ಆ್ಯಪ್ನಗರ

ಕ್ವಾರೆಂಟೈನ್ ಉಲ್ಲಂಘನೆ: ಕೆಪಿಸಿ ಅಧಿಕಾರಿ, ಪತ್ನಿ, ಮಗನ ವಿರುದ್ಧ ಪ್ರಕರಣ ದಾಖಲು!

​​ಹೋಂ ಕ್ವಾರೆಂಟೈನ್ ಇದ್ದರೂ ಹೊರಗಡೆ ತಿರುಗಾಡಿದ ಕಾರಣಕ್ಕೆ ಕೆಪಿಸಿಯ ಹಿರಿಯ ಅಧಿಕಾರಿ, ಆತನ ಪತ್ನಿ, ಮಗ ಹಾಗೂ ಮಗನ ಸ್ನೇಹಿತೆಯ ವಿರುದ್ದ ಪ್ರಕರಣ ದಾಖಲಾಗಿದೆ. ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vijaya Karnataka Web 3 Apr 2020, 11:48 am
ರಾಯಚೂರು: ದೇಶಾದ್ಯಂತ ಕೊರೊನಾ ವೈರಸ್‌ ವ್ಯಾಪಕವಾಗಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ವರ್ತಿಸುವುದು ಅನಿವಾರ್ಯ. ಹೀಗಿರುವಾಗ ಸರಕಾರಿ ಅಧಿಕಾರಿಗಳೇ ನಿಯಮ ಉಲ್ಲಂಘಿಸಿದ್ದು, ಅವರ ಕುಟುಂಬದ ಮೇಲೆ ಪ್ರಕರಣ ದಾಖಲಿಸಲಾಗಿದೆ.
Vijaya Karnataka Web home Quarantine


ಹೋಂ ಕ್ವಾರೆಂಟೈನ್ ಇದ್ದರೂ ಹೊರಗಡೆ ತಿರುಗಾಡಿದ ಕಾರಣಕ್ಕೆ ಕೆಪಿಸಿಯ ಹಿರಿಯ ಅಧಿಕಾರಿ, ಆತನ ಪತ್ನಿ, ಮಗ ಹಾಗೂ ಮಗನ ಸ್ನೇಹಿತೆಯ ವಿರುದ್ದ ಪ್ರಕರಣ ದಾಖಲಾಗಿದೆ. ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈಟಿಪಿಎಸ್ ಸುಪರಿಟಿಡೆಂಟ್ ಎಂಜಿನಿಯರ್ ಎಸ್. ಆರ್. ಕಬಾಡೆ, ಕಬಾಡೆಯವರ ಪತ್ನಿ ಆರ್ ಟಿಪಿಎಸ್ ನ ಅಕೌಂಟ್ ಆಫೀಸರ್ ಅನುಪಮಾ, ಅವರ ಮಗ ಪ್ರಿತಮ್ ಕಬಾಡೆ ಹಾಗೂ ಮಗನ ಸ್ನೇಹಿತೆ ಡಾ. ಚಿನ್ಮಯಿ ಎಂಬುವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ನವಮಂಗಳೂರು ಬಂದರಿಗೆ ಬಂದ ಚೀನಾ ಹಡಗು: ಮಂಗಳೂರಿಗರಿಗೆ ಆತಂಕ!

ಡಾ. ಚಿನ್ಮಯಿ ಜರ್ಮನಿಯಿಂದ ಬೆಂಗಳೂರು ಮೂಲಕ ಶಕ್ತಿನಗರಕ್ಕೆ ಆಗಮಿಸಿ ಮಾಹಿತಿ ನೀಡದೇ ಶಕ್ತಿನಗರದ ಕಬಾಡೆ ಅವರ ಮನೆಯಲ್ಲಿ ತಂಗಿದ್ದರು. ಅವರನ್ನು ಮಾರ್ಚ್‌ 14 ರಿಂದ ಮಾರ್ಚ 29 ರವರೆಗೆ ಹೋಂ ಕ್ವಾರೆಂಟೈನ್ ‌ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಅವರನ್ನು ಮನೆಯಲ್ಲಿರಿಸಿಕೊಂಡಿದ್ದ ಕಬಾಡೆ ಕುಟುಂಬದವರು ವೈಟಿಪಿಎಸ್ ಹಾಗು ಆರ್ ಟಿಪಿಎಸ್ ನಲ್ಲಿ ಕೆಲಸ‌ ಮಾಡಿದ್ದಾರೆ.

ಅಗತ್ಯ ವಸ್ತುಗಳಿಗೆ ತೊಡಕಿಲ್ಲ, ಕೃಷಿ ಕಾರ್ಯಕ್ಕೆ ಅಡ್ಡಿಯಿಲ್ಲ: ಯಡಿಯೂರಪ್ಪ

ಕೊರೊನಾ ತಡೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ದೇವಸೂಗೂರು ಉಪ ತಹಸೀಲ್ದಾರರಿಂದ ಶಕ್ತಿನಗರ ಪೊಲೀಸ್ ಠಾಣೆ ದೂರು ನೀಡಲಾಗಿತ್ತು. ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ.

ಜರ್ಮನಿಯಿಂದ ಬಂದು ಶಕ್ತಿನಗರದಲ್ಲಿ ವಾಸವಾಗಿದ್ದ ಡಾ.ಚಿನ್ಮಯಿ ಅವರ ರಕ್ತ ಮತ್ತು ಗಂಟಲಿನ ದ್ರವದ ಮಾದರಿ ಪರೀಕ್ಷೆಗೆ ಕಳಿಸಲಾಗಿತ್ತು. ಗುರುವಾರವಷ್ಟೇ ವರದಿ ನೆಗೆಟಿವ್ ಬಂದಿತ್ತು. ಆದರೆ, ಹೋಮ್ ಕ್ವಾರಂಟೈನ್ ನಲ್ಲಿ ಇರಿಸಿದ್ದರು. ನಿರ್ಲಕ್ಷ್ಯ ವಹಿಸಿದ್ದಕ್ಜೆ ಕೇಸ್ ದಾಖಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ