನ್ನು ರಾಯಚೂರಿನ ಮಕ್ಕಳ ಕಲ್ಯಾಣ ಸಮಿತಿಗೆ ಕಳುಹಿಸಲಾಗಿದೆ ಎಂದು ಸಿಡಿಪಿಒ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ