ಆ್ಯಪ್ನಗರ

'ಕುಮಟಳ್ಳಿಗೆ ಅನ್ಯಾಯ ಆಗಲ್ಲ': 'ಸಾಹುಕಾರ'ನ ಸಮಾಧಾನಕ್ಕೆ ಕಾರಜೋಳ ಯತ್ನ

ಶಾಸಕ ಮಹೇಶ್‌ ಕುಮಟಳ್ಳಿಗೆ ಅನ್ಯಾಯವಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ್‌ ಕಾರಜೋಳ ಸಿಂಧನೂರಿನಲ್ಲಿ ಹೇಳಿದ್ದಾರೆ. ​​ಶಾಸಕ ಮಹೇಶ್‌ ಕುಮಟಳ್ಳಿಗೆ ಅನ್ಯಾಯವಾದರೇ ರಾಜೀನಾಮೆ ನೀಡುತ್ತೇನೆ ಎಂದು ಸಚಿವ ರಮೇಶ್‌ ಜಾರಕಿಹೊಳಿ ಹೇಳಿಕೆ ನೀಡಿದ ಬೆನ್ನಲ್ಲೇ ಡಿಸಿಎಂ ಈ ಹೇಳಿಕೆ ನೀಡಿ ಸಚಿವರಿಗೆ ಸಮಧಾನಪಡಿಸೋ ಕೆಲಸ ಮಾಡಿದ್ದಾರೆ.

Vijaya Karnataka Web 23 Feb 2020, 11:37 am
ರಾಯಚೂರು: ಶಾಸಕ ಮಹೇಶ್‌ ಕುಮಟಳ್ಳಿಗೆ ಅನ್ಯಾಯವಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ್‌ ಕಾರಜೋಳ ಸಿಂಧನೂರಿನಲ್ಲಿ ಹೇಳಿದ್ದಾರೆ. ಶಾಸಕ ಮಹೇಶ್‌ ಕುಮಟಳ್ಳಿಗೆ ಅನ್ಯಾಯವಾದರೇ ರಾಜೀನಾಮೆ ನೀಡುತ್ತೇನೆ ಎಂದು ಸಚಿವ ರಮೇಶ್‌ ಜಾರಕಿಹೊಳಿ ಹೇಳಿಕೆ ನೀಡಿದ ಬೆನ್ನಲ್ಲೇ ಡಿಸಿಎಂ ಈ ಹೇಳಿಕೆ ನೀಡಿ ಸಚಿವರಿಗೆ ಸಮಧಾನಪಡಿಸೋ ಕೆಲಸ ಮಾಡಿದ್ದಾರೆ.
Vijaya Karnataka Web GOVIND KARJOL.


ಶಾಸಕ ಮಹೇಶ ಕುಮಟಳ್ಳಿಗೆ ಅನ್ಯಾಯ ಆಗಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕುಮಟಳ್ಳಿ ಅವರಿಗೆ ಸೂಕ್ತ ಸ್ಥಾನಮಾನ ನೀಡಲಿದ್ದಾರೆ ಎಂಬ ವಿಶ್ವಾಸ ಇದೆ. ಸಚಿವ ರಮೇಶ್‌ ಜಾರಕಿಹೊಳಿ ಅಸಮಾಧಾನಗೊಂಡಿಲ್ಲ, ಸರ್ಕಾರ ಸುಭದ್ರವಾಗಿದೆ ಎಂದು ಹೇಳಿದರು.

ಮಹೇಶ್‌ ಕುಮಠಳ್ಳಿಗೆ ನನ್ನಿಂದ ಅನ್ಯಾಯವಾದಲ್ಲಿ ರಾಜೀನಾಮೆ;ಸರಕಾರಕ್ಕೆ ಬೆದರಿಕೆ ಹಾಕಿಲ್ಲ:ರಮೇಶ್‌ ಜಾರಕಿಹೊಳಿ

ಮಹೇಶ್‌ ಕುಮಠಳ್ಳಿಗೆ ನನ್ನಿಂದ ಅನ್ಯಾಯವಾದಲ್ಲಿ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು. ಕುಮಠಳ್ಳಿಯಿಂದ ಬಿಜೆಪಿ ಸರಕಾರ ಬಂದಿದೆ. ಅವರಿಗೆ ಉನ್ನತ ಹುದ್ದೆ ಸಿಗಲಿದೆ. ಅವರಿಗೆ ಅನ್ಯಾಯ ಮಾಡಲ್ಲ. ನನ್ನಿಂದ ಅನ್ಯಾಯವಾಗಿದೆ ಎಂದು ಕುಮಠಳ್ಳಿ ಬಾಯಿಂದ ಒಂದು ಮಾತು ಬಂದರೂ ನನ್ನ ಸಚಿವ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ನಿನ್ನೆ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದ್ದರು.

ತವರು ಜಿಲ್ಲೆ ಉಸ್ತುವಾರಿ ಮೇಲೆ ಹಲವರ ಕಣ್ಣು, ಬಿಎಸ್‌ವೈಗೆ ಹೊಸ ತಲೆನೋವು

ನಂತರ, ಅದೇ ದೊಡ್ಡ ಸುದ್ದಿಯಾದ ಹಿನ್ನೆಲೆ ಸರಕಾರಕ್ಕೆ ಯಾವುದೇ ರೀತಿ ಬೆದರಿಕೆ ಹಾಕಿಲ್ಲ, ನನ್ನಿಂದ ಅನ್ಯಾಯವಾಗಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದೆ, ಅದನ್ನೇ ದೊಡ್ಡ ಸುದ್ದಿ ಮಾಡೋ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ