ಆ್ಯಪ್ನಗರ

ಅಮಾನತಿಗೆ ಒತ್ತಾಯಿಸಿದವರಿಂದ ರದ್ದತಿಗೆ ಆಗ್ರಹ

ಸಮೀಪದ ಪೈದೊಡ್ಡಿ ಗಾಮ ಪಂಚಾಯಿತಿ ವ್ಯಾಪ್ತಿಯ ಟಣಮನಕಲ್‌ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲವೆಂದು ಗ್ರಾಮಸ್ಥರು ಪ್ರತಿಭಟಿಸಿದ ಹಿನ್ನಲೆಯಲ್ಲಿ ಮುಖ್ಯಗುರುವನ್ನು ಅಮಾನತು ಮಾಡಲಾಗಿದೆ.

Vijaya Karnataka 27 Jul 2018, 5:00 am
ಹಟ್ಟಿಚಿನ್ನದಗಣಿ : ಸಮೀಪದ ಪೈದೊಡ್ಡಿ ಗಾಮ ಪಂಚಾಯಿತಿ ವ್ಯಾಪ್ತಿಯ ಟಣಮನಕಲ್‌ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲವೆಂದು ಗ್ರಾಮಸ್ಥರು ಪ್ರತಿಭಟಿಸಿದ ಹಿನ್ನಲೆಯಲ್ಲಿ ಮುಖ್ಯಗುರುವನ್ನು ಅಮಾನತು ಮಾಡಲಾಗಿದೆ. ಇದೀಗ ಅಮಾನತು ಆದೇಶವನ್ನು ರದ್ದು ಪಡಿಸಬೇಕೆಂದು ಅದೇ ಗ್ರಾಮಸ್ಥರೇ ಒತ್ತಾಯಿಸಿದ್ದಾರೆ.
Vijaya Karnataka Web RAC-RCH26HGM P3


ಶಾಲೆಯ ಬಿಸಿಯೂಟದ ಅವ್ಯವಸ್ಥೆ ಖಂಡಿಸಿ ಗ್ರಾಮಸ್ಥರು ಜುಲೈ7 ರಂದು ಪ್ರತಿಭಟಿಸಿದ್ದರು. ಜು.9 ರಂದು ಶಾಲೆಗೆ ಕ್ಷೇತ್ರ ಶಿಕ್ಷ ಣಾಧಿಕಾರಿ ಚಂದ್ರಶೇಖರ ಭಂಡಾರಿ, ತಾಲೂಕು ಬಿಸಿಯೂಟದ ಅಧಿಕಾರಿ ಚಂದ್ರಶೇಖರ್‌ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿದ್ದರು. ನಂತರ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.

ಮುಖ್ಯ ಶಿಕ್ಷ ಕ ಬಸವರಾಜ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿಗಳು, ಜುಲೈ 23 ರಂದು ಆದೇಶಿಸಿದ್ದರು. ಈ ಅಮಾನತು ಆದೇಶದ ಸುದ್ದಿ ಹರಡುತ್ತಿದ್ದಂತೆ ಗ್ರಾಮಸ್ಥರು, ಜು.24ರಂದು ಮುಖ್ಯಗುರುವಿನ ಅಮಾನತು ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ, ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ್ದಾರೆ.

ಬಿಇಒ ಚಂದ್ರಶೇಖರ ಭಂಡಾರಿ ಸೇರಿ ಇತರ ಅಧಿಕಾರಿಗಳು ಶಾಲೆಗೆ ಬುಧವಾರ ಭೇಟಿ ನೀಡಿ ಗ್ರಾಮಸ್ಥರ ಜತೆ ಸಮಾಲೋಚಿಸಿದ್ದಾರೆ. ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಒಂದು ಬಾರಿ ಅಚಾತುರ್ಯ ನಡೆದಿದೆ. ಮುಂದೆ ಹೀಗಾಗಲು ಬಿಡುವುದಿಲ್ಲ. ತಪ್ಪು ಮಾಡಿದ ಶಿಕ್ಷ ಕರಿಗೆ ಬುದ್ಧಿ ಹೇಳುವುದು ಬಿಟ್ಟು ಅಮಾನತಿಗೆ ಶಿಫಾರಸು ಮಾಡಬಾರದೆಂದು ಒತ್ತಾಯಿಸಿದರು.

ಗ್ರಾಮಸ್ಥರ ಜತೆ ಮಾತನಾಡಿದ ಕ್ಷೇತ್ರ ಶಿಕ್ಷ ಣಾಧಿಕಾರಿ ಚಂದ್ರಶೇಖರ್‌ ಭಂಡಾರಿ, ಮುಖ್ಯ ಶಿಕ್ಷ ಕರನ್ನು ಅಮಾನತು ಮಾಡಿಲ್ಲ. ಜಿಲ್ಲಾಧಿಕಾರಿಗಳ ಕಚೇರಿಗೆ ಏನೋ ತಪ್ಪು ಸಂದೇಶ ರವಾನೆಯಾಗಿದೆ. ಮುಖ್ಯ ಶಿಕ್ಷ ಕರನ್ನು ಪುನಃ ಕರ್ತವ್ಯ ನಿರ್ವಹಿಸಲು ಒಂದು ವಾರದೊಳಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ