ಆ್ಯಪ್ನಗರ

ಹನಿ ನೀರಾವರಿ ಪರಿಕರ ವಿತರಣೆಗೆ ಆಗ್ರಹ

ಹನಿ ನೀರಾವರಿ ಯೋಜನೆಗಾಗಿ ರೈತರು ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಇನ್ನೂ ಪರಿಕರ ವಿತರಿಸಿಲ್ಲ, ಕೂಡಲೇ ವಿತರಿಸುವಂತೆ ಆಗ್ರಹಿಸಿ ರೈತ ಸಂಘದ ಮುಖಂಡರು ಕೃಷಿ ಇಲಾಖೆ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿದರು.

Vijaya Karnataka 29 May 2019, 5:00 am
ಲಿಂಗಸುಗೂರು : ಹನಿ ನೀರಾವರಿ ಯೋಜನೆಗಾಗಿ ರೈತರು ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಇನ್ನೂ ಪರಿಕರ ವಿತರಿಸಿಲ್ಲ, ಕೂಡಲೇ ವಿತರಿಸುವಂತೆ ಆಗ್ರಹಿಸಿ ರೈತ ಸಂಘದ ಮುಖಂಡರು ಕೃಷಿ ಇಲಾಖೆ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿದರು.
Vijaya Karnataka Web RAC-RCH28LNG01


ಹನಿ ನೀರಾವರಿ ಯೋಜನೆ ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಹನಿ ನೀರಾವರಿ ಯೋಜನೆ ಲಾಭ ಪಡೆಯಲು ರೈತರು ಮುಂದಾಗಿದ್ದು, ಈ ಹಿನ್ನಲೆಯಲ್ಲಿ ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ಹಲವು ರೈತರು ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದಿದೆ. ಆದರೆ ಇಲ್ಲಿವರೆಗೂ ಸ್ಪಿಂಕ್ಲರ್‌, ಪೈಪ್‌ಗಳು ವಿತರಿಸಿಲ್ಲ. ಇದಕ್ಕಾಗಿ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಪ್ರತಿನಿತ್ಯ ಅಲೆದಾಡುವಂತಾಗಿದೆ.

ಮಸ್ಕಿ ಹೋಬಳಿಯಲ್ಲಿ 85ಕ್ಕೂ ಅಧಿಕ ರೈತರು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ರೈತರು 1995 ರೂ. ವಂತಿಗೆ ಕೂಡ ಪಾವತಿಸಿದ್ದಾರೆ. ಆದರೆ ಅಲ್ಲಿನ ಕೃಷಿ ಅಧಿಕಾರಿಗಳು ವಂತಿಗೆಗಿಂತ ಒಂದು ಸಾವಿರ ರೂ. ಹೆಚ್ಚು ಹಣ ಪಡೆಯುತ್ತಿದ್ದಾರೆ. ಸರ್ಕಾರದ ಸಹಾಯಧನ ರೈತರಿಗೆ ಸಿಗುತ್ತಿಲ್ಲ. ಇದರ ಬದಲಾಗಿ ಕಂಪನಿ ಹಾಗೂ ಅಧಿಕಾರಿಗಳ ಪಾಲಾಗಿದೆ. ನಾಲ್ಕು ಹೋಬಳಿಗಳಲ್ಲಿ ಪರಿಕರ ವಿತರಣೆಯಲ್ಲಿ ಆಗುತ್ತಿರುವ ವಿಳಂಬದಿಂದ ರೈತರು ಪರದಾಡುತ್ತಿದ್ದಾರೆ. ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಈಗಲಾದರೂ ಪರಿಕರ ವಿತರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಮುಂಗಾರು ಆರಂಭವಾದರೂ ಬಿತ್ತನೆ ಬೀಜ ದಾಸ್ತಾನು ಮಾಡದೇ ಕೃಷಿ ಇಲಾಖೆ ಕಾಲಹರಣ ಮಾಡುತ್ತಿದೆ. ಗೊಬ್ಬರ ಅಂಗಡಿಗಳ ಮೇಲೆ ಕೃಷಿ ಇಲಾಖೆ ನಿಗಾ ಇಲ್ಲದಂತಾಗಿದೆ. ಅಂಗಡಿಗಳಲ್ಲಿ ದರ ನಾಮಫಲಕ ಇಲ್ಲದಂತಾಗಿದೆ. ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರಗಿಸಬೇಕು ಎಂದು ರೈತ ಮುಖಂಡ ಅಮರಣ್ಣ ಗುಡಿಹಾಳ ಆಗ್ರಹಿಸಿದರು.

ರೈತ ಸಂಘದ ಅಧ್ಯಕ್ಷ ವೀರನಗೌಡ, ಮಲ್ಲಣ್ಣ ಗೌಡೂರು, ಸಿದ್ದೇಶ ಗೌಡೂರು, ಕುಪ್ಪಣ್ಣ ಗೋನವಾಟ್ಲ್‌ ಹಾಗೂ ಇನ್ನಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ