ಆ್ಯಪ್ನಗರ

ಏನೇ ತಂತ್ರ ಹೂಡಿದರೂ ಫಲಿಸಲ್ಲ: ಡಿಕೆಶಿ ವ್ಯಂಗ್ಯ

ಬಿಜೆಪಿ ಏನೇ ತಂತ್ರ ರೂಪಿಸಿದರೂ ಫಲಿಸುವುದಿಲ್ಲ. ನಮ್ಮ ಒಗ್ಗಟ್ಟಿನಲ್ಲಿ ಬಲವಿದೆ. ಸರಕಾರ ಬೀಳಿಸುವ ಯತ್ನದಲ್ಲಿರುವ ಬಿಜೆಪಿಗೆ ಒಳ್ಳೆದಾಗಲಿ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಟೀಕಿಸಿದರು.

Vijaya Karnataka 18 Sep 2018, 7:58 am
ದೇವದುರ್ಗ: ಬಿಜೆಪಿ ಏನೇ ತಂತ್ರ ರೂಪಿಸಿದರೂ ಫಲಿಸುವುದಿಲ್ಲ. ನಮ್ಮ ಒಗ್ಗಟ್ಟಿನಲ್ಲಿ ಬಲವಿದೆ. ಸರಕಾರ ಬೀಳಿಸುವ ಯತ್ನದಲ್ಲಿರುವ ಬಿಜೆಪಿಗೆ ಒಳ್ಳೆದಾಗಲಿ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಟೀಕಿಸಿದರು.
Vijaya Karnataka Web DKS 1


ಸರಕಾರ ಬೀಳುವ ಭಯ ಶುರುವಾಗಿದ್ದರಿಂದ ಡಿಕೆಶಿ ದೇವರ ಮೊರೆ ಹೋಗಿದ್ದಾರೆಂಬ ಮಾಜಿ ಸಿಎಂ ಬಿ.ಎಸ್.ವೈ ಹೇಳಿಕೆ ಬಗ್ಗೆ ಸೋಮವಾರ ಇಲ್ಲಿನ ಪ್ರವಾಸಿಮಂದಿರದಲ್ಲಿ ಹೀಗೆಂದು ಪ್ರತಿಕ್ರಿಯಿಸಿದರು. ದೇವರ ಮೇಲೆ ಪ್ರತಿಯೊಬ್ಬರಿಗೆ ನಂಬಿಕೆಯಿರುತ್ತದೆ. ದೇವರ ಮೇಲೆ ನಂಬಿಕೆ ಇರುವುದರಿಂದಲೇ ತಾನೇ ಅವರು‘ಯಡಿಯೂರಪ್ಪ ’ ಎಂದು ಹೆಸರಿಟ್ಟುಕೊಂಡಿರುವುದು ಎಂದು ಕುಟುಕಿದರು. ಜಾರಕಿಹೊಳಿ ಬ್ರದರ್ಸ್ ಅಸಮಾಧಾನದ ಕುರಿತು ಕೇಳಿದಾಗ, ನೇರವಾಗಿ ಪ್ರತಿಕ್ರಿಯಿಸಲಿಲ್ಲ. ಆದರೆ, ‘‘ ಜಾರಕಿಹೊಳಿ ಕುಟುಂಬದವರ ಸಂಬಂಧಿಯಾಗಿರುವ ಸಂಸದ ಬಿ.ವಿ.ನಾಯಕ ಅವರ ಒತ್ತಾಯದ ಮೇರೆಗೆ ರಾಯಚೂರಿಗೆ ಭೇಟಿ ನೀಡಿರುವೆ’’ ಎಂದರು. ಸಂಸದ ಬಿ.ವಿ.ನಾಯಕ, ಜಿಲ್ಲಾಧ್ಯಕ್ಷ ರಾಮಣ್ಣ ಕೆ.ಇರಬಗೇರಾ, ಎ.ರಾಜಶೇಖರ ನಾಯಕ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ