ಆ್ಯಪ್ನಗರ

ಡಿಕ್ಕಿ, ಸಿಮೆಂಟ್ ಟ್ಯಾಂಕರ್ ಭಸ್ಮ: ಇಬ್ಬರ ಸಾವು

ತಾಲೂಕಿನ ಮಣ್ಣಿಕೇರಿಕ್ಯಾಂಪ್ ಹತ್ತಿರ ಶನಿವಾರ ರಾತ್ರಿ ಎರಡು ಲಾರಿಗಳ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಲಾರಿ ಚಾಲಕರಿಬ್ಬರೂ ಮೃತಪಟ್ಟಿದ್ದಾರೆ.

Vijaya Karnataka 2 Jul 2018, 12:00 am
ಸಿಂಧನೂರು: ತಾಲೂಕಿನ ಮಣ್ಣಿಕೇರಿಕ್ಯಾಂಪ್ ಹತ್ತಿರ ಶನಿವಾರ ರಾತ್ರಿ ಎರಡು ಲಾರಿಗಳ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಲಾರಿ ಚಾಲಕರಿಬ್ಬರೂ ಮೃತಪಟ್ಟಿದ್ದಾರೆ.
Vijaya Karnataka Web RAC-RCH01SND2
ಸಿಂಧನೂರು ತಾಲೂಕಿನ ಮಣ್ಣಿಕೇರಿಕ್ಯಾಂಪ್ ಹತ್ತಿರ ಶನಿವಾರ ರಾತ್ರಿ ಅಪಘಾತದ ವೇಳೆ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಸಿಮೆಂಟ್ ಟ್ಯಾಂಕರ್ ಲಾರಿ ಸುಟ್ಟಿದೆ.


ಕಲಬುರುಗಿ ಜಿಲ್ಲೆಯ ವಾಡಿ ಗ್ರಾಮದ ಮಹ್ಮದ್ ಎಜಾಜ್ (35), ಮಹಾರಾಷ್ಟ್ರ ಮೂಲದ ಯೋಗೀಶ(33) ಮತರು.

ಸಿಮೆಂಟ್ ಟ್ಯಾಂಕರ್ ಲಾರಿ ಮತ್ತು ಜಲ್ಲಿನ ಕಲ್ಲಿನ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆ ವೇಳೆ ಲಾರಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಒಬ್ಬ ಚಾಲಕ ಸುಟ್ಟು ಕರಕಲಾಗಿದ್ದಾನೆ. ಇನ್ನೊಂದು ಲಾರಿಯಲ್ಲಿದ್ದ ಚಾಲಕ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ಘಟನೆ ವೇಳೆ ಬೆಂಕಿ ಕಂಡ ಸ್ಥಳೀಯರು ಆತಂಕಕ್ಕೆ ಒಳಗಾದರು. ಟ್ಯಾಂಕರ್ ಲಾರಿಯಾಗಿದ್ದರಿಂದ ಯಾರೊಬ್ಬರೂ ಹತ್ತಿರ ಹೋಗದೇ ದೂರ ಉಳಿದರು. ಒಂದು ಲಾರಿಯಲ್ಲಿದ್ದ ಕ್ಲೀನರ್ ಮಾರ್ಗ ನಡುವೆ ಜವಳಗೇರಾದಲ್ಲಿ ಇಳಿದುಕೊಂಡಿದ್ದರಿಂದ ಬಚಾವ್ ಆಗಿದ್ದಾರೆ. ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾತ್ರಿ ಕಾರ್ಯಾಚರಣೆ; ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದರು. ರಾತ್ರಿ 1 ಗಂಟೆಯ ವೇಳೆಗೆ ಜೆಸಿಬಿ ಬಳಸಿ ಲಾರಿ ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ