ಸಾಲ ಮನ್ನಾ:ಅರಕೇರಾ ಬ್ಯಾಂಕಿಗೆ ತಹಸೀಲ್ದಾರ್ ಭೇಟಿ
ರೈತರ ಸಾಲ ಮನ್ನಾ ಮಾಡುವ ಕುರಿತು ರಾಜ್ಯ ಸರಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಶಿವಶರಣಪ್ಪ ಕಟ್ಟೊಳ್ಳಿ ಮಂಗಳವಾರ ಅರಕೇರಾ ಗ್ರಾಮದ ಪಿಜಿಬಿ ಹಾಗೂ ಎಸ್ಬಿಐ ಬ್ಯಾಂಕ್ಗೆ ಮಂಗಳವಾರ ಭೇಟಿ ನೀಡಿ ವ್ಯವಸ್ಥಾಪಕರಿಂದ ಮಾಹಿತಿ ಕಲೆ ಹಾಕಿದರು.
Vijaya Karnataka 19 Dec 2018, 5:00 am
ಅರಕೇರಾ : ರೈತರ ಸಾಲ ಮನ್ನಾ ಮಾಡುವ ಕುರಿತು ರಾಜ್ಯ ಸರಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಶಿವಶರಣಪ್ಪ ಕಟ್ಟೊಳ್ಳಿ ಮಂಗಳವಾರ ಅರಕೇರಾ ಗ್ರಾಮದ ಪಿಜಿಬಿ ಹಾಗೂ ಎಸ್ಬಿಐ ಬ್ಯಾಂಕ್ಗೆ ಮಂಗಳವಾರ ಭೇಟಿ ನೀಡಿ ವ್ಯವಸ್ಥಾಪಕರಿಂದ ಮಾಹಿತಿ ಕಲೆ ಹಾಕಿದರು. ಅರಕೇರಾ ಗ್ರಾಮದ ಪಿಜಿಪಿ ಬ್ಯಾಂಕ್ನಲ್ಲಿ 2,309 ಸಾಲಮನ್ನಾಕ್ಕೆ ಅರ್ಹ ರೈತರಿದ್ದಾರೆ. ಎಚ್ಡಿಎಚ್ ಬ್ಯಾಂಕಿನಲ್ಲಿ 20 ಜನ ರೈತರು ಸಾಲ ಮನ್ನಾ ಅರ್ಹತೆ ಹೊಂದಿದ್ದಾರೆ. ಪಿಜಿಪಿ ಬ್ಯಾಂಕ್ನ 900 ರೈತರಿಗೆ ಟೋಕನ್ ನೀಡಲಾಗಿದೆ. ತ್ವರಿತಗತಿಯಲ್ಲಿ ಅಪ್ಲೋಡ್ ಮಾಡಲು ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. 37 ಅರ್ಹ ಫಲಾನುಭವಿಗಳ ನೋಂದಣಿ ಕಾರ್ಯ ಮುಗಿದಿದೆ. ಪಿಜಿಬಿ ವ್ಯವಸ್ಥಾಪಕ ಸುಭಾಶಚಂದ್ರ, ಎಸ್ಬಿಐ ಬ್ಯಾಂಕ್ ವ್ಯವಸ್ಥಾಪಕ ಹೃತಿಕಾ ಪ್ರಸಾದ, ಕಂದಾಯ ನಿರೀಕ್ಷ ಕ ಭೀಮರಾಯ ನಾಯಕ, ವಿಎ ಮಹಿಬೂಬ್, ಅರುಣ್, ಸುರೇಂದ್ರ ಪಾಟೀಲ್, ಬಾಲಾಜಿ, ವಿರೂಪಾಕ್ಷಿ ಸ್ವಾಮಿ ಇದ್ದರು.