ಆ್ಯಪ್ನಗರ

ಸರಕಾರಿ ನೌಕರರ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹ

ಎನ್‌ಪಿಎಸ್‌ ರದ್ದತಿ ಹಾಗೂ ಖಾಲಿ ಹುದ್ದೆಗಳ ಭರ್ತಿ ಸೇರಿ ರಾಜ್ಯ ಸರಕಾರಿ ನೌಕರರ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದಿಂದ ಮಂಗಳವಾರ ಡಿಸಿ ಕಚೇರಿ ಸ್ಥಾನಿಕ ಅಧಿಕಾರಿ ಮೂಲಕ ಸಿಎಂಗೆ ಮನವಿ ರವಾನಿಸಲಾಯಿತು.

Vijaya Karnataka 13 Jun 2018, 5:00 am
ರಾಯಚೂರು : ಎನ್‌ಪಿಎಸ್‌ ರದ್ದತಿ ಹಾಗೂ ಖಾಲಿ ಹುದ್ದೆಗಳ ಭರ್ತಿ ಸೇರಿ ರಾಜ್ಯ ಸರಕಾರಿ ನೌಕರರ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದಿಂದ ಮಂಗಳವಾರ ಡಿಸಿ ಕಚೇರಿ ಸ್ಥಾನಿಕ ಅಧಿಕಾರಿ ಮೂಲಕ ಸಿಎಂಗೆ ಮನವಿ ರವಾನಿಸಲಾಯಿತು.
Vijaya Karnataka Web demand for government employees demand requirements
ಸರಕಾರಿ ನೌಕರರ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹ


2004 ರಿಂದ 2016ಏಪ್ರಿಲ್‌ ವರೆಗೆ ಸೇವೆಗೆ ಸೇರಿರುವ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ ರದ್ದುಪಡಿಸಿ, ಎನ್‌ಪಿಎಸ್‌ ಪಿಂಚಣಿ ವ್ಯವಸ್ಥೆ ಜಾರಿಗೆ ತಂದಿರುವುದು ನೌಕರರಿಗೆ ಬೇಸರ ತರಿಸಿದೆ. 6.75 ಲಕ್ಷ ಹುದ್ದೆಗಳ ಪೈಕಿ 2.50ಲಕ್ಷ ಹುದ್ದೆಗಳು ಖಾಲಿ ಇದ್ದು ನೇಮಕಾತಿ ನಡೆಸಿಲ್ಲ. ಸರಕಾರಿ ಇಲಾಖೆಗಳಲ್ಲಿ ಖಾಸಗೀಕರಣ ನಿಲ್ಲಿಸಬೇಕು, ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು. ನಾನಾ ಇಲಾಖೆಗಳು ಮತ್ತು ನಿಗಮ ಮಂಡಳಿಗಳಲ್ಲಿ ಲಕ್ಷಾಂತರ ಯುವಜನತೆಯನ್ನು ಕನಿಷ್ಠ ವೇತನ ಮತ್ತು ಸೌಲಭ್ಯಗಳು ಮತ್ತು ಸೇವಾ ನಿಯಮಗಳನ್ನು ಜಾರಿ ಮಾಡಬೇಕು.

6ನೇ ವೇತನ ಆಯೋಗ ಶಿಫಾರಸ್ಸುಗಳನ್ನು ಅಂಗೀಕರಿಸಿ ಆದೇಶ ಹೊರಡಿಸಿದ್ದು, ಮೊದಲಿಗೆ ಕೇಂದ್ರ ಸರಕಾರ ನೌಕರರಿಗೆ ಸರಿಸಮನಾದ ವೇತನ ಸೌಲಭ್ಯಗಳನ್ನು ರಾಜ್ಯ ಸರಕಾರಿ ನೌಕರರಿಗೂ ನೀಡಬೇಕೆಂದು ನಿವೃತ್ತ ಹೈಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ವೇತನ ಆಯೋಗ ರಚಿಸುವುದು ಮತ್ತು ಏಪ್ರಿಲ್‌ 2017ರಿಂದ ಅನ್ವಯವಾಗುವಂತೆ ಶೇ.30ರಷ್ಟು ಮಧ್ಯಂತ ಪರಿಹಾರ ನೀಡಬೇಕೆಂಬುದು ನೌಕರರ ಬೇಡಿಕೆಯಾಗಿತ್ತು. ಆದರೆ ಇದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ರಾಜ್ಯ ಸರಕಾರ ಪರವಿರುವ ಅಧಿಕಾರಿಗಳ ನೇತೃತ್ವದಲ್ಲಿ ವೇತನ ಆಯೋಗ ರಚಿಸಿದ್ದು, ಅದರ ಶಿಫಾರಸ್ಸುಗಳ ಕುರಿತು ಪೂರ್ಣ ಮಾಹಿತಿ ಈಗಾಗಲೇ ಒಂದು ವರ್ಷ ಕಳೆದರೂ ನೌಕರರಿಗೆ ದೊರೆತೇ ಇಲ್ಲ.

ಹೀಗಾಗಿ ಸಿಎಂ ಕುಮಾರಸ್ವಾಮಿ ಅವರು ಕೇಂದ್ರಕ್ಕೆ ಸರಿಸಮಾನ ವೇತನ ಸೌಲಭ್ಯ ನೀಡುವುದಾಗಿ ಮತ್ತು ಎನ್‌ಪಿಎಸ್‌ ಯೋಜನೆ ರದ್ಧುಗೊಳಿಸಿ ನಿಶ್ಚಿತ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದ್ದು, ಚುನಾವಣಾ ಪೂರ್ವ ಭರವಸೆಯಂತೆ ಕೇಂದ್ರ ಸರಕಾರಿ ನೌಕರರಿಗೆ ಸರಿಸಮಾನ ವೇತನ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು.

ಒಕ್ಕೂಟದ ಪದಾಧಿಕಾರಿಗಳಾದ ತಾಯಪ್ಪ ಮರ್ಚಟಹಾಳ, ನಾರಾಯಣ, ಮಹಾಂತೇಶ ಬಿರಾದಾರ, ರಾಮಪ್ಪ ಗದಾರ್‌, ವಿಜಯ ಕುಮಾರ, ರಮೇಶ ಸೇರಿದಂತೆ ಇನ್ನಿತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ