ಆ್ಯಪ್ನಗರ

ಬಿಜೆಪಿ ವರಸೆ ನೋಡಿದರೆ ನಿವೃತ್ತಿ ಬೇಡವೆನಿಸುತ್ತಿದೆ: ಸಿಎಂ

'ನಿವೃತ್ತಿ ಅಂಚಿನಲ್ಲಿದ್ದರೂ ನಿವೃತ್ತಿಯಾಗುವುದಿಲ್ಲ. ಇದೇ ನನಗೆ ಕೊನೆಯ ಚುನಾವಣೆ ಎಂದು ಕಳೆದ ಬಾರಿ ಹೇಳಿದ್ದೆ. ಬಿಜೆಪಿಯವರ ಕೋಮುವಾದ ನೋಡಿ ಮತ್ತೆ ನಿಲ್ಲಬೇಕು ಅನಿಸಿದೆ,'

Vijaya Karnataka Web 16 Dec 2017, 11:51 am
ರಾಯಚೂರು: 'ನಾನೂ ನಿವೃತ್ತಿ ಅಂಚಿನಲ್ಲಿದ್ದರೂ ನಿವೃತ್ತಿಯಾಗುವುದಿಲ್ಲ. ಇದೇ ನನಗೆ ಕೊನೆಯ ಚುನಾವಣೆ ಎಂದು ಕಳೆದ ಬಾರಿ ಹೇಳಿದ್ದೆ. ಬಿಜೆಪಿಯವರ ಕೋಮುವಾದ ನೋಡಿ ಮತ್ತೆ ನಿಲ್ಲಬೇಕು ಅನಿಸಿದೆ. ಚಾಮುಂಡೇಶ್ವರಿಯಲ್ಲಿ ನಿಲ್ಲುತ್ತೇನೆ. ನಾನು ಎಲ್ಲಿ ನಿಂತರೂ ಗೆಲ್ಲುತ್ತೇನೆ. 20 ಕ್ಷೇತ್ರಗಳಿವೆ, ಅಲ್ಲಿ ಎಲ್ಲೆ ನಿಂತರೂ ಗೆಲ್ಲುತ್ತೇನೆ,' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Vijaya Karnataka Web cm siddaramaiah criticise against bjp
ಬಿಜೆಪಿ ವರಸೆ ನೋಡಿದರೆ ನಿವೃತ್ತಿ ಬೇಡವೆನಿಸುತ್ತಿದೆ: ಸಿಎಂ


ರಾಹುಲ್ ಗಾಂಧಿ ಗುಜರಾತ್ ಗೆ ಹೋದ ಮೇಲೆ ಹೊಸ ಅಲೆ ಆರಂಭವಾಗಿದೆ. ಅವರ ಮೇಲೆ ಯುವಕರು ಅಪಾರ ನಿರೀಕ್ಷೆ ಇಟ್ಟಿದ್ದಾರೆ. ಎಕ್ಸಿಟ್ ಪೋಲ್ ಏನೇ ಹೇಳಿದರೂ ಗೆಲ್ಲುವ ವಿಶ್ವಾಸ ನಮಗೆ ಇದೆ. ರಾಹುಲ್ ಗಾಂಧಿ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಯಾರೂ ಅಪಸ್ವರ ಎತ್ತಿಲ್ಲ. ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ ಎಂದು ಅವರು ಹೇಳಿದರು.

ರಾಯಚೂರಿನಲ್ಲಿ ಮಾತನಾಡಿದ ಸಿಎಂ, ರಾಹುಲ್‌ ಗಾಂಧಿ ಅವರಿಗೆ ದೊಡ್ಡ ಭವಿಷ್ಯವಿದೆ. ಇಡೀ ದೇಶದಲ್ಲಿ ಶಕ್ತಿಯುತವಾಗಿ ಪಕ್ಷ ಬೆಳೆಯುತ್ತದೆ ಅನ್ನುವ ನಂಬಿಕೆಯಿದೆ. ಸೋನಿಯಾ ಗಾಂಧಿ ಅಧ್ಯಕ್ಷಗಿರಿಗೆ ನಿವೃತ್ತಿ ಘೋಷಿಸಿದ್ದಾರೆ ಹೊರತು ರಾಜಕೀಯ ನಿವೃತ್ತಿಅಲ್ಲ. ಅವರು ಜವಾಬ್ದಾರಿ ಹಸ್ತಾಂತರಿಸಿದ್ದಾರಯೇ ವಿನಾ ಸಕ್ರಿಯ ರಾಜಕಾರಣದಿಂದ ದೂರವಾಗಿಲ್ಲ ಎಂದರು.

ವರ್ತೂರ್ ಪ್ರಕಾಶ್ ಒಬ್ಬ ಲೀಡರ್ ಅಲ್ಲ, ಅವರ ಬಗ್ಗೆ ಮಾತನಾಡುವುದಿಲ್ಲ. ರಾಮಲಿಂಗಾರೆಡ್ಡಿ ನಾಲಾಯಕ್ ಅಲ್ಲ, ಜವಾಬ್ದಾರಿಯುತ ಮಂತ್ರಿ. ಚೆನ್ನಾಗಿ ನಿಭಾಯಿಸುತ್ತಿದ್ದಾರೆ . ಅನಂತಕುಮಾರ್ ಹೆಗಡೆ ರೌಡಿಗಳ ರೀತಿ ಮಾತನಾಡುತ್ತಾರೆ. ಅವರು ರಾಜಕೀಯದಲ್ಲಿ ಇರಲು ಲಾಯಕ್ಕಿಲ್ಲ. ಏನು ತಪರಾಕಿ ಹಾಕುತ್ತಾರೆ, ಕಾನೂನು ಇಲ್ಲವೇ ಎಂದು ಸಿಎಂ ಪ್ರಶ್ನಿಸಿದರು. ಯಾರೂ ಬೇಜವಾಬ್ದಾರಿಯಾಗಿ ಮಾತನಾಡಬಾರದು. ಯಡಿಯೂರಪ್ಪ ಈಶ್ವರಪ್ಪ ಅವರಿಗೆ ಆದರ್ಶಗಳೇ ಇಲ್ಲ. ಅವರ ಬಗ್ಗೆ ಮಾತನಾಡುವುದೇ ಸಮಯ ವ್ಯರ್ಥ ಎಂದು ಸಿಎಂ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ