ಆ್ಯಪ್ನಗರ

‘ದೇಶದ್ರೋಹಿಗಳಿಗೆ ಕಾಂಗ್ರೆಸ್‌ ಬೆಂಬಲ’

ಹುಬ್ಬಳ್ಳಿಯಲ್ಲಿಕಾಶ್ಮೀರಿ ವಿದ್ಯಾರ್ಥಿಗಳ ಬಂಧನ ವಿಷಯ ಇರಿಸಿಕೊಂಡು ಕಾಂಗ್ರೆಸ್‌ನವರು ಸಭಾತ್ಯಾಗ ಮಾಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್‌ ನಾಯಕರು ದೇಶದ್ರೋಹಿಗಳಿಗೆ ಬೆಂಬಲಿಸುತ್ತಲೇ ಬಂದಿದ್ದಾರೆ ಎಂದು ಜಿಲ್ಲಾಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಟೀಕಿಸಿದರು.

Vijaya Karnataka 20 Feb 2020, 3:41 pm
ರಾಯಚೂರು: ಹುಬ್ಬಳ್ಳಿಯಲ್ಲಿಕಾಶ್ಮೀರಿ ವಿದ್ಯಾರ್ಥಿಗಳ ಬಂಧನ ವಿಷಯ ಇರಿಸಿಕೊಂಡು ಕಾಂಗ್ರೆಸ್‌ನವರು ಸಭಾತ್ಯಾಗ ಮಾಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್‌ ನಾಯಕರು ದೇಶದ್ರೋಹಿಗಳಿಗೆ ಬೆಂಬಲಿಸುತ್ತಲೇ ಬಂದಿದ್ದಾರೆ ಎಂದು ಜಿಲ್ಲಾಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಟೀಕಿಸಿದರು.
Vijaya Karnataka Web congress support for traitors
‘ದೇಶದ್ರೋಹಿಗಳಿಗೆ ಕಾಂಗ್ರೆಸ್‌ ಬೆಂಬಲ’


ಅವರು ನಗರದಲ್ಲಿಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿಮಾತನಾಡಿದರು. ಅಧಿವೇಶನದಲ್ಲಿನೆರೆ ಪರಿಹಾರ ಕಾರ್ಯ ಸೇರಿದಂತೆ ಅನೇಕ ವಿಷಯಗಳು ಚರ್ಚೆಯಾಗಬೇಕಿದೆ. ಆದರೆ, ಕಾಲಹರಣ ಮಾಡುವ ಉದ್ದೇಶದಿಂದ ಪ್ರತಿಪಕ್ಷಗಳು ಗೊಂದಲ ಸೃಷ್ಟಿಸುವ ಕಾರ್ಯ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದೇಶದ್ರೋಹಿಗಳಿಗೆ ಕಾಂಗ್ರೆಸ್‌ನವರಂತೆ ನಾವು ಎಂದಿಗೂ ಕ್ಷಮಿಸಲ್ಲ. ಉಗ್ರ ಕಸಬ್‌ ವಿಚಾರದಲ್ಲೂಕಾಂಗ್ರೆಸ್‌ ರಾಜಕಾರಣ ಮಾಡಿತ್ತು. ಈಗಲೂ ಕಾಂಗ್ರೆಸ್‌ ಪಕ್ಷವು ಪಾಕಿಸ್ತಾನದ ಪರ ತನ್ನ ಧೋರಣೆ ಮುಂದುವರಿಸಿದೆ ಎಂದು ದೂಷಿಸಿದರು.

ದುರುದ್ದೇಶಪೂರಿತ: ಕಾಂಗ್ರೆಸ್‌ ಪಕ್ಷವು ಮೊದಲಿನಿಂದಲೂ ಬೇರೆ ಪಕ್ಷಗಳಿಗೆ ಸರಾಗವಾಗಿ ಆಡಳಿತ ನಡೆಸಲು ಅವಕಾಶ ನೀಡಿದ ಉದಾಹರಣೆಗಳಿಲ್ಲ. ಈಗ ರಾಜ್ಯದಲ್ಲೂಅದೇ ಚಾಳಿ ಮುಂದುವರಿಸಿದೆ. ಹಿಂದೆ ಕೇಂದ್ರದಲ್ಲಿಕಾಂಗ್ರೆಸ್‌ ಸರಕಾರವು ಅಧಿಕಾರದಲ್ಲಿದ್ದಾಗ ಬಳ್ಳಾರಿ ಯ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಮಾಜಿ ಸಚಿವ ಜನಾರ್ದನ ರೆಡ್ಡಿ, ನಾಗೇಂದ್ರ ಹಾಗೂ ತಮ್ಮ ವಿರುದ್ಧ ವಿನಾ ಕಾರಣ ಆರೋಪ ಹೊರಿಸಲಾಗಿತ್ತು ಎಂದರು.

ಅರಣ್ಯ ಖಾತೆಯನ್ನು ಆನಂದಸಿಂಗ್‌ ಅವರಿಗೆ ನೀಡಿರುವ ಬಗ್ಗೆ ಕಾಂಗ್ರೆಸ್‌ ಕಾರಣವಿಲ್ಲದೇ ಹುಯಿಲೆಬ್ಬಿಸುತ್ತಿದೆ. ಆನಂದಸಿಂಗ್‌ ವಿರುದ್ಧ ಯಾವುದೇ ಆರೋಪಗಳಿಲ್ಲದಿದ್ದರೂ ಕಾಂಗ್ರೆಸ್‌ ಪಕ್ಷದ ನಾಯಕರು ಈ ಬಗ್ಗೆ ಗೊಂದಲ ಎಬ್ಬಿಸಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

ನೆರೆ ಪರಿಹಾರ: ಕೇಂದ್ರ ಸರಕಾರವು ರಾಜ್ಯಕ್ಕೆ ನೆರೆ ಪರಿಹಾರ ನೀಡಿಕೆಯಲ್ಲಿಯಾವುದೇ ಅನ್ಯಾಯ ಮಾಡಿಲ್ಲ. ಎನ್‌ ಡಿಆರ್‌ಎಫ್‌ ಮಾನದಂಡಗಳ ಪ್ರಕಾರವೇ ರಾಜ್ಯಕ್ಕೆ ಪರಿಹಾರದ ಹಣ ಬಿಡುಗಡೆಯಾಗಿದೆ ಎಂದರು. ರಾಜ್ಯದ ಸಿಎಂ ಜತೆ ಈಚೆಗೆ ಸಭೆ ನಡೆಸಿದ್ದು ಶೀಘ್ರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಬಿಡುಗಡೆಯಾಗಲಿದೆ. ಬಜೆಟ್‌ನಲ್ಲಿಯೂ ಸಹ ಆರೋಗ್ಯ ಇಲಾಖೆಗೆ ಅಗತ್ಯ ಅನುದಾನ ದೊರೆಯುವ ನಿರೀಕ್ಷೆಯಿದೆ ಎಂದು ಹೇಳಿದರು. ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆ ಕಾರ್ಯಕ್ರಮಗಳಿಗೆ ಸರಕಾರದಿಂದ 15ಕೋಟಿ ರೂ.ಈಚೆಗೆ ಒದಗಿಸಿದ್ದು, ಸರಕಾರ ಈ ಸಮಸ್ಯೆಗೆ ಪರಿಹಾರ ದೊರಕಿಸುವ ಕಾರ್ಯ ಮಾಡಲಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ