ಆ್ಯಪ್ನಗರ

ರಾಯಚೂರಿನಲ್ಲಿ ಕೊರೊನಾ ಭೀತಿ, ಕೃಷಿ ವಿವಿ ಪಾರ್ಕ್ ಬಂದ್

ಕೊರೊನಾ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಕೃಷಿ ವಿವಿ ಆವರಣದಲ್ಲಿರುವ ಸಾರ್ವಜನಿಕರ ವಾಯು ವಿಹಾರ ಕೇಂದ್ರಕ್ಕೆ ನಿಷೇಧ ಹೇರಿದೆ.

Vijaya Karnataka Web 18 Mar 2020, 9:27 am
ರಾಯಚೂರು: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ರಾಯಚೂರಿನಲ್ಲಿ ವಾಯುವಿಹಾರಕ್ಕೂ ಬ್ರೇಕ್ ಹಾಕಲಾಗಿದೆ.
Vijaya Karnataka Web raichur


ನಗರದ ರಾಯಚೂರು ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿರುವ ಸಾರ್ವಜನಿಕರ ವಾಯು ವಿಹಾರ ಕೇಂದ್ರಕ್ಕೆ ವಿವಿ ಆಡಳಿತ ಮಂಡಳಿ ನಿಷೇಧ ಹೇರಿದೆ.

ಮುಂಜಾಗ್ರತೆ ಕ್ರಮವಾಗಿ ಸರಕಾರದ ಸೂಚನೆಯಂತೆ ಮಾ. 28ರ ವರೆಗೆ ವಾಯು ವಿಹಾರಕ್ಕೆ ಅವಕಾಶವಿಲ್ಲ‌ ಎಂದು ವಿವಿ ಗೇಟ್ ಗೆ ಬ್ಯಾನರ್ ಹಾಕಿ ಪ್ರಕಟಣೆ ಹೊರಡಿಸಲಾಗಿದೆ.

ನಗರದಲ್ಲಿ ನೂರಾರು ಸಂಖ್ಯೆಯ ಸಾರ್ವಜನಿಕರು ದಿನವೂ ವಾಯು ವಿಹಾರಕ್ಕೆ ವಿವಿಯ ಪಾರ್ಕ್ ಗೆ ಧಾವಿಸುತ್ತಿದ್ದರು. ಜನರ ಒಂದೆಡೆ ಸೇರುವಿಕೆ ತಡೆಗೆ ಈ ನಿಷೇಧದ ಕ್ರಮ ತೆಗೆದುಕೊಳ್ಳಲಾಗಿದೆ.

ಬಸ್ ಗಳು ಖಾಲಿ ಖಾಲಿ, 28ಲಕ್ಷ ರೂ. ನಷ್ಟ:

ಕೊರೊನಾ ಸೋಂಕು ಹರಡುವ ಹಿನ್ನೆಲೆ ಬಸ್‌ಗಳಲ್ಲಿ ಪ್ರಯಾಣಿಸಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದು, ಕಳೆದ 6 ದಿನಗಳಲ್ಲಿಕೆಎಸ್‌ಆರ್‌ಟಿಸಿ ರಾಯಚೂರು ವಿಭಾಗಕ್ಕೆ ಬರೋಬ್ಬರಿ 28ಲಕ್ಷ ರೂ. ನಷ್ಟವಾಗಿದೆ.

ಕೊರೊನಾ ಹರಡುವ ಭೀತಿಯಲ್ಲಿರುವ ಜನರು ದೂರದ ಊರುಗಳಿಗೆ ಪ್ರಯಾಣಿಸಲು ಅಕ್ಷರಶಃ ಹಿಂದೇಟು ಹಾಕಿದ್ದಾರೆ. ಅದರಲ್ಲೂಕಲಬುರ್ಗಿಯಲ್ಲಿಕೊರೊನಾ ಸೋಂಕು ದೃಢಪಟ್ಟ ನಂತರ ಜನರು ಬಸ್‌ನಲ್ಲಿಸಂಚರಿಸಲು ಬೇಡ ಎನ್ನುತ್ತಿದ್ದಾರೆ. ಅನಗತ್ಯ ಪ್ರಯಾಣಗಳೆಲ್ಲವನ್ನೂ ಸದ್ಯಕ್ಕೆ ಮುಂದೂಡಿರುವ ಜನರು ಬಸ್‌ನಲ್ಲಿತೆರಳಲು ಹಿಂಜರಿಯುತ್ತಿದ್ದಾರೆ.

ಇದರಿಂದಾಗಿ ಸಾರಿಗೆ ಸಂಸ್ಥೆಗೆ ಸೇರಬೇಕಿದ್ದ ಆದಾಯದಲ್ಲಿಖೋತಾ ಆಗಿದೆ. ಬಸ್‌ ಪ್ರಯಾಣದಿಂದ ದೂರವುಳಿಯುತ್ತಿರುವ ಕಾರಣ ಬಸ್‌ ನಿಲ್ದಾಣ ಬಿಕೋ ಎನ್ನುತ್ತಿದೆ. ಬಸ್‌ಗಳಲ್ಲಿನಿಗದಿತ ಸೀಟುಗಳು ಕೂಡ ಭರ್ತಿಯಾಗುತ್ತಿಲ್ಲ. ಪ್ರಯಾಣಿಕರಿಲ್ಲದ ಕಾರಣ ವಿಭಾಗದಿಂದ ದಿನವೊಂದಕ್ಕೆ ಸರಾಸರಿ 30 ಬಸ್‌ಗಳ ಸಂಚಾರ ರದ್ದಾಗುತ್ತಿದೆ.

ದಿನಕ್ಕೆ 100 ಟ್ರಿಪ್‌ ಬಸ್‌ ಸಂಚಾರ ಕಡಿತವಾಗುತ್ತಿದೆ. ಯುಗಾದಿ ಹಬ್ಬದ ಹಿನ್ನೆಲೆ ಶ್ರೀಶೈಲಕ್ಕೆ ವಿಶೇಷ ಬಸ್‌ ಓಡಿಸಲಾಗುತ್ತಿತ್ತು. ಪ್ರತಿ ವರ್ಷ ಯುಗಾದಿ ಸಂದರ್ಭ ಪ್ರತಿನಿತ್ಯ 55 ಬಸ್‌ಗಳನ್ನು ಶ್ರೀಶೈಲಕ್ಕೆ ಓಡಿಸಲಾಗುತ್ತಿತ್ತು. ಆದರೆ ಕೊರೊನಾ

ಹರಡುವ ಭೀತಿ ಹಿನ್ನೆಲೆ ಕೇವಲ 15 ಬಸ್‌ಗಳನ್ನು ಮಾತ್ರ ಓಡಿಸಲಾಗುತ್ತಿದೆ. ಜಿಲ್ಲೆಯ ಒಟ್ಟು 8 ಡಿಪೊಗಳಲ್ಲಿಒಟ್ಟು 660 ಬಸ್‌ಗಳು ಸಂಚರಿಸುತ್ತಿವೆ. ಒಟ್ಟಿನಲ್ಲಿ ಕೊರೊನಾ ವೈರಸ್‌ ಸಾರಿಗೆ ಸಂಸ್ಥೆಗೆ ಸೇರಬೇಕಿದ್ದ ಆದಾಯ ಕೈತಪ್ಪಿ ನಷ್ಟದ ಹಾದಿ ಹಿಡಿಸಿದೆ.

ಸೋಂಕು ಪತ್ತೆಯಾಗಿಲ್ಲ:
ಕೊರೊನಾ ವೈರಸ್‌ ಸೋಂಕು ಹರಡದಂತೆ ಜಿಲ್ಲಾಡಳಿತ ಮತ್ತು ಜಿಲ್ಲಾಪೊಲೀಸ್‌ ಇಲಾಖೆ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಪೊಲೀಸ್‌ ಅಧೀಕ್ಷಕರು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಹೊರ ದೇಶದಿಂದ ಬಂದ ವ್ಯಕ್ತಿಗಳನ್ನು ತಪಾಸಣೆಗೊಳಪಡಿಸಲಾಗುತ್ತಿದೆ. ಶಂಕಿತ ವ್ಯಕ್ತಿಗಳನ್ನು ನಗರದ ರಿಮ್ಸ್‌ ಬೋಧಕ ಆಸ್ಪತ್ರೆಯ ಐಸೊಲೇಷನ್‌ ಕೇಂದ್ರದಲ್ಲಿರಿಸಲಾಗುತ್ತಿದೆ. ರಾಯಚೂರು ಜಿಲ್ಲೆಯಲ್ಲಿಈವರೆಗೂ ಯಾವುದೇ ವ್ಯಕ್ತಿಯಲ್ಲಿಕೊರೊನಾ ಸೋಂಕು ಪತ್ತೆಯಾಗಿರುವುದಿಲ್ಲ. ಆದರೂ ಸಾಮಾಜಿಕ ಜಾಲತಾಣಗಳಲ್ಲಿಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ಹಬ್ಬಿಸುವ ಮೂಲಕ ಸಾರ್ವಜನಿಕರಲ್ಲಿಆತಂಕ ಉಂಟು ಮಾಡಿದ್ದಾರೆ. ಅಂತವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಇಂತಹ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು. ಯಾರೂ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಬಾರದೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ