ಆ್ಯಪ್ನಗರ

ಕನಕದಾಸರಿಂದ ಸಮಾಜದ ಪರಿವರ್ತನೆ

ಶತಮಾನದ ಹಿಂದೆಯೇ ಕನಕದಾಸರು ಸಮಾಜದ ಸುಧಾರಣೆಗೆ ಮುಂದಾಗುವ ಮೂಲಕ ಇಂದಿಗೂ ಎಲ್ಲರ ಮನದಲ್ಲಿ ಉಳಿದಿದ್ದಾರೆ ಎಂದು ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ಹೇಳಿದರು.

Vijaya Karnataka 13 Jun 2018, 5:00 am
ಸಿಂಧನೂರು : ಶತಮಾನದ ಹಿಂದೆಯೇ ಕನಕದಾಸರು ಸಮಾಜದ ಸುಧಾರಣೆಗೆ ಮುಂದಾಗುವ ಮೂಲಕ ಇಂದಿಗೂ ಎಲ್ಲರ ಮನದಲ್ಲಿ ಉಳಿದಿದ್ದಾರೆ ಎಂದು ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ಹೇಳಿದರು.
Vijaya Karnataka Web RAC-RCH12SND5


ನಗರದ ಕನಕದಾಸ ಶಿಕ್ಷ ಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು ಆಶ್ರಯದಲ್ಲಿ ಸೋಮವಾರ ಆರಂಭಗೊಂಡ ಎರಡು ದಿನದ ಕನಕ ಓದು ಅರಿವಿನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿನ ಅನಿಷ್ಟ ಪದ್ದತಿಗಳನ್ನು ಹೋಗಲಾಡಿಸಿ, ತುಳಿತಕ್ಕೊಳಗಾದವರ ಧ್ವನಿಯಾಗುವ ಕೆಲಸವನ್ನು ಕನಕದಾಸರು ಮಾಡಿದರು. ಅವರ ಕೀರ್ತನೆಗಳು ಇಂದಿಗೂ ಸಮಾಜದ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದರು.

ಮಾಜಿ ಸಂಸದ ಹಾಗು ಕನಕದಾಸ ಶಿಕ್ಷ ಣ ಸಂಸ್ಥೆ ಅಧ್ಯಕ್ಷ ಕೆ.ವಿರೂಪಾಕ್ಷ ಪ್ಪ, ಶಿಬಿರ ನಿರ್ದೇಶಕ ಡಾ. ಬಿದರಿ ಚಂದ್ರಭಾಗ ಸೇಡಂ, ಶಿಬಿರದ ಸಂಚಾಲಕ ಕೆ.ಬಿ. ಜೂಡಿ, ಕನಕದಾಸ ಶಿಕ್ಷ ಣ ಸಂಸ್ಥೆಯ ಆಡಳಿತಾಧಿಕಾರಿ ಎಂ.ದೊಡ್ಡಬಸವರಾಜ, ಪ್ರಾಂಶುಪಾಲ ರಾಮಂಬಾಬು, ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್‌.ಕಂಬಳಿ, ಮುಖ್ಯಗುರು ಚಿದಾನಂದಯ್ಯ ಗುರುವಿನ್‌, ಶಾಶ್ವತಯ್ಯಸ್ವಾಮಿ ಮುಕ್ಕುಂದಿಮಠ, ಡಾ. ಚನ್ನಬಸ್ಸಪ್ಪ ಚಿಲ್ಕರಾಗಿ ಕೊಪ್ಪಳ, ಡಾ.ಮಮ್ತಾಜ್‌ ಬೇಗಂ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ